ವಕ್ಫ್ ಮಂಡಳಿ ₹ 5 ಲಕ್ಷ ಬಿಡುಗಡೆ ಮಾಡಿದ್ದರೂ ಏಕೆ ತಡೆಗೋಡೆ ಕಾಮಗಾರಿ ಕೈಗೊಂಡಿಲ್ಲ. ಕಾಮಗಾರಿ ಬಗ್ಗೆ ವರದಿಯನ್ನೂ ನೀಡಿಲ್ಲ. ಖಾತೆಯಿಂದ ಹಣ ಡ್ರಾ ಮಾಡಲಾಗಿದೆಯೇ? ಹಣ ಎಲ್ಲಿದೆ? ಅನುದಾನದ ಖರ್ಚು- ವೆಚ್ಚದ ರಶೀದಿ, ಛಾಯಾಚಿತ್ರ, ಗುತ್ತಿಗೆದಾರರ ಬಿಲ್ಗಳನ್ನು 7 ದಿನದ ಒಳಗಾಗಿ ಸಲ್ಲಿಸಬೇಕು ಎಂದು ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿ ದರ್ಗಾ ಕಮಿಟಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ನೀಡಿರುವ ನೋಟಿಸ್ನಲ್ಲಿ ಕೇಳಿದ್ದಾರೆ.