<p><strong>ಚಿಕ್ಕಮಗಳೂರು</strong>: ಅನಾನಸು ಹಣ್ಣಿಗೆ ಮಾರುಕಟ್ಟೆ ಸಮಸ್ಯೆ, ದುಗ್ಗಾಣಿ ಬೆಲೆ, ಹೊಲದಿಂದ ಸಾಗಣೆ ತಾಪತ್ರಯದಿಂದಾಗಿ ಬೆಳೆಗಾರ ನಷ್ಟದ ಶೂಲಕ್ಕೆ ಸಿಲುಕುವಂತಾಗಿದೆ.</p>.<p>ತರೀಕೆರೆ ತಾಲ್ಲೂಕಿನ ಗೋಪಾಲ ಕಾಲೊನಿಯ ರೈತ ಜಯಣ್ಣ ಅವರು ಒಂದು ಎಕರೆ ಜಮೀನಿನಲ್ಲಿ ಅನಾನಸು ಬೆಳೆದಿದ್ದಾರೆ. ಫಸಲು ಚೆನ್ನಾಗಿದ್ದು, ಕಾಯಿ ಕೊಯ್ಲಿನ ಹಂತದಲ್ಲಿದೆ.</p>.<p>ಪುಡಿ ವರ್ತಕರ ದುಗ್ಗಾಣಿ ಬೆಲೆ ತಂತ್ರ, ಮಾರುಕಟ್ಟೆ ಸಮಸ್ಯೆಯಿಂದಾಗಿ ಕಂಗಾಲಾಗಿದ್ದಾರೆ. ಐದು ಕ್ವಿಂಟಲ್ನಷ್ಟು ಅನಾನಸನ್ನು ಕೆ.ಜಿ.ಗೆ ₹ 4 ದರದಲ್ಲಿ ಸ್ಥಳೀಯ ಸಣ್ಣಪುಟ್ಟ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ.</p>.<p>ಬೆಳೆಗಾರ ಜಯಣ್ಣ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಈ ಭಾಗದಲ್ಲಿ ಪ್ರಾಯೋಗಿಕವಾಗಿ ಅನಾನಸು ಬೆಳೆದಿದ್ದೇನೆ. ಫಸಲು ಚೆನ್ನಾಗಿದೆ, ಮಾರಾಟ ಮಾಡಲು ಬೆಲೆ ಇಲ್ಲ. ಕೆ.ಜಿ.ಗೆ ₹ 4 ದರಕ್ಕೆ ಕೇಳುತ್ತಾರೆ. ಕನಿಷ್ಠ ₹ 20ರಿಂದ 25 ದರ ಸಿಕ್ಕಿದರೆ ಗಿಟ್ಟುತ್ತದೆ. ಇಲ್ಲದಿದ್ದರೆ ಬೆಳೆಯಲು ತಗುಲಿದ ಖರ್ಚು ಸಿಗಲ್ಲ’ ಎಂದು ಸಂಕಷ್ಟ ತೋಡಿಕೊಂಡರು.</p>.<p>‘ಇನ್ನು 80 ಕ್ವಿಂಟಲ್ಗೂ ಹೆಚ್ಚು ಕಾಯಿ ಹೊಲದಲ್ಲಿ ಇದೆ. ಹೊಲದಿಂದ ಸಾಗಣೆ ಮಾಡುವುದು ಬಹಳ ತಾಪತ್ರಯವಾಗಿದೆ. ಸರ್ಕಾರ ಖರೀದಿಗೆ ಮುಂದಾಗಿ, ಬೆಳೆಗಾರರ ಕೈಹಿಡಿಯಬೇಕು’ ಎಂದು ಕೋರಿದರು.</p>.<p>‘ಈ ಭಾಗದವರು ಅನಾನಸು ಅನ್ನು ಸಾಮಾನ್ಯವಾಗಿ ಹಾಸನ ಮಾರುಕಟ್ಟೆಗೆ ಒಯ್ಯುತ್ತಾರೆ. ಹಾಸನದಿಂದ ರಾಜಸ್ತಾನ, ದೆಹಲಿ, ಪಂಜಾಬ್, ಹರಿಯಾಣ ಮೊದಲಾದ ಕಡೆಗಳಿಗೆ ರವಾನೆಯಾಗುತ್ತದೆ. ಹೊಲದಿಂದ ಸ್ಥಳೀಯ ಮಾರುಕಟ್ಟೆ ಸಾಗಿಸುವುದೂ ಕಷ್ಟವಾಗಿದೆ’ ಎಂಬುದು ರೈತರ ಅಳಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಅನಾನಸು ಹಣ್ಣಿಗೆ ಮಾರುಕಟ್ಟೆ ಸಮಸ್ಯೆ, ದುಗ್ಗಾಣಿ ಬೆಲೆ, ಹೊಲದಿಂದ ಸಾಗಣೆ ತಾಪತ್ರಯದಿಂದಾಗಿ ಬೆಳೆಗಾರ ನಷ್ಟದ ಶೂಲಕ್ಕೆ ಸಿಲುಕುವಂತಾಗಿದೆ.</p>.<p>ತರೀಕೆರೆ ತಾಲ್ಲೂಕಿನ ಗೋಪಾಲ ಕಾಲೊನಿಯ ರೈತ ಜಯಣ್ಣ ಅವರು ಒಂದು ಎಕರೆ ಜಮೀನಿನಲ್ಲಿ ಅನಾನಸು ಬೆಳೆದಿದ್ದಾರೆ. ಫಸಲು ಚೆನ್ನಾಗಿದ್ದು, ಕಾಯಿ ಕೊಯ್ಲಿನ ಹಂತದಲ್ಲಿದೆ.</p>.<p>ಪುಡಿ ವರ್ತಕರ ದುಗ್ಗಾಣಿ ಬೆಲೆ ತಂತ್ರ, ಮಾರುಕಟ್ಟೆ ಸಮಸ್ಯೆಯಿಂದಾಗಿ ಕಂಗಾಲಾಗಿದ್ದಾರೆ. ಐದು ಕ್ವಿಂಟಲ್ನಷ್ಟು ಅನಾನಸನ್ನು ಕೆ.ಜಿ.ಗೆ ₹ 4 ದರದಲ್ಲಿ ಸ್ಥಳೀಯ ಸಣ್ಣಪುಟ್ಟ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ.</p>.<p>ಬೆಳೆಗಾರ ಜಯಣ್ಣ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಈ ಭಾಗದಲ್ಲಿ ಪ್ರಾಯೋಗಿಕವಾಗಿ ಅನಾನಸು ಬೆಳೆದಿದ್ದೇನೆ. ಫಸಲು ಚೆನ್ನಾಗಿದೆ, ಮಾರಾಟ ಮಾಡಲು ಬೆಲೆ ಇಲ್ಲ. ಕೆ.ಜಿ.ಗೆ ₹ 4 ದರಕ್ಕೆ ಕೇಳುತ್ತಾರೆ. ಕನಿಷ್ಠ ₹ 20ರಿಂದ 25 ದರ ಸಿಕ್ಕಿದರೆ ಗಿಟ್ಟುತ್ತದೆ. ಇಲ್ಲದಿದ್ದರೆ ಬೆಳೆಯಲು ತಗುಲಿದ ಖರ್ಚು ಸಿಗಲ್ಲ’ ಎಂದು ಸಂಕಷ್ಟ ತೋಡಿಕೊಂಡರು.</p>.<p>‘ಇನ್ನು 80 ಕ್ವಿಂಟಲ್ಗೂ ಹೆಚ್ಚು ಕಾಯಿ ಹೊಲದಲ್ಲಿ ಇದೆ. ಹೊಲದಿಂದ ಸಾಗಣೆ ಮಾಡುವುದು ಬಹಳ ತಾಪತ್ರಯವಾಗಿದೆ. ಸರ್ಕಾರ ಖರೀದಿಗೆ ಮುಂದಾಗಿ, ಬೆಳೆಗಾರರ ಕೈಹಿಡಿಯಬೇಕು’ ಎಂದು ಕೋರಿದರು.</p>.<p>‘ಈ ಭಾಗದವರು ಅನಾನಸು ಅನ್ನು ಸಾಮಾನ್ಯವಾಗಿ ಹಾಸನ ಮಾರುಕಟ್ಟೆಗೆ ಒಯ್ಯುತ್ತಾರೆ. ಹಾಸನದಿಂದ ರಾಜಸ್ತಾನ, ದೆಹಲಿ, ಪಂಜಾಬ್, ಹರಿಯಾಣ ಮೊದಲಾದ ಕಡೆಗಳಿಗೆ ರವಾನೆಯಾಗುತ್ತದೆ. ಹೊಲದಿಂದ ಸ್ಥಳೀಯ ಮಾರುಕಟ್ಟೆ ಸಾಗಿಸುವುದೂ ಕಷ್ಟವಾಗಿದೆ’ ಎಂಬುದು ರೈತರ ಅಳಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>