ಸೋಮವಾರ, 12 ಜನವರಿ 2026
×
ADVERTISEMENT
ADVERTISEMENT

ಶಿಡ್ಲಘಟ್ಟ: ಹಾಳು ಕೊಂಪೆಯಾದ ನಗರಸಭೆ ಉದ್ಯಾನ

ಗೌಡನಕೆರೆ ಅಂಚಿನಲ್ಲಿನ ಉದ್ಯಾನದ ದುಸ್ಥಿತಿ * ಸಾರ್ವಜನಿಕರ ಹಣ ಪೋಲು
Published : 12 ಜನವರಿ 2026, 5:08 IST
Last Updated : 12 ಜನವರಿ 2026, 5:08 IST
ಫಾಲೋ ಮಾಡಿ
Comments
ನೆರಳಿಗೆ ನಿರ್ಮಿಸಿದ ಸ್ಥಳ ನಾಯಿಗಳಿಗೆ ಆಶ್ರಯ ನೀಡಿರುವುದು 
ನೆರಳಿಗೆ ನಿರ್ಮಿಸಿದ ಸ್ಥಳ ನಾಯಿಗಳಿಗೆ ಆಶ್ರಯ ನೀಡಿರುವುದು 
ವಾಕಿಂಗ್ ಪಥದಲ್ಲಿ ಮದ್ಯದ ಪಾಕೆಟ್
ವಾಕಿಂಗ್ ಪಥದಲ್ಲಿ ಮದ್ಯದ ಪಾಕೆಟ್
ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಆರೋಗ್ಯದ ಬಗ್ಗೆ ಕಾಳಜಿ ಮೂಡಿದ್ದು ಬೆಳಗ್ಗೆ ವಾಕಿಂಗ್ ಮಾಡಲು ಆದ್ಯತೆ ನೀಡುತ್ತಿದ್ದಾರೆ. ರಸ್ತೆಯಲ್ಲಿ ವಾಹನಗಳ ಸಂಚಾರವಿರುವುದರಿಂದ ರಸ್ತೆಗಳ ಮೇಲೆ ವಾಕಿಂಗ್ ಮಾಡಲಾಗದು ಎಂಬ ಕಾರಣಕ್ಕೆ ಉದ್ಯಾನ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈ ಉದ್ಯಾನವು ಇದೀಗ ಅವ್ಯವಸ್ಥೆಯ ಆಗರವಾಗಿದೆ. ನಗರಸಭೆ ಆಡಳಿತ ನಡೆಸುವವರಿಗೆ ಕಾಳಜಿ ಇರದಿದ್ದಾಗ ಅತ್ಯುತ್ತಮ ಯೋಜನೆಗಳು ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಉದ್ಯಾನದ ಉದ್ದೇಶವನ್ನು ಸರಿಯಾಗಿ ಅರಿತು ಜನಸ್ನೇಹಿಯಾಗಿ ರೂಪಿಸಬೇಕಿದೆ. 
-ಎಂ.ರಾಜಣ್ಣ, ಮಾಜಿ ಶಾಸಕ
ನಗರದ ನಿವಾಸಿಗಳು ಆರೋಗ್ಯವರ್ಧನೆಗಾಗಿ ಉದ್ಯಾನವನದಲ್ಲಿ ವಾಯುವಿಹಾರ ಮಾಡಲು ಇಷ್ಟಪಡುತ್ತಾರೆ. ವಾಯುವಿಹಾರಿಗಳಿಗಾಗಿ ನಿರ್ಮಿಸಲಾಗಿರುವ ಉದ್ಯಾನವು ಇಂದು ಕುಡುಕರ ಮತ್ತು ಪುಡಾರಿಗಳ ಅಡ್ಡೆಯಾಗಿ ಪರಿಣಿಸಿದೆ. ಹೀಗಿದ್ದಾಗ ಹೆಣ್ಣು ಮಕ್ಕಳು ಮತ್ತು ಮಕ್ಕಳು ಹೇಗೆ ಅಲ್ಲಿಗೆ ಹೋಗುತ್ತಾರೆ. ಸಂಜೆ ಹೊತ್ತು ಮಕ್ಕಳೊಂದಿಗೆ ಹೋಗಿ ಸ್ವಲ್ಪ ಹೊತ್ತು ಕಾಲ ಕಳೆಯಲು ಹೇಗೆ ಸಾಧ್ಯವಾದೀತು. ಉದ್ಯಾನದ ಅಭಿವೃದ್ಧಿಗಾಗಿ ಹಣವನ್ನು ನೀರಿನಂತೆ ವೆಚ್ಚ ಮಾಡಲಾಗಿದೆ. ಜನರಿಗೆ ಮಾತ್ರ ಯಾವುದೇ ಪ್ರಯೋಜನವಾಗಿಲ್ಲ. ವಾಯುವಿಹಾರಕ್ಕೆ ಹೋಗುವವರಿಗೆ ತೊಂದರೆಯಾಗಿದೆ
-ನಟರಾಜ್, ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT