ಹಿರಿಯ ತೋಟಗಾರಿಕಾ ನಿರ್ದೇಶಕ ಎಚ್.ಕೆ.ಜಯದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘1914ರಲ್ಲಿ ಪ್ರಥಮ ಬಾರಿಗೆ ಕೇರಳ ರಾಜ್ಯದಲ್ಲಿ ಅಡಿಕೆ ಹಳದಿ ಎಲೆರೋಗ ಪ್ರಾರಂಭವಾಗಿತ್ತು. ನಂತರ ತಮಿಳುನಾಡು,ಕರ್ನಾಟಕ ಆಂದ್ರಪ್ರದೇಶ, ಮಹಾರಾಷ್ಟ್ರಕ್ಕೂ ವ್ಯಾಪಿಸಿದೆ. 1955ರಲ್ಲಿ ಕೇರಳ ರಾಜ್ಯದಲ್ಲಿ ಅಡಿಕೆ ಹಳದಿ ರೋಗಕ್ಕೆ ಪ್ರಥಮ ಬಾರಿಗೆ ಸಂಶೋಧನೆ ಪ್ರಾರಂಭವಾಯಿತು. ಮೊದಲು ಬೇರು ಹುಳು ಎಂದು ತೀರ್ಮಾನಿಸಲಾಗಿತ್ತು. ನಂತರ ಬ್ಯಾಕ್ಟೀರಿಯಾ, ಪಂಗಸ್ ವೈರಸ್ ನಿಂದ ಅಡಿಕೆ ಹಳದಿ ಎಲೆರೋಗ ಬರುತ್ತದೆ ಎಂದು ತೀರ್ಮಾನಿಸಲಾಗಿತ್ತು .ಅಂತಿಮವಾಗಿ ಪ್ಲೈಟೋ ಪಾಸ್ಮಾ ಎಂಬ ರೋಗ ಎಂದು ತೀರ್ಮಾನಕ್ಕೆ ಬರಲಾಗಿದೆ. ರೋಗ ಬಂದ ತೋಟಗಳನ್ನು ಸಮರ್ಪವಾಗಿ ನಿರ್ವಹಣೆ ಮಾಡಿದರೆ ಅಡಿಕೆ ಫಲಸಲು ಕಡಿಮೆಯಾಗುವುದಿಲ್ಲ, ಮಣ್ಣು ,ನೀರು ಗೊಬ್ಬರದ ನಿರ್ವಹಣೆ ಸರಿಯಾಗಿ ಮಾಡಬೇಕಾಗಿದೆ. ರೋಗ ಬಂದ ತೋಟಗಳಲ್ಲಿ ಅಂತರ ಬೆಳೆ ಬೆಳೆಯ ಬೇಕು’ ಎಂದರು.