ಆಂಬುಲೆನ್ಸ್ ಕೊರತೆ ಆಂಬುಲೆನ್ಸ್ ಕೊರತೆ ಗಮನಕ್ಕೆ ಬಂದಿದೆ. ಮೂರು 108 ವಾಹನಗಳಿದ್ದು ಮತ್ತೊಂದು ಅವಶ್ಯಕವಾಗಿದೆ. ಹಿರಿಯ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಶೀಘ್ರದಲ್ಲೇ ದೊರೆಯುವ ನಿರೀಕ್ಷೆ ಇದೆ. ಸರ್ಕಾರದ ನೀತಿಯಂತೆ ಕಿ.ಮೀ ಮಿತಿ ಇರುತ್ತದೆ. ರೋಗಿಗಳಿಗೆ ಅದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಬೇರೆ ಕಡೆ ಹೋಗಿರುತ್ತದೆ. ದೂರು ಬಂದಾಗ ತನಿಖೆ ನಡೆಸಿ ತಪ್ಪಾಗಿದ್ದರೆ ಕ್ರಮಕೈಗೊಳ್ಳುತ್ತೇವೆ ಡಾ.ರಾಮಚಂದ್ರಾರೆಡ್ಡಿ ತಾಲ್ಲೂಕು ಆರೋಗ್ಯಾಧಿಕಾರಿ
ದೂರು ಬಂದಾಗ ತನಿಖೆ ನಡೆಸಿ ತಪ್ಪಾಗಿದ್ದರೆ ಕ್ರಮಕೈಗೊಳ್ಳುತ್ತೇವೆ
ಡವರಿಗೆ ತೊಂದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯತೆ ಹೆಚ್ಚಾಗಿದೆ. ವೈದ್ಯರು ಮತ್ತು ಸಿಬ್ಬಂದಿ ರೋಗಿಗಳನ್ನು ಬೇಜವಾಬ್ದಾರಿಯಾಗಿ ನಡೆಸಿಕೊಳ್ಳುತ್ತಾರೆ. ಸಣ್ಣಪುಟ್ಟ ಪ್ರಕರಣಗಳನ್ನು ಬೇರೆ ಆಸ್ಪತ್ರೆಗಳಿಗೆ ಕಳುಹಿಸುವುದರಿಂದ ಬಡವರಿಗೆ ತೊಂದರೆ ಆಗುತ್ತಿದೆ ಮಂಜುನಾಥ್ ವಕೀಲ ಚಿಂತಾಮಣಿ ಮನಸ್ಥಿತಿ ಬದಲಾಗಬೇಕು ಆಸ್ಪತ್ರೆಗಳ ವೈದ್ಯರು ಶುಷ್ರೂಷಕರು ಹಾಗೂ ಸಿಬ್ಬಂದಿಯ ಮನಸ್ಥಿತಿ ಬದಲಾಗಬೇಕಿದೆ. ಅವರು ಮಾನಸಿಕವಾಗಿ ಬದಲಾಗದೆ ಯಾವುದೇ ಕ್ರಮಕೈಗೊಂಡರೂ ಪ್ರಯೋಜನವಿಲ್ಲ. ಎಲ್ಲ ಕಡೆ ವೈದ್ಯರಿದ್ದಾರೆ. ವೈದ್ಯರ ಕೊರತೆ ನಿವಾರಣೆ ಆಗಿದ್ದರೂ ರೋಗಿಗಳನ್ನು ಕಾಣುವ ಹಾಗೂ ಚಿಕಿತ್ಸೆ ನೀಡುವ ಮನಸ್ಥಿತಿ ಬದಲಾಗಬೇಕು.