ಸೋಮವಾರ ಬೆಳಿಗ್ಗೆ ಗೋಣಿಬೀಡು ಹೋಬಳಿಯ ಜಿ. ಹೊಸಳ್ಳಿ ಗ್ರಾಮದ ಬಾಲಕಿಯೊಬ್ಬಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಎಂಜಿಎಂ ಆಸ್ಪತ್ರೆಗೆ ಕರೆ ತರಲಾಗಿತ್ತು. ಶೇ 90ರಷ್ಟು ಸುಟ್ಟ ಗಾಯವಾಗಿದ್ದರಿಂದ ಕೂಡಲೇ ಮಂಗಳೂರಿಗೆ ಕಳುಹಿಸಲು ಸಿದ್ಧತೆ ಮಾಡಿ, ಮಂಜುನಾಥ್ ಅವರ ಆಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿತ್ತು. ಆದರೆ, ಚಾರ್ಮಾಡಿ ಘಾಟಿಗೆ ತಲುಪುತ್ತಿದ್ದಂತೆ ಆಂಬುಲೆನ್ಸ್ ನ ಸೈರನ್ ಕೈಕೊಟ್ಟಿದ್ದು, ವಾಹನ ಸಾಗಾಟಕ್ಕೆ ಅಡ್ಡಿಯಾಗಿತ್ತು. ಕೂಡಲೇ ಜಾಗೃತರಾದ ಮಂಜುನಾಥ್, ಕರ್ನಾಟಕ ಆಂಬುಲೆನ್ಸ್ ಆರ್ಗನೈಜೆಷನ್ ವಾಟ್ಸ್ಆ್ಯಪ್ ಗ್ರೂಪಿಗೆ ಮಾಹಿತಿ ರವಾನಿಸಿದ್ದು, ಉಜಿರೆಯಿಂದ ಮಂಗಳೂರಿನವರೆಗೂ ಬೇರೆ ಬೇರೆ ಆಂಬ್ಯುಲೆನ್ಸ್ಗಳು ಬೆಂಗಾವಲಾಗಿ ತೆರಳಿ, ಗಾಯಾಳುವನ್ನು ಎರಡು ಗಂಟೆಗಳೊಳಗೆ ಮಂಗಳೂರು ತಲುಪಲು ನೆರವಾಗಿದ್ದಾರೆ.