<p><strong>ಅಜ್ಜಂಪುರ: </strong>ಅಣ್ಣಯ್ಯ, ಬೀರಪ್ಪ, ಬೀರಲಿಂಗೇಶ್ವರ, ದಂಡಿನ ದಳಪತಿ, ಹುಚ್ಚೀರದಿಮ್ಮಣ್ಣ…. ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಭಕ್ತರ ಆರಾಧ್ಯ ದೈವ ಶ್ರೀ ಬೀರಲಿಂಗೇಶ್ವರ ಸ್ವಾಮಿ ನೂತನ ದೇವಾಲಯ ನಾಳೆ(ಬುಧವಾರ) ಲೋಕಾರ್ಪಣೆಗೊಳ್ಳಲಿದೆ. </p>.<p> ಮುರುಡೇಶ್ವರದ ಶಿಲ್ಪಿ ರವಿಚಂದ್ರನ್ ಮತ್ತು ತಂಡದವರ ಕೈಚಳಕದಲ್ಲಿ, ದೊಡ್ಡಬಳ್ಳಾಪುರದ ಬಲ್ಕ ನುಣುಪು ಕಲ್ಲುಗಳಿಂದ ನಿರ್ಮಾಣಗೊಂಡಿರುವ ದೇವಾಲಯದಲ್ಲಿ, ಉಡುಪಿ-ಕಾರ್ಕಳದ ಕೃಷ್ಣ ಶಿಲೆಯಲ್ಲಿ ರೂಪು ಪಡೆದಿರುವ ಶಿಲ್ಪಗಳು ನೋಡುಗರನ್ನು ಆಕರ್ಷಿಸುತ್ತಿವೆ.</p>.<p> ಆರಂಭದಲ್ಲಿ, ಸಿಂಹಗಳ ಮಧ್ಯೆ ಶಂಖ, ಚಕ್ರ, ನಾಮದ ಕೆತ್ತನೆಯುಳ್ಳ ದ್ವಾರಪಾಲಕರನ್ನು ಒಳಗೊಂಡ ಕಲ್ಲಿನಿಂದಲೇ ನಿರ್ಮಾಣಗೊಂಡಿರುವ ದ್ವಾರ ಬಾಗಿಲು ಭಕ್ತರನ್ನು ಸ್ವಾಗತಿಸುತ್ತಿದೆ. ನಂತರದಲ್ಲಿ, ಹತ್ತಾರು ಮೀಟರ್ ವಿಸ್ತೀರ್ಣದಲ್ಲಿನ ಕಲ್ಲಿನ ನೆಲಹಾಸು ಹೊದ್ದಿರುವ ಆವರಣವನ್ನು, ಭಕ್ತರಿಗೆ ಕುಳಿತುಕೊಳ್ಳಲು ಸಿದ್ಧಗೊಳಿಸಲಾಗಿದೆ.</p>.<p> 9 ಅಡಿ ಆಳದಲ್ಲಿ 8X4 ಅಡಿಯ ದಿಮ್ಮಿಗಲ್ಲುಗಳ ಗಟ್ಟಿ ತಳಪಾಯದ ಮೇಲೆ, 4 ಒಳ ಮತ್ತು ಹೊರ ಕಲ್ಲುಕಂಭಗಳ ಆಧಾರದ ಮೇಲೆ ಇಡೀ ದೇವಾಲಯ ನಿರ್ಮಾಣಗೊಂಡಿದೆ. ಹೊರ ಕಂಬಗಳು ಕುದುರೆ ಮತ್ತು ಒಳಕಂಬಗಳು ಬಳ್ಳಿ, ಎಲೆಗಳ ಕೆತ್ತನೆಯಲ್ಲಿ ಮೂಡಿಬಂದಿವೆ. </p>.<p> ಜಗುಲಿ, ಹಜಾರ, ಗರ್ಭಗುಡಿಯ ಚಾವಣಿಯ ಕಲ್ಲಿನಲ್ಲಿ ಹೆಚ್ಚಾಗಿ ಬಳ್ಳಿ, ಎಲೆ, ಹೂವು ಚಿತ್ರಣ ಹಾಗೂ ದೇವಾಲಯದ ಗೋಡೆಯ ಕೆಳಭಾಗದಲ್ಲಿ ಕೆತ್ತನೆಗೊಂಡಿರುವ ನೂರಾರು ಕುದುರೆಗಳ ಸಾಲು ದೇವಾಲಯದ ರೂಪವನ್ನು ಮತ್ತಷ್ಟು ಶೃಂಗಾರಗೊಳಿಸಿದೆ. </p>.<p> ದೇವಾಲಯದ ಹೊರಗೋಡೆಯಲ್ಲಿ ಗಣಪ, ಸುಬ್ರಹ್ಮಣ್ಯ, ವೀರಭದ್ರೇಶ್ವರ, ಶಿವ, ಗುರುಸಿದ್ದರಾಮೇಶ್ವರ, ಚಂದ್ರಮೌಳೇಶ್ವರ, ಬ್ರಹ್ಮ ವಿಷ್ಣು ಮಹೇಶ್ವರರ 4 ಅಡಿ ಎತ್ತರದ ಮೂರ್ತಿಗಳನ್ನು ಕೆತ್ತಲಾಗಿದೆ. ಗರ್ಭಗುಡಿಯ ಮೇಲೆ 34.5 ಅಡಿ ಎತ್ತರ ತಲೆಎತ್ತಿರುವ ಗೋಪುರದಲ್ಲಿ ಲಕ್ಷ್ಮಿ, ಸರಸ್ವತಿ, ಪಾರ್ವತಿ, ಆಂಜನೇಯ ಸ್ವಾಮಿ ವಿಗ್ರಹಗಳು ಇವೆ.</p>.<p> ‘ಶ್ರೀ ಬೀರಲಿಂಗೇಶ್ವರ ಸ್ವಾಮಿ ಅಪ್ಪಣೆಯಂತೆ, ವಾಸ್ತು ಪ್ರಕಾರವಾಗಿ ದೇವಾಲಯ ನಿರ್ಮಿಸಲಾಗಿದೆ. ಪ್ರತೀ ಹಂತದಲ್ಲೂ ಸ್ವಾಮಿಯ ಸಲಹೆ-ಸೂಚನೆ ಪಾಲಿಸಲಾಗಿದೆ. ಇದರಿಂದ ದೇವಾಲಯ ಅಚ್ಚುಕಟ್ಟಾಗಿ ರೂಪ ತಳೆದಿದೆ’ ಎಂದು ದೇವಾಲಯ ನಿರ್ಮಿಸಿದ ಮುರುಡೇಶ್ವರದ ಶಿಲ್ಪಿ ರವಿಚಂದ್ರನ್ ತಿಳಿಸಿದ್ದಾರೆ.</p>.<p> ‘ಮಂದಿರ ನಿರ್ಮಾಣಕ್ಕೆ, ದೇವಾಲಯ ನಿರ್ಮಾಣ ಸಮಿತಿ ಶ್ರಮಿಸಿದೆ. ಇದಕ್ಕೆ ದೇವರ ಬುಡಕಟ್ಟು, ಹರಿವಾಣ, ಎಲ್ಲಾ ಸಮಾಜ ಬಾಂಧವರು, ಸುತ್ತಮುತ್ತಲ ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಇದರಿಂದಾಗಿ ಸುಮಾರು ₹3 ಕೋಟಿ ವೆಚ್ಚದಲ್ಲಿ ದೇವಾಲಯ ನೆಲೆಗೊಂಡಿದೆ’ ಎಂದು ಮುಖಂಡ ಎಂ.ಕೃಷ್ಣಮೂರ್ತಿ ಹೇಳಿದರು.</p>.<p> ದೇವಾಲಯ ನಿರ್ಮಾಣ ಪೂರ್ಣಗೊಂಡಿದ್ದು, ನಾಳೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ದೇವಾಲಯ ನಿರ್ಮಾಣ ಸಮಿತಿಯ ಜಿ. ನಟರಾಜ್ ತಿಳಿಸಿದ್ದಾರೆ.</p>.<p> ‘ಇಡೀ ದೇವಾಲಯ ಕಲ್ಪಿನಿಂದಲೇ ನಿರ್ಮಾಣಗೊಂಡಿದೆ. ದೇವಾಲಯದಲ್ಲಿನ ಸೂಕ್ಷ್ಮ ಕೆತ್ತನೆಗಳು ಹಿಂದಿನ ವಾಸ್ತು ಶಿಲ್ಪವನ್ನು ನೆನಪಿಸುವಂತಿವೆ. ಶಿಲ್ಪಿಯ ಕಲಾ ಕುಸುರಿ ಭವ್ಯ ಮಂದಿರಕ್ಕೆ ಮೆರಗು ತಂದಿದೆ’ ಎಂದು ತರೀಕೆರೆಯ ಟಿ.ಜಿ. ಶಶಾಂಕ್ ಹರ್ಷ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಜ್ಜಂಪುರ: </strong>ಅಣ್ಣಯ್ಯ, ಬೀರಪ್ಪ, ಬೀರಲಿಂಗೇಶ್ವರ, ದಂಡಿನ ದಳಪತಿ, ಹುಚ್ಚೀರದಿಮ್ಮಣ್ಣ…. ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಭಕ್ತರ ಆರಾಧ್ಯ ದೈವ ಶ್ರೀ ಬೀರಲಿಂಗೇಶ್ವರ ಸ್ವಾಮಿ ನೂತನ ದೇವಾಲಯ ನಾಳೆ(ಬುಧವಾರ) ಲೋಕಾರ್ಪಣೆಗೊಳ್ಳಲಿದೆ. </p>.<p> ಮುರುಡೇಶ್ವರದ ಶಿಲ್ಪಿ ರವಿಚಂದ್ರನ್ ಮತ್ತು ತಂಡದವರ ಕೈಚಳಕದಲ್ಲಿ, ದೊಡ್ಡಬಳ್ಳಾಪುರದ ಬಲ್ಕ ನುಣುಪು ಕಲ್ಲುಗಳಿಂದ ನಿರ್ಮಾಣಗೊಂಡಿರುವ ದೇವಾಲಯದಲ್ಲಿ, ಉಡುಪಿ-ಕಾರ್ಕಳದ ಕೃಷ್ಣ ಶಿಲೆಯಲ್ಲಿ ರೂಪು ಪಡೆದಿರುವ ಶಿಲ್ಪಗಳು ನೋಡುಗರನ್ನು ಆಕರ್ಷಿಸುತ್ತಿವೆ.</p>.<p> ಆರಂಭದಲ್ಲಿ, ಸಿಂಹಗಳ ಮಧ್ಯೆ ಶಂಖ, ಚಕ್ರ, ನಾಮದ ಕೆತ್ತನೆಯುಳ್ಳ ದ್ವಾರಪಾಲಕರನ್ನು ಒಳಗೊಂಡ ಕಲ್ಲಿನಿಂದಲೇ ನಿರ್ಮಾಣಗೊಂಡಿರುವ ದ್ವಾರ ಬಾಗಿಲು ಭಕ್ತರನ್ನು ಸ್ವಾಗತಿಸುತ್ತಿದೆ. ನಂತರದಲ್ಲಿ, ಹತ್ತಾರು ಮೀಟರ್ ವಿಸ್ತೀರ್ಣದಲ್ಲಿನ ಕಲ್ಲಿನ ನೆಲಹಾಸು ಹೊದ್ದಿರುವ ಆವರಣವನ್ನು, ಭಕ್ತರಿಗೆ ಕುಳಿತುಕೊಳ್ಳಲು ಸಿದ್ಧಗೊಳಿಸಲಾಗಿದೆ.</p>.<p> 9 ಅಡಿ ಆಳದಲ್ಲಿ 8X4 ಅಡಿಯ ದಿಮ್ಮಿಗಲ್ಲುಗಳ ಗಟ್ಟಿ ತಳಪಾಯದ ಮೇಲೆ, 4 ಒಳ ಮತ್ತು ಹೊರ ಕಲ್ಲುಕಂಭಗಳ ಆಧಾರದ ಮೇಲೆ ಇಡೀ ದೇವಾಲಯ ನಿರ್ಮಾಣಗೊಂಡಿದೆ. ಹೊರ ಕಂಬಗಳು ಕುದುರೆ ಮತ್ತು ಒಳಕಂಬಗಳು ಬಳ್ಳಿ, ಎಲೆಗಳ ಕೆತ್ತನೆಯಲ್ಲಿ ಮೂಡಿಬಂದಿವೆ. </p>.<p> ಜಗುಲಿ, ಹಜಾರ, ಗರ್ಭಗುಡಿಯ ಚಾವಣಿಯ ಕಲ್ಲಿನಲ್ಲಿ ಹೆಚ್ಚಾಗಿ ಬಳ್ಳಿ, ಎಲೆ, ಹೂವು ಚಿತ್ರಣ ಹಾಗೂ ದೇವಾಲಯದ ಗೋಡೆಯ ಕೆಳಭಾಗದಲ್ಲಿ ಕೆತ್ತನೆಗೊಂಡಿರುವ ನೂರಾರು ಕುದುರೆಗಳ ಸಾಲು ದೇವಾಲಯದ ರೂಪವನ್ನು ಮತ್ತಷ್ಟು ಶೃಂಗಾರಗೊಳಿಸಿದೆ. </p>.<p> ದೇವಾಲಯದ ಹೊರಗೋಡೆಯಲ್ಲಿ ಗಣಪ, ಸುಬ್ರಹ್ಮಣ್ಯ, ವೀರಭದ್ರೇಶ್ವರ, ಶಿವ, ಗುರುಸಿದ್ದರಾಮೇಶ್ವರ, ಚಂದ್ರಮೌಳೇಶ್ವರ, ಬ್ರಹ್ಮ ವಿಷ್ಣು ಮಹೇಶ್ವರರ 4 ಅಡಿ ಎತ್ತರದ ಮೂರ್ತಿಗಳನ್ನು ಕೆತ್ತಲಾಗಿದೆ. ಗರ್ಭಗುಡಿಯ ಮೇಲೆ 34.5 ಅಡಿ ಎತ್ತರ ತಲೆಎತ್ತಿರುವ ಗೋಪುರದಲ್ಲಿ ಲಕ್ಷ್ಮಿ, ಸರಸ್ವತಿ, ಪಾರ್ವತಿ, ಆಂಜನೇಯ ಸ್ವಾಮಿ ವಿಗ್ರಹಗಳು ಇವೆ.</p>.<p> ‘ಶ್ರೀ ಬೀರಲಿಂಗೇಶ್ವರ ಸ್ವಾಮಿ ಅಪ್ಪಣೆಯಂತೆ, ವಾಸ್ತು ಪ್ರಕಾರವಾಗಿ ದೇವಾಲಯ ನಿರ್ಮಿಸಲಾಗಿದೆ. ಪ್ರತೀ ಹಂತದಲ್ಲೂ ಸ್ವಾಮಿಯ ಸಲಹೆ-ಸೂಚನೆ ಪಾಲಿಸಲಾಗಿದೆ. ಇದರಿಂದ ದೇವಾಲಯ ಅಚ್ಚುಕಟ್ಟಾಗಿ ರೂಪ ತಳೆದಿದೆ’ ಎಂದು ದೇವಾಲಯ ನಿರ್ಮಿಸಿದ ಮುರುಡೇಶ್ವರದ ಶಿಲ್ಪಿ ರವಿಚಂದ್ರನ್ ತಿಳಿಸಿದ್ದಾರೆ.</p>.<p> ‘ಮಂದಿರ ನಿರ್ಮಾಣಕ್ಕೆ, ದೇವಾಲಯ ನಿರ್ಮಾಣ ಸಮಿತಿ ಶ್ರಮಿಸಿದೆ. ಇದಕ್ಕೆ ದೇವರ ಬುಡಕಟ್ಟು, ಹರಿವಾಣ, ಎಲ್ಲಾ ಸಮಾಜ ಬಾಂಧವರು, ಸುತ್ತಮುತ್ತಲ ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಇದರಿಂದಾಗಿ ಸುಮಾರು ₹3 ಕೋಟಿ ವೆಚ್ಚದಲ್ಲಿ ದೇವಾಲಯ ನೆಲೆಗೊಂಡಿದೆ’ ಎಂದು ಮುಖಂಡ ಎಂ.ಕೃಷ್ಣಮೂರ್ತಿ ಹೇಳಿದರು.</p>.<p> ದೇವಾಲಯ ನಿರ್ಮಾಣ ಪೂರ್ಣಗೊಂಡಿದ್ದು, ನಾಳೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ದೇವಾಲಯ ನಿರ್ಮಾಣ ಸಮಿತಿಯ ಜಿ. ನಟರಾಜ್ ತಿಳಿಸಿದ್ದಾರೆ.</p>.<p> ‘ಇಡೀ ದೇವಾಲಯ ಕಲ್ಪಿನಿಂದಲೇ ನಿರ್ಮಾಣಗೊಂಡಿದೆ. ದೇವಾಲಯದಲ್ಲಿನ ಸೂಕ್ಷ್ಮ ಕೆತ್ತನೆಗಳು ಹಿಂದಿನ ವಾಸ್ತು ಶಿಲ್ಪವನ್ನು ನೆನಪಿಸುವಂತಿವೆ. ಶಿಲ್ಪಿಯ ಕಲಾ ಕುಸುರಿ ಭವ್ಯ ಮಂದಿರಕ್ಕೆ ಮೆರಗು ತಂದಿದೆ’ ಎಂದು ತರೀಕೆರೆಯ ಟಿ.ಜಿ. ಶಶಾಂಕ್ ಹರ್ಷ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>