ನಾಲ್ಕು ವರ್ಷ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಮೂರು ವರ್ಷ ಪಾರಂಪರಿಕ ಶಿಲ್ಪ ಮತ್ತು ಕನ್ನಡ ಶಾಸನ ಸಾಹಿತ್ಯ ವಿಭಾಗದಲ್ಲಿ ಸಲಹೆಗಾರರಾಗಿ, ಮೈಸೂರಿನ ಬ್ರಹ್ಮರ್ಷಿ ಶಿಲ್ಪ ಗುರುಕುಲಂ ಕಾಲೇಜಿನ ಪ್ರಾಂಶುಪಾಲರಾಗಿ, ಕರ್ನಾಟಕ ಸಾಂಪ್ರದಾಯಿಕ ಶಿಲ್ಪಗುರುಕುಲಗಳ ಕೇಂದ್ರದ ಪ್ರಧಾನ ಗುರುಗಳಾಗಿ (ಡೀನ್) ಕೆಲಸ ಮಾಡಿದ್ದಾರೆ.