ಬೆಂಳೂರು: ನಗರದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡವು ಕೊರೊನಾ ವೈರಸ್ ಶಮನಗೊಳಿಸುವ 'ಯುವಿ ಸಾನಿಟೈಸರ್' ಅನ್ನು ಅಭಿವೃದ್ಧಿ ಪಡಿಸಿದೆ.
ಕೇಂದ್ರ ಸರ್ಕಾರದ 'ಉನ್ನತ ಭಾರತ ಅಭಿಯಾನ'ದ ಅಂಗವಾಗಿ ಈ ಸಾಧನ ಅಭಿವೃದ್ಧಿಪಡಿಸಲಾಗಿದೆ.
ಕೊರೊನಾ ತಡೆಗಟ್ಟುವ ಹಾಗೂ ಜನರಲ್ಲಿ ಸುರಕ್ಷತಾ ಅರಿವು ಮೂಡಿಸುವ ಸಲುವಾಗಿ 'ಹಳ್ಳಿಗಳ ಕಡೆಗೆ ನಮ್ಮ ನಡಿಗೆ' ಹೆಸರಿನಲ್ಲಿ ಗ್ರಾಮೀಣ ಭಾಗದ ಜನರಿಗೆ ಈ ಸ್ಯಾನಿಟೈಸರ್ ಬಾಕ್ಸ್ ಗಳನ್ನು ಉಚಿತವಾಗಿ ವಿತರಿಸುತ್ತಿದೆ.
ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಸಂಜಯ್ ಜೈನ್, 'ಚಿಕ್ಕಬಳ್ಳಾಪುರ ಜಿಲ್ಲೆಯ ಚನ್ನಸಂದ್ರ, ಉಪ್ಪಾರಪೇಟೆ, ಕುರುಬೂರು ಮತ್ತು ದೊಡ್ಡ ಗಾಜನೂರು ಗ್ರಾಮಗಳಲ್ಲಿ 100ಕ್ಕೂ ಹೆಚ್ಚು 'ಯುವಿ ಸ್ಯಾನಿಟೈಸರ್' ಕಿಟ್ಗಳನ್ನು ವಿತರಿಸಲಾಗಿದೆ' ಎಂದರು.