<p><strong>ಚೇಳೂರು</strong> (ಬಾಗೇಪಲ್ಲಿ): ಚೇಳೂರು ತಾಲ್ಲೂಕಿನ ದಿಗವನೆಟಕುಂಟಪಲ್ಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮಹಿಳೆಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ.</p>.<p>ಮೀನು ಹಿಡಿದು, ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆ ಆಶಾಬೀ (54) ಮೃತಪಟ್ಟವರು. </p>.<p>ಈ ಕುಟುಂಬದವರು ಕೆರೆ, ಕುಂಟೆಗಳಲ್ಲಿ ಮೀನು ಹಿಡಿದು ಮಾರಾಟ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡಿಕೊಂಡಿದ್ದರು. ಗ್ರಾಮದಲ್ಲಿರುವ ಕೆರೆಯಲ್ಲಿ ಹಗಲಿನಲ್ಲಿ ಬಲೆಗಳನ್ನು ಹಾಕಿ, ರಾತ್ರಿ ಸಮಯದಲ್ಲಿ ಬಲೆಗೆ ಬಿದ್ದ ಮೀನುಗಳನ್ನು ಹಿಡಿದು ಮಾರುತ್ತಿದ್ದರು. </p>.<p>ಗುರುವಾರ ರಾತ್ರಿ ಎಂದಿನಂತೆ ಕೆರೆಗೆ ದೋಣಿ ಇಳಿಸಿದ್ದಾರೆ. ಕೆರೆಯಲ್ಲಿನ 11 ಕೆ.ವಿ ವಿದ್ಯುತ್ ತಂತಿಗಳು ದೋಣಿಯಲ್ಲಿನ ಮಾಬುಸಾಬ್ ಮತ್ತು ಅವರ ಪತ್ನಿ ಆಶಾಬೀಗೆ ತಗುಲಿವೆ. ಇದರಿಂದ ಆಶಾೀ ಸ್ಥಳದಲ್ಲೇ ಮೃತಪಟ್ಟಿದ್ದು, ಮಾಬುಸಾಬ್ ಗಾಯಗೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. </p>.<p>ಸ್ಥಳಕ್ಕೆ ಬಂದ ಬಾಗೇಪಲ್ಲಿ ಅಗ್ನಿಶಾಮಕ ಸಿಬ್ಬಂದಿ, ಕೆರೆಯಲ್ಲಿ <br>ಮುಳುಗಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ. ಬಾಗೇಪಲ್ಲಿ <br>ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. </p>.<p>ಮೃತಪಟ್ಟ ಮಹಿಳೆ ಕುಟುಂಬಕ್ಕೆ ಸರ್ಕಾರ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಚೇಳೂರು ತಾಲ್ಲೂಕು ಮುಖಂಡ ಜಹೀರ್ ಬೇಗ್ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೇಳೂರು</strong> (ಬಾಗೇಪಲ್ಲಿ): ಚೇಳೂರು ತಾಲ್ಲೂಕಿನ ದಿಗವನೆಟಕುಂಟಪಲ್ಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮಹಿಳೆಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ.</p>.<p>ಮೀನು ಹಿಡಿದು, ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆ ಆಶಾಬೀ (54) ಮೃತಪಟ್ಟವರು. </p>.<p>ಈ ಕುಟುಂಬದವರು ಕೆರೆ, ಕುಂಟೆಗಳಲ್ಲಿ ಮೀನು ಹಿಡಿದು ಮಾರಾಟ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡಿಕೊಂಡಿದ್ದರು. ಗ್ರಾಮದಲ್ಲಿರುವ ಕೆರೆಯಲ್ಲಿ ಹಗಲಿನಲ್ಲಿ ಬಲೆಗಳನ್ನು ಹಾಕಿ, ರಾತ್ರಿ ಸಮಯದಲ್ಲಿ ಬಲೆಗೆ ಬಿದ್ದ ಮೀನುಗಳನ್ನು ಹಿಡಿದು ಮಾರುತ್ತಿದ್ದರು. </p>.<p>ಗುರುವಾರ ರಾತ್ರಿ ಎಂದಿನಂತೆ ಕೆರೆಗೆ ದೋಣಿ ಇಳಿಸಿದ್ದಾರೆ. ಕೆರೆಯಲ್ಲಿನ 11 ಕೆ.ವಿ ವಿದ್ಯುತ್ ತಂತಿಗಳು ದೋಣಿಯಲ್ಲಿನ ಮಾಬುಸಾಬ್ ಮತ್ತು ಅವರ ಪತ್ನಿ ಆಶಾಬೀಗೆ ತಗುಲಿವೆ. ಇದರಿಂದ ಆಶಾೀ ಸ್ಥಳದಲ್ಲೇ ಮೃತಪಟ್ಟಿದ್ದು, ಮಾಬುಸಾಬ್ ಗಾಯಗೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. </p>.<p>ಸ್ಥಳಕ್ಕೆ ಬಂದ ಬಾಗೇಪಲ್ಲಿ ಅಗ್ನಿಶಾಮಕ ಸಿಬ್ಬಂದಿ, ಕೆರೆಯಲ್ಲಿ <br>ಮುಳುಗಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ. ಬಾಗೇಪಲ್ಲಿ <br>ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. </p>.<p>ಮೃತಪಟ್ಟ ಮಹಿಳೆ ಕುಟುಂಬಕ್ಕೆ ಸರ್ಕಾರ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಚೇಳೂರು ತಾಲ್ಲೂಕು ಮುಖಂಡ ಜಹೀರ್ ಬೇಗ್ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>