ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸ್ಪರ್ಶ ವಿದ್ಯಾರ್ಥಿ ಸಾವು

Last Updated 26 ಜನವರಿ 2021, 2:35 IST
ಅಕ್ಷರ ಗಾತ್ರ

ಚಿಂತಾಮಣಿ: ಮುರುಗಮಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ತೊಟ್ಟಿಯಲ್ಲಿ ನೀರು ಸೇದಲು ಹೋಗಿದ್ದ ವಿದ್ಯಾರ್ಥಿ ನಂದೀಶ್‌ (11) ಸೋಮವಾರ ಮೃತಪಟ್ಟಿದ್ದಾನೆ.

ಗ್ರಾಮದ ಶಂಕರಪ್ಪ ಹಾಗೂ ಚಂದ್ರಮ್ಮ ಅವರ ಪುತ್ರ ನಂದೀಶ್ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಶಾಲೆಯ ನೀರಿನ ತೊಟ್ಟಿಗೆ ವಿದ್ಯುತ್ ಮೋಟಾರಿನಿಂದ ಕಬ್ಬಿಣದ ಪೈಪ್ ಸಂಪರ್ಕ ನೀಡಲಾಗಿದೆ. ಇಲಿಗಳ ಕಡಿತದಿಂದ ಎರಡು ವಿದ್ಯುತ್ ವೈರುಗಳ ಸಂಪರ್ಕದಿಂದ ಪೈಪ್ ಮೂಲಕ ನೀರಿಗೆ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ.

ಕಿರಿಯ ಪ್ರಾಥಮಿಕ ಶಾಲೆಯಾಗಿದ್ದು ಕೊರೊನಾ ಹಿನ್ನೆಲೆಯಲ್ಲಿ ಶಾಲೆ ಬಂದ್ ಆಗಿದೆ. ಬಿಸಿಯೂಟವೂ ಇಲ್ಲದೆ ಅಡುಗೆ ಮನೆ ಸಹ ಬೀಗ ಹಾಕಲಾಗಿದೆ. ನಾಳೆಯ ಗಣರಾಜ್ಯೋತ್ಸವದ ದಿನಾಚರಣೆಗಾಗಿ ಶಾಲೆಯ ವಿದ್ಯಾರ್ಥಿ ಆ ತೊಟ್ಟಿಯಲ್ಲಿ ನೀರು ಸೇದುತ್ತಿದ್ದಾಗ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT