ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಂಶುಪಾಲ ಡಾ.ಎಸ್.ಅನಂತ, ‘ಈ ಹಿಂದೆ ನಡೆದ ಪೋಷಕರ ಸಭೆ ತೀರ್ಮಾನವನ್ನು ಯಾರೂ ಮೀರುವಂತಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಘಟನೆ ಮರುಕಳಿಸಿದರೆ ಪೋಷಕರನ್ನು ಕರೆಯಿಸಿ, ಸಂಬಂಧಿಸಿದ ವಿದ್ಯಾರ್ಥಿಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.