ರಾಜ್ಯದಲ್ಲಿ ಯಾವ ಹಾಲು ಒಕ್ಕೂಟಗಳು ಇಂತಹ ಒಣಮೇವಿನ ಘಟಕಗಳನ್ನು ಹೊಂದಿಲ್ಲ. ಕೋಚಿಮುಲ್ ಈ ದಿಕ್ಕಿನಲ್ಲಿ ಆಲೋಚಿಸುತ್ತಿದೆ. ಈ ಘಟಕ ನಿರ್ಮಾಣದಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು ತಿಳಿಸಿದರು. ಗೌರಿಬಿದನೂರಿನ ಶಿತಲೀಕರಣ ಘಟಕವು ಈಗ ಬಾಗಿಲು ಮುಚ್ಚಿದೆ. ಅಲ್ಲಿ ಉತ್ತಮ ಜಾಗವೂ ಇದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.