<p><strong>ಅಜ್ಜಂಪುರ: ಪಟ್ಟಣದಲ್ಲಿ ರೈತರು, ಮಳೆಗಾಗಿ ಪ್ರಾರ್ಥಿಸಿ ವರುಣ ದೇವರಿಗೆ 101 ಕುಂಭಾಭಿಷೇಕ ಮಾಡಿ ಅಖಂಡ ಭಜನೆ ನಡೆಸಿದರು. </strong></p>.<p><strong> ಮುಂಗಾರು ಬಿತ್ತನೆ ಬಳಿಕ ಮಳೆಯಾಗದೆ ಇರುವುದರಿಂದ ಬೆಳೆ ಕೈತಪ್ಪುವ ಆತಂಕದಲ್ಲಿರುವ ರೈತರು ದೇವರ ಮೊರೆಹೋಗಿದ್ದು, ಉತ್ತಮ ಮಳೆ ನೀಡುವಂತೆ ಪ್ರಾರ್ಥಿಸಿದರು.</strong></p>.<p><strong> ಮಳೆ ದೇವರೆಂದೇ ಖ್ಯಾತಿಪಡೆದಿರುವ ಸೊಲ್ಲಾಪುರದ ಗುರುಸಿದ್ದರಾಮೇಶ್ವರ ಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ, ಮಡಿವಾಳ ಮಾಚಿದೇವ, ಗ್ರಾಮದೇವತೆ ಕಿರಾಳಮ್ಮ ದೇವಿ, ಚೌಡೇಶ್ವರಿ ದೇವಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿದರು.</strong></p>.<p><strong> ಗ್ರಾಮದ ಗೌಡರ ಬಾವಿಯಲ್ಲಿ ಗಂಗಾಪೂಜೆ ನಡೆಸಿದ ಬಳಿಕ, ಕುಂಭ ಹೊತ್ತ ಮಹಿಳೆಯರು ಈಶ್ವರ ದೇವಾಲಯಕ್ಕೆ ನಡೆಮಡಿಯಲ್ಲಿ ಸಾಗಿ, ಮಲ್ಲಿಕಾರ್ಜುನ ಸ್ವಾಮಿಗೆ ಅಭಿಷೇಕ ಮಾಡಿದರು. ವೀರಗಾಸೆ, ಡೊಳ್ಳು, ಮಂಗಳವಾಧ್ಯ ತಂಡಗಳೂ ಪಾಲ್ಗೊಂಡಿದ್ದವು.</strong></p>.<p><strong> ಬೀರಲಿಂಗೇಶ್ವರ ಸ್ವಾಮಿ ಮತ್ತು ಭಜನಾ ತಂಡದವರು ಗುರುಸಿದ್ದೇಶ್ವರ ಮಠದಲ್ಲಿ 24 ಗಂಟೆಗಳ ಅಖಂಡ ಭಜನೆ ನಡೆಸಿದರು. <br /></strong></p>.<p><strong> ಬಳಿಕ ಗುರುಸಿದ್ದೇಶ್ವರ ಮಠ ಆವರಣದಲ್ಲಿ ಅನ್ನ ದಾಸೋಹ ನಡೆಯಿತು. ದೇವಾಲಯ ಸಮಿತಿಯ ಚಂದ್ರಪ್ಪ, ತೀರ್ಥಪ್ರಸಾದ್, ಮಂಜುನಾಥ್ ಇದ್ದರು.<br /></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಜ್ಜಂಪುರ: ಪಟ್ಟಣದಲ್ಲಿ ರೈತರು, ಮಳೆಗಾಗಿ ಪ್ರಾರ್ಥಿಸಿ ವರುಣ ದೇವರಿಗೆ 101 ಕುಂಭಾಭಿಷೇಕ ಮಾಡಿ ಅಖಂಡ ಭಜನೆ ನಡೆಸಿದರು. </strong></p>.<p><strong> ಮುಂಗಾರು ಬಿತ್ತನೆ ಬಳಿಕ ಮಳೆಯಾಗದೆ ಇರುವುದರಿಂದ ಬೆಳೆ ಕೈತಪ್ಪುವ ಆತಂಕದಲ್ಲಿರುವ ರೈತರು ದೇವರ ಮೊರೆಹೋಗಿದ್ದು, ಉತ್ತಮ ಮಳೆ ನೀಡುವಂತೆ ಪ್ರಾರ್ಥಿಸಿದರು.</strong></p>.<p><strong> ಮಳೆ ದೇವರೆಂದೇ ಖ್ಯಾತಿಪಡೆದಿರುವ ಸೊಲ್ಲಾಪುರದ ಗುರುಸಿದ್ದರಾಮೇಶ್ವರ ಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ, ಮಡಿವಾಳ ಮಾಚಿದೇವ, ಗ್ರಾಮದೇವತೆ ಕಿರಾಳಮ್ಮ ದೇವಿ, ಚೌಡೇಶ್ವರಿ ದೇವಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿದರು.</strong></p>.<p><strong> ಗ್ರಾಮದ ಗೌಡರ ಬಾವಿಯಲ್ಲಿ ಗಂಗಾಪೂಜೆ ನಡೆಸಿದ ಬಳಿಕ, ಕುಂಭ ಹೊತ್ತ ಮಹಿಳೆಯರು ಈಶ್ವರ ದೇವಾಲಯಕ್ಕೆ ನಡೆಮಡಿಯಲ್ಲಿ ಸಾಗಿ, ಮಲ್ಲಿಕಾರ್ಜುನ ಸ್ವಾಮಿಗೆ ಅಭಿಷೇಕ ಮಾಡಿದರು. ವೀರಗಾಸೆ, ಡೊಳ್ಳು, ಮಂಗಳವಾಧ್ಯ ತಂಡಗಳೂ ಪಾಲ್ಗೊಂಡಿದ್ದವು.</strong></p>.<p><strong> ಬೀರಲಿಂಗೇಶ್ವರ ಸ್ವಾಮಿ ಮತ್ತು ಭಜನಾ ತಂಡದವರು ಗುರುಸಿದ್ದೇಶ್ವರ ಮಠದಲ್ಲಿ 24 ಗಂಟೆಗಳ ಅಖಂಡ ಭಜನೆ ನಡೆಸಿದರು. <br /></strong></p>.<p><strong> ಬಳಿಕ ಗುರುಸಿದ್ದೇಶ್ವರ ಮಠ ಆವರಣದಲ್ಲಿ ಅನ್ನ ದಾಸೋಹ ನಡೆಯಿತು. ದೇವಾಲಯ ಸಮಿತಿಯ ಚಂದ್ರಪ್ಪ, ತೀರ್ಥಪ್ರಸಾದ್, ಮಂಜುನಾಥ್ ಇದ್ದರು.<br /></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>