<p><strong>ಚಿಕ್ಕಬಳ್ಳಾಪುರ: </strong>ಚಿಂತಾಮಣಿ ನಗರದ ಕನಂಪಲ್ಲಿಯ ನಿವಾಸಿ ಡಾ.ಎನ್.ವಿವೇಕ್ ರೆಡ್ಡಿ ಅವರು 2019ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (ಯುಪಿಎಸ್ಸಿ) 485ನೇ ರ್ಯಾಂಕ್ ಪಡೆದು, ಮೂರನೇ ಪ್ರಯತ್ನದಲ್ಲಿ ತಮ್ಮ ಕನಸು ಈಡೇರಿಸಿಕೊಂಡಿದ್ದಾರೆ.</p>.<p>ವೈದ್ಯಕೀಯ ಶಿಕ್ಷಣ ಪದವೀಧರರಾಗಿರುವ ವಿವೇಕ್ ರೆಡ್ಡಿ ಅವರು ಶಿಕ್ಷಕರಾಗಿರುವ ತಂದೆಯೇ ತಮ್ಮ ಐಎಎಸ್ ಕನಸಿಗೆ ನೀರೇರೆದವರು ಎಂದು ಸ್ಮರಿಸಿಕೊಂಡರು.</p>.<p>ಐಎಎಸ್ ತರಬೇತಿಗಾಗಿ ದೆಹಲಿಗೆ ಹೋಗಿ ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ 8 ತಿಂಗಳಿಗೆ ವಾಪಾಸಾಗಿ ಬೆಂಗಳೂರಿನಲ್ಲೇ ಓದಿ, ಪರೀಕ್ಷೆ ಎದುರಿಸಿ ಯಶಸ್ಸು ಪಡೆದವರು ವಿವೇಕ್.</p>.<p>ಈ ಹಿಂದೆ ಮಂಡ್ಯ ವೈದ್ಯಕೀಯ ಶಿಕ್ಷಣ ಕಾಲೇಜಿನಲ್ಲಿ ಕೆಲಸ ಮಾಡಿರುವ ಇವರು, ಕಳೆದ 10 ತಿಂಗಳಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕಿರಿಯ ನಿವಾಸಿ ವೈಧ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.</p>.<p>‘ಯಾವುದೇ ಪರೀಕ್ಷೆ ಕಠಿಣವಲ್ಲ. ತಾಳ್ಮೆ ಇಟ್ಟುಕೊಂಡು ಸತತ ಪ್ರಯತ್ನಪಟ್ಟರೆ ಖಂಡಿತ ಯಶಸ್ಸು ದೊರೆಯುತ್ತದೆ’ ಎನ್ನುವುದು ವಿವೇಕ್ ಅವರ ಅನುಭವದ ಮಾತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ: </strong>ಚಿಂತಾಮಣಿ ನಗರದ ಕನಂಪಲ್ಲಿಯ ನಿವಾಸಿ ಡಾ.ಎನ್.ವಿವೇಕ್ ರೆಡ್ಡಿ ಅವರು 2019ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (ಯುಪಿಎಸ್ಸಿ) 485ನೇ ರ್ಯಾಂಕ್ ಪಡೆದು, ಮೂರನೇ ಪ್ರಯತ್ನದಲ್ಲಿ ತಮ್ಮ ಕನಸು ಈಡೇರಿಸಿಕೊಂಡಿದ್ದಾರೆ.</p>.<p>ವೈದ್ಯಕೀಯ ಶಿಕ್ಷಣ ಪದವೀಧರರಾಗಿರುವ ವಿವೇಕ್ ರೆಡ್ಡಿ ಅವರು ಶಿಕ್ಷಕರಾಗಿರುವ ತಂದೆಯೇ ತಮ್ಮ ಐಎಎಸ್ ಕನಸಿಗೆ ನೀರೇರೆದವರು ಎಂದು ಸ್ಮರಿಸಿಕೊಂಡರು.</p>.<p>ಐಎಎಸ್ ತರಬೇತಿಗಾಗಿ ದೆಹಲಿಗೆ ಹೋಗಿ ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ 8 ತಿಂಗಳಿಗೆ ವಾಪಾಸಾಗಿ ಬೆಂಗಳೂರಿನಲ್ಲೇ ಓದಿ, ಪರೀಕ್ಷೆ ಎದುರಿಸಿ ಯಶಸ್ಸು ಪಡೆದವರು ವಿವೇಕ್.</p>.<p>ಈ ಹಿಂದೆ ಮಂಡ್ಯ ವೈದ್ಯಕೀಯ ಶಿಕ್ಷಣ ಕಾಲೇಜಿನಲ್ಲಿ ಕೆಲಸ ಮಾಡಿರುವ ಇವರು, ಕಳೆದ 10 ತಿಂಗಳಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕಿರಿಯ ನಿವಾಸಿ ವೈಧ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.</p>.<p>‘ಯಾವುದೇ ಪರೀಕ್ಷೆ ಕಠಿಣವಲ್ಲ. ತಾಳ್ಮೆ ಇಟ್ಟುಕೊಂಡು ಸತತ ಪ್ರಯತ್ನಪಟ್ಟರೆ ಖಂಡಿತ ಯಶಸ್ಸು ದೊರೆಯುತ್ತದೆ’ ಎನ್ನುವುದು ವಿವೇಕ್ ಅವರ ಅನುಭವದ ಮಾತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>