<p><strong>ಶಿಡ್ಲಘಟ್ಟ:</strong> ‘ಮೃತಪಟ್ಟ ವ್ಯಕ್ತಿಯ ಹೆಸರು ಮತ್ತು ವಿಳಾಸವಿರುವ ಆಧಾರ್ ಕಾರ್ಡ್ ಹಾಗೂ ಇನ್ನಿತರೆ ದಾಖಲೆ ಸೃಷ್ಟಿಸಿ ತಾನೇ ಆ ವ್ಯಕ್ತಿ ಎಂದು ನಂಬಿಸಿ ಮೃತ ವ್ಯಕ್ತಿಯ ಹೆಸರಲ್ಲಿದ್ದ ಎರಡು ಎಕರೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ’.</p>.<p>ತಾಲ್ಲೂಕಿನ ಬಸವಾಪಟ್ಟಣ ಗ್ರಾಮದ ಚನ್ನಕೇಶವ, ತಾನು ನಾರಾಯಣಪ್ಪ ಎಂದು ಆಧಾರ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಸೃಷ್ಟಿಸಿ ಅದೇ ಗ್ರಾಮದ 26 ವರ್ಷಗಳ ಹಿಂದೆಯೇ ಮೃತಪಟ್ಟಿರುವ ನಾರಾಯಣಪ್ಪ ಎಂಬುವವರ ಹೆಸರಲ್ಲಿದ್ದ 2 ಎಕರೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾನೆ.</p>.<p>ಚಿಂತಾಮಣಿ ತಾಲ್ಲೂಕು ಉಪ ನೋಂದಣಿ ಕಚೇರಿಯಲ್ಲಿ ಈ ಅಕ್ರಮ ನೋಂದಣಿ ನಡೆದಿದೆ. ಅಕ್ರಮವಾಗಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ ಚನ್ನಕೇಶವ, ಆತನ ಪತ್ನಿ, ಪುತ್ರಿ, ಪುತ್ರ ಮತ್ತು ನೋಂದಣಿ ಸಮಯದಲ್ಲಿ ಸಾಕ್ಷಿಗಳಾಗಿ ಸಹಿ ಹಾಕಿದ ಇಬ್ಬರ ಮೇಲೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕೆಐಎಡಿಬಿ ವ್ಯಾಪ್ತಿಗೆ ಒಳಪಡುವ ಈ ಜಮೀನು ಮಾರಾಟ ಮಾಡುವುದಾಗಲಿ, ಕೊಳ್ಳುವುದಾಗಲಿ ಮಾಡಬಾರದೆಂಬ ಸೂಚನೆಯಿದ್ದರೂ ಅಕ್ರಮವಾಗಿ ಈ ಜಮೀನಿನ ಮಾರಾಟ ನಡೆದಿದೆ.</p>.<p>ನಡೆದಿದ್ದೇನು: ಬಸವಾಪಟ್ಟಣ ಗ್ರಾಮದ ನಾರಾಯಣಪ್ಪ 26 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ಹೆಸರಲ್ಲಿ 2 ಎಕರೆ ಜಮೀನು ಇತ್ತು. ಇದೇ ಗ್ರಾಮದ ಚನ್ನಕೇಶವ ನಾರಾಯಣಪ್ಪ ಎಂಬುದಾಗಿ ಆಧಾರ್ ಕಾರ್ಡ್ ಮತ್ತಿತರೆ ದಾಖಲೆಗಳನ್ನು ಸೃಷ್ಟಿಸಿ, ಬೆಂಗಳೂರಿನ ನಿವಾಸಿಯೊಬ್ಬರಿಗೆ ಮಾರಾಟ ಮಾಡಿದ್ದಾನೆ.</p>.<p>ಅಕ್ರಮ ಜಮೀನು ಮಾರಾಟದ ಕುರಿತು ನಾರಾಯಣಪ್ಪ ಅವರ ಕುಟುಂಬದವರಿಗೆ ವಿಷಯ ತಿಳಿದು ಬಂದಿದ್ದು, ಕೂಡಲೇ ಚನ್ನಕೇಶವ ಅವರ ಮೂಲ ದಾಖಲೆಗಳನ್ನು ಸಂಗ್ರಹಿಸಿ ನೋಂದಣಿ ಕಚೇರಿ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>
<p><strong>ಶಿಡ್ಲಘಟ್ಟ:</strong> ‘ಮೃತಪಟ್ಟ ವ್ಯಕ್ತಿಯ ಹೆಸರು ಮತ್ತು ವಿಳಾಸವಿರುವ ಆಧಾರ್ ಕಾರ್ಡ್ ಹಾಗೂ ಇನ್ನಿತರೆ ದಾಖಲೆ ಸೃಷ್ಟಿಸಿ ತಾನೇ ಆ ವ್ಯಕ್ತಿ ಎಂದು ನಂಬಿಸಿ ಮೃತ ವ್ಯಕ್ತಿಯ ಹೆಸರಲ್ಲಿದ್ದ ಎರಡು ಎಕರೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ’.</p>.<p>ತಾಲ್ಲೂಕಿನ ಬಸವಾಪಟ್ಟಣ ಗ್ರಾಮದ ಚನ್ನಕೇಶವ, ತಾನು ನಾರಾಯಣಪ್ಪ ಎಂದು ಆಧಾರ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಸೃಷ್ಟಿಸಿ ಅದೇ ಗ್ರಾಮದ 26 ವರ್ಷಗಳ ಹಿಂದೆಯೇ ಮೃತಪಟ್ಟಿರುವ ನಾರಾಯಣಪ್ಪ ಎಂಬುವವರ ಹೆಸರಲ್ಲಿದ್ದ 2 ಎಕರೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾನೆ.</p>.<p>ಚಿಂತಾಮಣಿ ತಾಲ್ಲೂಕು ಉಪ ನೋಂದಣಿ ಕಚೇರಿಯಲ್ಲಿ ಈ ಅಕ್ರಮ ನೋಂದಣಿ ನಡೆದಿದೆ. ಅಕ್ರಮವಾಗಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ ಚನ್ನಕೇಶವ, ಆತನ ಪತ್ನಿ, ಪುತ್ರಿ, ಪುತ್ರ ಮತ್ತು ನೋಂದಣಿ ಸಮಯದಲ್ಲಿ ಸಾಕ್ಷಿಗಳಾಗಿ ಸಹಿ ಹಾಕಿದ ಇಬ್ಬರ ಮೇಲೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕೆಐಎಡಿಬಿ ವ್ಯಾಪ್ತಿಗೆ ಒಳಪಡುವ ಈ ಜಮೀನು ಮಾರಾಟ ಮಾಡುವುದಾಗಲಿ, ಕೊಳ್ಳುವುದಾಗಲಿ ಮಾಡಬಾರದೆಂಬ ಸೂಚನೆಯಿದ್ದರೂ ಅಕ್ರಮವಾಗಿ ಈ ಜಮೀನಿನ ಮಾರಾಟ ನಡೆದಿದೆ.</p>.<p>ನಡೆದಿದ್ದೇನು: ಬಸವಾಪಟ್ಟಣ ಗ್ರಾಮದ ನಾರಾಯಣಪ್ಪ 26 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ಹೆಸರಲ್ಲಿ 2 ಎಕರೆ ಜಮೀನು ಇತ್ತು. ಇದೇ ಗ್ರಾಮದ ಚನ್ನಕೇಶವ ನಾರಾಯಣಪ್ಪ ಎಂಬುದಾಗಿ ಆಧಾರ್ ಕಾರ್ಡ್ ಮತ್ತಿತರೆ ದಾಖಲೆಗಳನ್ನು ಸೃಷ್ಟಿಸಿ, ಬೆಂಗಳೂರಿನ ನಿವಾಸಿಯೊಬ್ಬರಿಗೆ ಮಾರಾಟ ಮಾಡಿದ್ದಾನೆ.</p>.<p>ಅಕ್ರಮ ಜಮೀನು ಮಾರಾಟದ ಕುರಿತು ನಾರಾಯಣಪ್ಪ ಅವರ ಕುಟುಂಬದವರಿಗೆ ವಿಷಯ ತಿಳಿದು ಬಂದಿದ್ದು, ಕೂಡಲೇ ಚನ್ನಕೇಶವ ಅವರ ಮೂಲ ದಾಖಲೆಗಳನ್ನು ಸಂಗ್ರಹಿಸಿ ನೋಂದಣಿ ಕಚೇರಿ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>