ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಚೈತ್ರಾ ಪ್ರಕರಣ ನಡೆದಿದ್ದೇ ಆಗಿದ್ದಲ್ಲಿ ತನಿಖೆ ನಡೆಸುವುದು ಹಾಗೂ ಶಿಕ್ಷೆ ವಿಧಿಸುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ಹಣ ಪಡೆದಷ್ಟೆ ಹಣ ನೀಡಿರುವುದು ಕೂಡ ತಪ್ಪು. ಗೋಪಾಲ ಪೂಜಾರಿ ಅವರನ್ನೂ ಬಂಧಿಸಬೇಕು. ಈ ಪ್ರಕರಣದಿಂದ ಬಿಜೆಪಿ ಪಕ್ಷ ಯಾವುದೇ ಹಣ ಹಾಗೂ ಅಮಿಷಕ್ಕೆ ಒಳಗಾಗಿ ಟಿಕೆಟ್ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ. ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡವಿದ್ದು, ಗೋಪಾಲ ಪೂಜಾರಿಯನ್ನು ಬಂಧಿಸಿ ತನಿಖೆ ನಡೆಸುವ ಮೂಲಕ ಸತ್ಯಾಂಶವನ್ನು ರಾಜ್ಯದ ಜನರಿಗೆ ತಿಳಿಸಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.