<p><strong>ಗೌರಿಬಿದನೂರು</strong>: ‘ಎರಡು ಎಕರೆಯಲ್ಲಿ ಸುಗಂಧ ರಾಜ ಹೂ ಬೆಳೆದಿದ್ದೇನೆ. ನಿರಂತರ ಆದಾಯವಾಗಿ ಆದಾಯ ಬರುತ್ತಿದೆ. ನಿತ್ಯ 180 ರಿಂದ 200 ಕೆ.ಜಿ ಸುಗಂಧರಾಜ ಹೂ ಕೊಯ್ಲು ಮಾಡುತ್ತಿದ್ದು ಒಂದು ಕೆ.ಜಿಗೆ ಕನಿಷ್ಠ ₹50 ಸಿಕ್ಕರೂ ಪ್ರತಿದಿನ 10,000 ಸಿಗುತ್ತಿದೆ’–ಹೀಗೆ ತಮ್ಮ ಹೂ ಬೇಸಾಯದ ಬಗ್ಗೆ ಮಾಹಿತಿ ನೀಡಿದರು ತಾಲ್ಲೂಕಿನ ಕಾಚಮಾಚೇನಹಳ್ಳಿಯ ಯುವ ರೈತ ಶಶಿಕುಮಾರ್. </p><p>ಹೂ ಬೆಳೆಗಾರರಾಗಿ ಗಮನ ಸೆಳೆದಿರುವ ಶಶಿಕುಮಾರ್ ಅವರ ಬದುಕನ್ನು ಸಮೃದ್ಧಗೊಳಿಸಿರುವುದು ಸಹ ಹೂ ಬೇಸಾಯವೇ. </p><p>4 ಎಕರೆ ಜಮೀನಿನಲ್ಲಿ ನಿರಂತರವಾಗಿ ಆದಾಯ ಗಳಿಸುವ ಹೂಗಳನ್ನು ಬೆಳೆದು ಯಶಸ್ಸಿನ ಹಾದಿಯಲ್ಲಿದ್ದಾರೆ. ಅರ್ಧ ಎಕರೆಯಲ್ಲಿ ಕನಕಾಂಬರ ಬೆಳೆಯುತ್ತಿದ್ದು ಇದೂ ಸಹ ಉತ್ತಮ ಆದಾಯ ಕೊಡುತ್ತಿದೆ.</p><p>ಪ್ರತಿದಿನ 5ರಿಂದ 6 ಕೆ.ಜಿ ಕನಕಾoಬರ ಹೂ ಬಿಡಿಸುತ್ತಿದ್ದು ಪ್ರತಿ ಕೆ.ಜಿ ಗೆ ಕನಿಷ್ಠ ₹500 ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಇದರಿಂದ ನಿತ್ಯ ಕನಕಾoಬರ ಹೂವಿನಿಂದ ಕನಿಷ್ಠ ₹ 2,000 ಆದಾಯ ಗಳಿಸುತ್ತಿದ್ದಾರೆ. ಹಬ್ಬಗಳಲ್ಲಿ ಹೂವಿನ ಬೆಲೆ ಹೆಚ್ಚಾಗಿರುವುದರಿಂದ ಉತ್ತಮ ಆದಾಯ ಪಡೆಯುವರು.</p><p>ಕೃಷಿ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ ಹೂ ಬೇಸಾಯ ಅವರಿಗೆ ಆರ್ಥಿಕವಾಗಿ ಅನುಕೂಲ ತಂದಿದೆ. ‘ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನದಿಂದ ಭೂಮಿಯನ್ನು ನಂಬಿದರೆ ಯಾವತ್ತಿಗೂ ಮೋಸವಾಗುವುದಿಲ್ಲ’ ಎನ್ನುತ್ತಾರೆ ಶಶಿಕುಮಾರ್.</p><p>ಅರ್ಧ ಎಕರೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಬೆಳೆದಿದ್ದಾರೆ. ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಒಳ್ಳೆಯ ಆದಾಯ ದೊರೆಯುತ್ತಿದೆ. ಜೊತೆಗೆ ಎರಡು ಸೀಮೆ ಹಸುಗಳಿರುವುದರಿಂದ ಮನೆಗೆ ಹಾಲು, ಮೊಸರು, ತುಪ್ಪದ ಕೊರತೆ ಇಲ್ಲ. </p><p>ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 30 ಲೀಟರ್ ಹಾಲನ್ನು ಸ್ಥಳೀಯ ಡೇರಿಗೆ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಸಂಸಾರದ ನಿರ್ವಹಣೆ ತುಂಬಾ ಸುಲಭವಾಗಿದೆ. ವಾರಕ್ಕೊಮ್ಮೆ ಡೇರಿಯಿಂದ ಬಟವಾಡೆ ನೀಡುತ್ತಾರೆ. ಎಲ್ಲಾ ಖರ್ಚನ್ನು ಕಳೆದು ಕನಿಷ್ಠ 10 ಸಾವಿರ ಸಿಗುತ್ತದೆ ಎನ್ನುವುದು ಅವರ ಮಾತು. </p><p>ಜೊತೆಗೆ ಉಳಿಕೆ ಜಮೀನಿನಲ್ಲಿ ಜೋಳ, ರಾಗಿ, ನೇಪಿಯರ್ ಹುಲ್ಲು ಮತ್ತು ಜಮೀನಿನ ಬದುಗಳಲ್ಲಿ ಪಡವಲ ಕಾಯಿ, ತೆಂಗು, ಮಾವು, ಬಾಳೆ ಹೀಗೆ ಹಲವು ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ. ಇರುವ ಅಲ್ಪ ಭೂಮಿಯಲ್ಲಿಯೇ ಉತ್ತಮ ಆದಾಯ ಗಳಿಸುತ್ತಿದ್ದಾರೆ.</p><p>ಕೇವಲ ಒಂದು ಕೊಳವೆ ಬಾವಿಯಿಂದ, ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಸಿಗುವ ರೈನ್ ಟ್ಯೂಬ್ ಬಳಸಿಕೊಂಡು 4 ಎಕರೆ ಜಮೀನಿನಲ್ಲಿ ಯಶಸ್ವಿಯಾಗಿ ಕೃಷಿ ಮಾಡುತ್ತಿದ್ದಾರೆ.</p><p><strong>ಕೃಷಿ ಎನ್ನುವ ಬಂಗಾರದ ಬದುಕು</strong></p><p>ಕೃಷಿ ಎಂದರೆ ಹೊಲದಲ್ಲಿ ಉತ್ತು ಬಿತ್ತುವ ಕಾಯಕವಷ್ಟೇ ಅಲ್ಲ, ಕೋಳಿ ಸಾಕಣೆಯಿಂದ ಹಿಡಿದು ಹೈನುಗಾರಿಕೆವರೆಗೆ ಎಲ್ಲವೂ ಕೃಷಿಯೊಂದಿಗೆ ಬೆರೆತಿದೆ. ಎಲ್ಲವನ್ನೂ ಜೊತೆಯಲ್ಲಿ ಮಾಡಿದರೆ ಕೃಷಿ ಬಂಗಾರದ ಬದುಕು ಎನಿಸುತ್ತದೆ ಎನ್ನುವರು ಶಶಿಕುಮಾರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು</strong>: ‘ಎರಡು ಎಕರೆಯಲ್ಲಿ ಸುಗಂಧ ರಾಜ ಹೂ ಬೆಳೆದಿದ್ದೇನೆ. ನಿರಂತರ ಆದಾಯವಾಗಿ ಆದಾಯ ಬರುತ್ತಿದೆ. ನಿತ್ಯ 180 ರಿಂದ 200 ಕೆ.ಜಿ ಸುಗಂಧರಾಜ ಹೂ ಕೊಯ್ಲು ಮಾಡುತ್ತಿದ್ದು ಒಂದು ಕೆ.ಜಿಗೆ ಕನಿಷ್ಠ ₹50 ಸಿಕ್ಕರೂ ಪ್ರತಿದಿನ 10,000 ಸಿಗುತ್ತಿದೆ’–ಹೀಗೆ ತಮ್ಮ ಹೂ ಬೇಸಾಯದ ಬಗ್ಗೆ ಮಾಹಿತಿ ನೀಡಿದರು ತಾಲ್ಲೂಕಿನ ಕಾಚಮಾಚೇನಹಳ್ಳಿಯ ಯುವ ರೈತ ಶಶಿಕುಮಾರ್. </p><p>ಹೂ ಬೆಳೆಗಾರರಾಗಿ ಗಮನ ಸೆಳೆದಿರುವ ಶಶಿಕುಮಾರ್ ಅವರ ಬದುಕನ್ನು ಸಮೃದ್ಧಗೊಳಿಸಿರುವುದು ಸಹ ಹೂ ಬೇಸಾಯವೇ. </p><p>4 ಎಕರೆ ಜಮೀನಿನಲ್ಲಿ ನಿರಂತರವಾಗಿ ಆದಾಯ ಗಳಿಸುವ ಹೂಗಳನ್ನು ಬೆಳೆದು ಯಶಸ್ಸಿನ ಹಾದಿಯಲ್ಲಿದ್ದಾರೆ. ಅರ್ಧ ಎಕರೆಯಲ್ಲಿ ಕನಕಾಂಬರ ಬೆಳೆಯುತ್ತಿದ್ದು ಇದೂ ಸಹ ಉತ್ತಮ ಆದಾಯ ಕೊಡುತ್ತಿದೆ.</p><p>ಪ್ರತಿದಿನ 5ರಿಂದ 6 ಕೆ.ಜಿ ಕನಕಾoಬರ ಹೂ ಬಿಡಿಸುತ್ತಿದ್ದು ಪ್ರತಿ ಕೆ.ಜಿ ಗೆ ಕನಿಷ್ಠ ₹500 ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಇದರಿಂದ ನಿತ್ಯ ಕನಕಾoಬರ ಹೂವಿನಿಂದ ಕನಿಷ್ಠ ₹ 2,000 ಆದಾಯ ಗಳಿಸುತ್ತಿದ್ದಾರೆ. ಹಬ್ಬಗಳಲ್ಲಿ ಹೂವಿನ ಬೆಲೆ ಹೆಚ್ಚಾಗಿರುವುದರಿಂದ ಉತ್ತಮ ಆದಾಯ ಪಡೆಯುವರು.</p><p>ಕೃಷಿ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ ಹೂ ಬೇಸಾಯ ಅವರಿಗೆ ಆರ್ಥಿಕವಾಗಿ ಅನುಕೂಲ ತಂದಿದೆ. ‘ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನದಿಂದ ಭೂಮಿಯನ್ನು ನಂಬಿದರೆ ಯಾವತ್ತಿಗೂ ಮೋಸವಾಗುವುದಿಲ್ಲ’ ಎನ್ನುತ್ತಾರೆ ಶಶಿಕುಮಾರ್.</p><p>ಅರ್ಧ ಎಕರೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಬೆಳೆದಿದ್ದಾರೆ. ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಒಳ್ಳೆಯ ಆದಾಯ ದೊರೆಯುತ್ತಿದೆ. ಜೊತೆಗೆ ಎರಡು ಸೀಮೆ ಹಸುಗಳಿರುವುದರಿಂದ ಮನೆಗೆ ಹಾಲು, ಮೊಸರು, ತುಪ್ಪದ ಕೊರತೆ ಇಲ್ಲ. </p><p>ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 30 ಲೀಟರ್ ಹಾಲನ್ನು ಸ್ಥಳೀಯ ಡೇರಿಗೆ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಸಂಸಾರದ ನಿರ್ವಹಣೆ ತುಂಬಾ ಸುಲಭವಾಗಿದೆ. ವಾರಕ್ಕೊಮ್ಮೆ ಡೇರಿಯಿಂದ ಬಟವಾಡೆ ನೀಡುತ್ತಾರೆ. ಎಲ್ಲಾ ಖರ್ಚನ್ನು ಕಳೆದು ಕನಿಷ್ಠ 10 ಸಾವಿರ ಸಿಗುತ್ತದೆ ಎನ್ನುವುದು ಅವರ ಮಾತು. </p><p>ಜೊತೆಗೆ ಉಳಿಕೆ ಜಮೀನಿನಲ್ಲಿ ಜೋಳ, ರಾಗಿ, ನೇಪಿಯರ್ ಹುಲ್ಲು ಮತ್ತು ಜಮೀನಿನ ಬದುಗಳಲ್ಲಿ ಪಡವಲ ಕಾಯಿ, ತೆಂಗು, ಮಾವು, ಬಾಳೆ ಹೀಗೆ ಹಲವು ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ. ಇರುವ ಅಲ್ಪ ಭೂಮಿಯಲ್ಲಿಯೇ ಉತ್ತಮ ಆದಾಯ ಗಳಿಸುತ್ತಿದ್ದಾರೆ.</p><p>ಕೇವಲ ಒಂದು ಕೊಳವೆ ಬಾವಿಯಿಂದ, ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಸಿಗುವ ರೈನ್ ಟ್ಯೂಬ್ ಬಳಸಿಕೊಂಡು 4 ಎಕರೆ ಜಮೀನಿನಲ್ಲಿ ಯಶಸ್ವಿಯಾಗಿ ಕೃಷಿ ಮಾಡುತ್ತಿದ್ದಾರೆ.</p><p><strong>ಕೃಷಿ ಎನ್ನುವ ಬಂಗಾರದ ಬದುಕು</strong></p><p>ಕೃಷಿ ಎಂದರೆ ಹೊಲದಲ್ಲಿ ಉತ್ತು ಬಿತ್ತುವ ಕಾಯಕವಷ್ಟೇ ಅಲ್ಲ, ಕೋಳಿ ಸಾಕಣೆಯಿಂದ ಹಿಡಿದು ಹೈನುಗಾರಿಕೆವರೆಗೆ ಎಲ್ಲವೂ ಕೃಷಿಯೊಂದಿಗೆ ಬೆರೆತಿದೆ. ಎಲ್ಲವನ್ನೂ ಜೊತೆಯಲ್ಲಿ ಮಾಡಿದರೆ ಕೃಷಿ ಬಂಗಾರದ ಬದುಕು ಎನಿಸುತ್ತದೆ ಎನ್ನುವರು ಶಶಿಕುಮಾರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>