ಗ್ರಾಮೀಣ ಪ್ರದೇಶದಲ್ಲಿ ಭಾನುವಾರ ನಸುಕಿನಿಂದಲೇ ಮನೆ ಆವರಣವನ್ನು ಶುಚಿಗೊಳಿಸಿದ ಗೃಹಿಣಿಯರು ನಂತರ ಸಗಣಿ ಸಾರಿಸಿ, ಬಣ್ಣಬಣ್ಣದ ರಂಗೋಲಿ ಬಿಡಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರು ಕೃಷಿ ಉಪಕರಣ, ಕತ್ತಿ, ಗುರಾಣಿ, ಅಸ್ತ್ರಗಳು, ವಾಹನಗಳನ್ನು ಸ್ವಚ್ಛಗೊಳಿಸಿ ಬಾಳೆಕಂಬ ಕಟ್ಟಿ, ಹೂವಿನಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು.