<p><strong>ಚಿಕ್ಕಬಳ್ಳಾಪುರ</strong>: ಜಿಲ್ಲೆಯಲ್ಲಿ ಟೊಮೆಟೊ ಸಹ ಪ್ರಮುಖ ಬೆಳೆ. ಚಿಂತಾಮಣಿ, ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಬಹಳಷ್ಟು ರೈತರು ಟೊಮೆಟೊ ಬೆಳೆಯುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಬೆಲೆ ಅನಿಶ್ಚಿತತೇ ರೈತರನ್ನು ತೀವ್ರವಾಗಿಯೇ ಬಾಧಿಸುತ್ತಿದೆ. ಇದು ಸಹಜವಾಗಿ ರೈತರನ್ನು ಕಂಗಾಲು ಮಾಡಿದೆ.</p>.<p>15 ಕೆ.ಜಿ ತೂಕದ ಹ್ರೈಬ್ರೀಡ್ (ಸೀಡ್) ಟೊಮೆಟೊ ಬೆಲೆ ಗರಿಷ್ಠ ₹ 120 ಇದೆ. ನಾಟಿ ಟೊಮೆಟೊ ₹ 130 ಇದೆ. ಕೆಲವು ದಿನಗಳ ಹಿಂದೆ ಬೆಲೆ ₹ 100ರ ಒಳಗಿತ್ತು. ಬೆಲೆ ಕುಸಿತದಿಂದ ಕೆಲವು ಬೆಳೆಗಾರರು ಕೊಯ್ಲಿನ ಕಾಸು ಸಹ ದೊರೆಯುವುದಿಲ್ಲ ಎಂದು ಹೊಲಗಳಲ್ಲಿ ಟೊಮೆಟೊವನ್ನು ಕೊಳೆಯಲು ಬಿಟ್ಟಿದ್ದಾರೆ.</p>.<p>ಮತ್ತೊಂದು ಗುಲಾಬಿ ಬಣ್ಣದ ಟೊಮೆಟೊ ಬೆಳೆದಿರುವ ಬೆಳೆಗಾರರು ಮತ್ತಷ್ಟು ಕೈಸುಟ್ಟುಕೊಂಡಿದ್ದಾರೆ. ಈ ಟೊಮೆಟೊ ಬೆಲೆ ಮಾರುಕಟ್ಟೆಯಲ್ಲಿ ತೀವ್ರ ಕಡಿಮೆ ಇದೆ. ಬಿತ್ತನೆ ಬೀಜದ ಸಮಸ್ಯೆಯಿಂದ ಹಣ್ಣು ಈ ಬಣ್ಣಕ್ಕೆ ತಿರುಗಿದೆ. ಈ ಟೊಮೆಟೊ ಕೇಳುವವರೇ ಇಲ್ಲ ಎಂದು ರೈತರು ಹೇಳುವರು.</p>.<p>ಒಂದೂವರೆ ಎಕರೆಯಲ್ಲಿ ₹ 3 ಲಕ್ಷ ವೆಚ್ಚ ಮಾಡಿ ಟೊಮೆಟೊ ಬೆಳೆದಿರುವ ಚಿಕ್ಕಬಳ್ಳಾಪುರದ ಕಿರಣ್ ಬೆಲೆ ಇಲ್ಲದ ಕಾರಣ ಕಂಗಾಲಾಗಿದ್ದಾರೆ. ಹಣ್ಣನ್ನು ಕೊಯ್ಲು ಮಾಡದೆ ಗಿಡಗಳಲ್ಲಿಯೇ ಬಿಟ್ಟಿದ್ದಾರೆ.</p>.<p>‘ಮಾರುಕಟ್ಟೆಗೆ ಟೊಮೆಟೊ ಕೊಂಡೊಯ್ಯುವುದನ್ನೇ ಬಿಟ್ಟಿದ್ದೇನೆ. ಕೊರೊನಾ ಬಂದ ದಿನದಿಂದಲೂ ಸರಾಸರಿ ಬೆಲೆಯೂ ಇಲ್ಲವಾಗಿದೆ. ಕನಿಷ್ಠ ಒಂದು ಕ್ರೇಟ್ (15 ಕೆ.ಜಿ) ₹ 250 ಬೆಲೆ ಇದ್ದರೆ ಬಂಡವಾಳ ವಾಪಸ್ ಬರುತ್ತದೆ. ಇಲ್ಲದಿದ್ದರೆ ನಷ್ಟ’ ಎನ್ನುತ್ತಾರೆ ಕಿರಣ್.</p>.<p>‘ಒಮ್ಮೆ 120 ಬಾಕ್ಸ್ ಕೊಯ್ಲು ಮಾಡಿ ಮಾರುಕಟ್ಟೆಗೆ ಕೊಂಡೊಯ್ದೆವು. 20 ಬಾಕ್ಸ್ ಹಣ್ಣು ಸರಿ ಇಲ್ಲ ಎಂದು ತಿರಸ್ಕರಿಸಿದವು. 100 ಬಾಕ್ಸ್ ಖರೀದಿಸಿದರು. ಮಾರುಕಟ್ಟೆಗೆ ಕೊಂಡೊಯ್ದ ಹಣ, ಕೂಲಿಯೂ ದೊರೆಯಲಿಲ್ಲ. ಅಂದಿನಿಂದ ಕೊಯ್ಲು ಮಾಡುವುದನ್ನೇ ಬಿಟ್ಟಿದ್ದೇವೆ’ ಎಂದು ಹೇಳುವರು.</p>.<p>‘ಡಿ.ಹೊಸೂರಿನಲ್ಲಿ ಟೊಮೆಟೊ ಬೀಜ ಖರೀದಿಸಿದ್ದೆವು. ಆದರೆ ಬೀಜ ಗುಣಮಟ್ಟದ್ದಾಗಿಲ್ಲ. ಎಲ್ಲವೂ ಗುಲಾಬಿ ಬಣ್ಣಕ್ಕೆ ತಿರುಗಿದೆ. ಈ ಹಣ್ಣಿಗೆ ಬೆಲೆ ದೊರೆಯುವುದಿಲ್ಲ. ಇದು ಸಹ ನಮ್ಮನ್ನು ಸಂಕಷ್ಟಕ್ಕೆ ದೂಡಿದೆ. ಬಹಳಷ್ಟು ರೈತರು ಕಳಪೆ ಬೀಜದ ಕಾರಣ ಕೈಸುಟ್ಟುಕೊಂಡಿದ್ದಾರೆ’ ಎಂದರು.</p>.<p>‘ರಾಯಚೂರು, ಮುಂಬೈಗೆ ಟೊಮೆಟೊ ಕಳುಹಿಸುತ್ತೇವೆ. ಒಳ್ಳೆಯ ಹಣ್ಣಿಗೆ ಒಳ್ಳೆಯ ಬೆಲೆ ಇದೆ. ಕೋಲಾರ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಟೊಮೆಟೊ ಬಿತ್ತನೆ ಬೀಜದ ಸಮಸ್ಯೆ ಈ ಬಾರಿ ಎದುರಾಗಿದೆ. ಅದೇ ನಾಟಿ ಬೀಜಕ್ಕೆ ಸಮಸ್ಯೆ ಎದುರಾಗಿಲ್ಲ. ಹೈಬ್ರಿಡ್ ತಳಿ ಬೀಜಗಳು ಉತ್ತಮವಾಗಿಲ್ಲ. ರೋಸ್ ಟೊಮೆಟೊವನ್ನು ನಾವು ಖರೀದಿಸುವುದಿಲ್ಲ’ ಎಂದು ವ್ಯಾಪಾರಿ ಗೋಪಿ ಹೇಳುವರು.</p>.<p>‘ರೋಸ್ ಟೊಮೆಟೊವನ್ನು ದೂರದ ಪ್ರದೇಶಗಳಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ. ಎರಡು ಮೂರು ದಿನಗಳ ಕಾಲ ವಾಹನಗಳಲ್ಲಿ ಅವು ಇರುವುದಿಲ್ಲಈ ಇಂತಹ ಹಣ್ಣನ್ನು ನಮ್ಮ ಬಳಿಗೆ ತಂದರೂ ನಾವು ಖರೀದಿಸುವುದಿಲ್ಲ’ ಎಂದು ಎನ್ಆರ್ಎಂ ಟೊಮೆಟೊ ಅಂಗಡಿ ಮಾಲೀಕರಾದ ಗೋಪಿ ತಿಳಿಸುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಜಿಲ್ಲೆಯಲ್ಲಿ ಟೊಮೆಟೊ ಸಹ ಪ್ರಮುಖ ಬೆಳೆ. ಚಿಂತಾಮಣಿ, ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಬಹಳಷ್ಟು ರೈತರು ಟೊಮೆಟೊ ಬೆಳೆಯುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಬೆಲೆ ಅನಿಶ್ಚಿತತೇ ರೈತರನ್ನು ತೀವ್ರವಾಗಿಯೇ ಬಾಧಿಸುತ್ತಿದೆ. ಇದು ಸಹಜವಾಗಿ ರೈತರನ್ನು ಕಂಗಾಲು ಮಾಡಿದೆ.</p>.<p>15 ಕೆ.ಜಿ ತೂಕದ ಹ್ರೈಬ್ರೀಡ್ (ಸೀಡ್) ಟೊಮೆಟೊ ಬೆಲೆ ಗರಿಷ್ಠ ₹ 120 ಇದೆ. ನಾಟಿ ಟೊಮೆಟೊ ₹ 130 ಇದೆ. ಕೆಲವು ದಿನಗಳ ಹಿಂದೆ ಬೆಲೆ ₹ 100ರ ಒಳಗಿತ್ತು. ಬೆಲೆ ಕುಸಿತದಿಂದ ಕೆಲವು ಬೆಳೆಗಾರರು ಕೊಯ್ಲಿನ ಕಾಸು ಸಹ ದೊರೆಯುವುದಿಲ್ಲ ಎಂದು ಹೊಲಗಳಲ್ಲಿ ಟೊಮೆಟೊವನ್ನು ಕೊಳೆಯಲು ಬಿಟ್ಟಿದ್ದಾರೆ.</p>.<p>ಮತ್ತೊಂದು ಗುಲಾಬಿ ಬಣ್ಣದ ಟೊಮೆಟೊ ಬೆಳೆದಿರುವ ಬೆಳೆಗಾರರು ಮತ್ತಷ್ಟು ಕೈಸುಟ್ಟುಕೊಂಡಿದ್ದಾರೆ. ಈ ಟೊಮೆಟೊ ಬೆಲೆ ಮಾರುಕಟ್ಟೆಯಲ್ಲಿ ತೀವ್ರ ಕಡಿಮೆ ಇದೆ. ಬಿತ್ತನೆ ಬೀಜದ ಸಮಸ್ಯೆಯಿಂದ ಹಣ್ಣು ಈ ಬಣ್ಣಕ್ಕೆ ತಿರುಗಿದೆ. ಈ ಟೊಮೆಟೊ ಕೇಳುವವರೇ ಇಲ್ಲ ಎಂದು ರೈತರು ಹೇಳುವರು.</p>.<p>ಒಂದೂವರೆ ಎಕರೆಯಲ್ಲಿ ₹ 3 ಲಕ್ಷ ವೆಚ್ಚ ಮಾಡಿ ಟೊಮೆಟೊ ಬೆಳೆದಿರುವ ಚಿಕ್ಕಬಳ್ಳಾಪುರದ ಕಿರಣ್ ಬೆಲೆ ಇಲ್ಲದ ಕಾರಣ ಕಂಗಾಲಾಗಿದ್ದಾರೆ. ಹಣ್ಣನ್ನು ಕೊಯ್ಲು ಮಾಡದೆ ಗಿಡಗಳಲ್ಲಿಯೇ ಬಿಟ್ಟಿದ್ದಾರೆ.</p>.<p>‘ಮಾರುಕಟ್ಟೆಗೆ ಟೊಮೆಟೊ ಕೊಂಡೊಯ್ಯುವುದನ್ನೇ ಬಿಟ್ಟಿದ್ದೇನೆ. ಕೊರೊನಾ ಬಂದ ದಿನದಿಂದಲೂ ಸರಾಸರಿ ಬೆಲೆಯೂ ಇಲ್ಲವಾಗಿದೆ. ಕನಿಷ್ಠ ಒಂದು ಕ್ರೇಟ್ (15 ಕೆ.ಜಿ) ₹ 250 ಬೆಲೆ ಇದ್ದರೆ ಬಂಡವಾಳ ವಾಪಸ್ ಬರುತ್ತದೆ. ಇಲ್ಲದಿದ್ದರೆ ನಷ್ಟ’ ಎನ್ನುತ್ತಾರೆ ಕಿರಣ್.</p>.<p>‘ಒಮ್ಮೆ 120 ಬಾಕ್ಸ್ ಕೊಯ್ಲು ಮಾಡಿ ಮಾರುಕಟ್ಟೆಗೆ ಕೊಂಡೊಯ್ದೆವು. 20 ಬಾಕ್ಸ್ ಹಣ್ಣು ಸರಿ ಇಲ್ಲ ಎಂದು ತಿರಸ್ಕರಿಸಿದವು. 100 ಬಾಕ್ಸ್ ಖರೀದಿಸಿದರು. ಮಾರುಕಟ್ಟೆಗೆ ಕೊಂಡೊಯ್ದ ಹಣ, ಕೂಲಿಯೂ ದೊರೆಯಲಿಲ್ಲ. ಅಂದಿನಿಂದ ಕೊಯ್ಲು ಮಾಡುವುದನ್ನೇ ಬಿಟ್ಟಿದ್ದೇವೆ’ ಎಂದು ಹೇಳುವರು.</p>.<p>‘ಡಿ.ಹೊಸೂರಿನಲ್ಲಿ ಟೊಮೆಟೊ ಬೀಜ ಖರೀದಿಸಿದ್ದೆವು. ಆದರೆ ಬೀಜ ಗುಣಮಟ್ಟದ್ದಾಗಿಲ್ಲ. ಎಲ್ಲವೂ ಗುಲಾಬಿ ಬಣ್ಣಕ್ಕೆ ತಿರುಗಿದೆ. ಈ ಹಣ್ಣಿಗೆ ಬೆಲೆ ದೊರೆಯುವುದಿಲ್ಲ. ಇದು ಸಹ ನಮ್ಮನ್ನು ಸಂಕಷ್ಟಕ್ಕೆ ದೂಡಿದೆ. ಬಹಳಷ್ಟು ರೈತರು ಕಳಪೆ ಬೀಜದ ಕಾರಣ ಕೈಸುಟ್ಟುಕೊಂಡಿದ್ದಾರೆ’ ಎಂದರು.</p>.<p>‘ರಾಯಚೂರು, ಮುಂಬೈಗೆ ಟೊಮೆಟೊ ಕಳುಹಿಸುತ್ತೇವೆ. ಒಳ್ಳೆಯ ಹಣ್ಣಿಗೆ ಒಳ್ಳೆಯ ಬೆಲೆ ಇದೆ. ಕೋಲಾರ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಟೊಮೆಟೊ ಬಿತ್ತನೆ ಬೀಜದ ಸಮಸ್ಯೆ ಈ ಬಾರಿ ಎದುರಾಗಿದೆ. ಅದೇ ನಾಟಿ ಬೀಜಕ್ಕೆ ಸಮಸ್ಯೆ ಎದುರಾಗಿಲ್ಲ. ಹೈಬ್ರಿಡ್ ತಳಿ ಬೀಜಗಳು ಉತ್ತಮವಾಗಿಲ್ಲ. ರೋಸ್ ಟೊಮೆಟೊವನ್ನು ನಾವು ಖರೀದಿಸುವುದಿಲ್ಲ’ ಎಂದು ವ್ಯಾಪಾರಿ ಗೋಪಿ ಹೇಳುವರು.</p>.<p>‘ರೋಸ್ ಟೊಮೆಟೊವನ್ನು ದೂರದ ಪ್ರದೇಶಗಳಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ. ಎರಡು ಮೂರು ದಿನಗಳ ಕಾಲ ವಾಹನಗಳಲ್ಲಿ ಅವು ಇರುವುದಿಲ್ಲಈ ಇಂತಹ ಹಣ್ಣನ್ನು ನಮ್ಮ ಬಳಿಗೆ ತಂದರೂ ನಾವು ಖರೀದಿಸುವುದಿಲ್ಲ’ ಎಂದು ಎನ್ಆರ್ಎಂ ಟೊಮೆಟೊ ಅಂಗಡಿ ಮಾಲೀಕರಾದ ಗೋಪಿ ತಿಳಿಸುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>