‘ದೊಡ್ಡ ಗಾತ್ರದ ಬಾವಲಿಗಳು ಪರಾಗ ಸ್ಪರ್ಶ ಹಾಗೂ ಬೀಜ ವಿಸ್ತರಣೆಯನ್ನೂ ಮಾಡಿ, ಕಾಡನ್ನು ಬೆಳೆಯಲು ಸಹಾಯ ಮಾಡುತ್ತವೆ. ಕೀಟಗಳನ್ನು ತಿನ್ನುವುದರಿಂದ ರೈತ ಮಿತ್ರನಾಗಿ ಬೆಳೆ ಹಾನಿ ನಿಯಂತ್ರಿಸುತ್ತವೆ. ಸೊಳ್ಳೆಗಳನ್ನು ತಿನ್ನುವುದರಿಂದ ಮಲೇರಿಯಾ, ಡೆಂಗಿಯಂತಹ ಕಾಯಿಲೆ ತಡೆಗಟ್ಟುತ್ತವೆ. ದ್ರಾಕ್ಷಿ ಬಲೆಗೆ ಸಿಕ್ಕಿ ಹಲವಾರು ಬಾವಲಿಗಳನ್ನು ರಕ್ಷಿಸಿದ್ದೇನೆ’ ಎಂದು ಸ್ನೇಕ್ ನಾಗರಾಜ್ ತಿಳಿಸಿದರು.