<p><strong>ಗೌರಿಬಿದನೂರು</strong>: ತಾಲ್ಲೂಕಿನದಾರಿನಾಯಕನ ಪಾಳ್ಯ ಸಮೀಪದ ರಾಮದೇವರಬೆಟ್ಟದಲ್ಲಿರುವ ಶಾಸನವನ್ನು ಇತ್ತೀಚೆಗೆಇತಿಹಾಸಕಾರರಾದ ಕೆ.ಧನಪಾಲ್ ಹಾಗೂ ತಂಡದ ಸದಸ್ಯರು ಅಧ್ಯಯನ ನಡೆಸಿದರು.</p>.<p>ಪ್ರೊ. ಕೆ.ಆರ್.ನರಸಿಂಹನ್ ಮಾರ್ಗದರ್ಶನದಲ್ಲಿ ತಾಲ್ಲೂಕಿನಲ್ಲಿರುವ ಶಾಸನಗಳ ಅಧ್ಯಯನವನ್ನು ತಂಡ ಈ ಹಿಂದಿನಿಂದಲೂ ನಡೆಸುತ್ತಿದೆ.ಆರ್. ಕಿರಣ್ ಕುಮಾರ್, ವಿನುತಾ ಕಿರಣ್, ಆರ್.ಯುವರಾಜ್, ದೀಪ್ತಿ ಶ್ರೀಹರಿ, ಮೈತ್ರೇಯಿ ಕೆ.ಜಿ ಹಾಗೂ ಇರ್ಫಾನ್ ತಂಡದಲ್ಲಿ ಇದ್ದರು.</p>.<p>ರಾಮದೇವರ ಬೆಟ್ಟದ ಶಿವನ ದೇವಸ್ಥಾನ ಮತ್ತು ದೇವಸ್ಥಾನ ನಿರ್ಮಾಣದ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ. ಶಾಸನವು ವಿಜಯನಗರ ಸಾಮ್ರಾಜ್ಯದ ಅರಸ ಇಮ್ಮಡಿ ಹರಿಹರರಾಯರ ಕಾಲಕ್ಕೆ ಸೇರಿದೆ.</p>.<p>ತಾಂಬೆಯ ಕಲ್ಮನೆ ನಾಗಗಡ ಪ್ರಾಂತ್ಯದಲ್ಲಿ ಸೇನಬೋವರಾದ ಬಾಚರಸರು ದೇವರ ಬೆಟ್ಟದ ಅಹೋಬಲ ನಾಯಕರೊಳಗಾದ ಸಾಲುಮೂಲೆ ಸಮಸ್ತ ಹಲರು ಎಂಬ ವ್ಯಾಪಾರಿ ಸಮೂಹದವರು ಸೇರಿ ದೇವಸ್ಥಾನ ಕಟ್ಟಬೇಕು ಎಂದು ನಿರ್ಧರಿಸಲಾಗುತ್ತದೆ. ಈ ಕಾರ್ಯಕ್ಕೆ ರಾಮದೇವರ ಪೂಜಾರಿಯಾಗಿದ್ದ ತ್ರಿಪುರಾರಿ ದೇವ ವೀರಪ್ಪ ಅವರು ತಮ್ಮ ಬಳಿಯಿದ್ದ ಹಣದಲ್ಲಿ ಶಿವಾಲಯ ಕಟ್ಟಿಸಿರುತ್ತಾರೆ. ಆ ಸಲುವಾಗಿ ಇವರನ್ನೇ ದೇವಸ್ಥಾನದ ಸ್ಥಾನಿಕರಾಗಿ ಮತ್ತು ಕರ್ತರಾಗಿ ನೇಮಿಸಿರುತ್ತಾರೆ. ಇದಕ್ಕೆ ಒಪ್ಪದವರು ವಾರಾಣಸಿಯ ಗಂಗೆಯ ತಟದಲ್ಲಿ ಹಸುವನ್ನು, ಬ್ರಾಹ್ಮಣರನ್ನು ಮತ್ತು ತಮ್ಮ ಹಿರಿಯ ಮಗನನ್ನು ಕೊಂದ ಪಾಪದಲ್ಲಿ ಹೋಗುವರು ಎನ್ನುವ ವಿಷಯ ಶಾಸನದಲ್ಲಿ ಇದೆ.</p>.<p>ಬೆಟ್ಟ ಹತ್ತಲು ಸ್ಥಳೀಯರಾದ ಅಶ್ವತ್ಥಪ್ಪ ತಂಡಕ್ಕೆ ನೆರವಾಗಿದ್ದಾರೆ.ಬೆಟ್ಟದ ತಪ್ಪಲಿನಲ್ಲಿ 14ನೆಯ ಶತಮಾನದ ವೀರಗಲ್ಲಿದ್ದು ಅದರ ಅಧ್ಯಯನ ತಂಡದಿಂದ ಮುಂದುವರೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು</strong>: ತಾಲ್ಲೂಕಿನದಾರಿನಾಯಕನ ಪಾಳ್ಯ ಸಮೀಪದ ರಾಮದೇವರಬೆಟ್ಟದಲ್ಲಿರುವ ಶಾಸನವನ್ನು ಇತ್ತೀಚೆಗೆಇತಿಹಾಸಕಾರರಾದ ಕೆ.ಧನಪಾಲ್ ಹಾಗೂ ತಂಡದ ಸದಸ್ಯರು ಅಧ್ಯಯನ ನಡೆಸಿದರು.</p>.<p>ಪ್ರೊ. ಕೆ.ಆರ್.ನರಸಿಂಹನ್ ಮಾರ್ಗದರ್ಶನದಲ್ಲಿ ತಾಲ್ಲೂಕಿನಲ್ಲಿರುವ ಶಾಸನಗಳ ಅಧ್ಯಯನವನ್ನು ತಂಡ ಈ ಹಿಂದಿನಿಂದಲೂ ನಡೆಸುತ್ತಿದೆ.ಆರ್. ಕಿರಣ್ ಕುಮಾರ್, ವಿನುತಾ ಕಿರಣ್, ಆರ್.ಯುವರಾಜ್, ದೀಪ್ತಿ ಶ್ರೀಹರಿ, ಮೈತ್ರೇಯಿ ಕೆ.ಜಿ ಹಾಗೂ ಇರ್ಫಾನ್ ತಂಡದಲ್ಲಿ ಇದ್ದರು.</p>.<p>ರಾಮದೇವರ ಬೆಟ್ಟದ ಶಿವನ ದೇವಸ್ಥಾನ ಮತ್ತು ದೇವಸ್ಥಾನ ನಿರ್ಮಾಣದ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ. ಶಾಸನವು ವಿಜಯನಗರ ಸಾಮ್ರಾಜ್ಯದ ಅರಸ ಇಮ್ಮಡಿ ಹರಿಹರರಾಯರ ಕಾಲಕ್ಕೆ ಸೇರಿದೆ.</p>.<p>ತಾಂಬೆಯ ಕಲ್ಮನೆ ನಾಗಗಡ ಪ್ರಾಂತ್ಯದಲ್ಲಿ ಸೇನಬೋವರಾದ ಬಾಚರಸರು ದೇವರ ಬೆಟ್ಟದ ಅಹೋಬಲ ನಾಯಕರೊಳಗಾದ ಸಾಲುಮೂಲೆ ಸಮಸ್ತ ಹಲರು ಎಂಬ ವ್ಯಾಪಾರಿ ಸಮೂಹದವರು ಸೇರಿ ದೇವಸ್ಥಾನ ಕಟ್ಟಬೇಕು ಎಂದು ನಿರ್ಧರಿಸಲಾಗುತ್ತದೆ. ಈ ಕಾರ್ಯಕ್ಕೆ ರಾಮದೇವರ ಪೂಜಾರಿಯಾಗಿದ್ದ ತ್ರಿಪುರಾರಿ ದೇವ ವೀರಪ್ಪ ಅವರು ತಮ್ಮ ಬಳಿಯಿದ್ದ ಹಣದಲ್ಲಿ ಶಿವಾಲಯ ಕಟ್ಟಿಸಿರುತ್ತಾರೆ. ಆ ಸಲುವಾಗಿ ಇವರನ್ನೇ ದೇವಸ್ಥಾನದ ಸ್ಥಾನಿಕರಾಗಿ ಮತ್ತು ಕರ್ತರಾಗಿ ನೇಮಿಸಿರುತ್ತಾರೆ. ಇದಕ್ಕೆ ಒಪ್ಪದವರು ವಾರಾಣಸಿಯ ಗಂಗೆಯ ತಟದಲ್ಲಿ ಹಸುವನ್ನು, ಬ್ರಾಹ್ಮಣರನ್ನು ಮತ್ತು ತಮ್ಮ ಹಿರಿಯ ಮಗನನ್ನು ಕೊಂದ ಪಾಪದಲ್ಲಿ ಹೋಗುವರು ಎನ್ನುವ ವಿಷಯ ಶಾಸನದಲ್ಲಿ ಇದೆ.</p>.<p>ಬೆಟ್ಟ ಹತ್ತಲು ಸ್ಥಳೀಯರಾದ ಅಶ್ವತ್ಥಪ್ಪ ತಂಡಕ್ಕೆ ನೆರವಾಗಿದ್ದಾರೆ.ಬೆಟ್ಟದ ತಪ್ಪಲಿನಲ್ಲಿ 14ನೆಯ ಶತಮಾನದ ವೀರಗಲ್ಲಿದ್ದು ಅದರ ಅಧ್ಯಯನ ತಂಡದಿಂದ ಮುಂದುವರೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>