ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಹರೂರುಮಕ್ಕಿ ಗ್ರಾಮದ ಜಮೀನು ಪಕ್ಕದ ಹಳ್ಳದಲ್ಲಿ ವಾಸುದೇವ ಭಟ್ಟ (56) ಅವರ ಶವ ಪತ್ತೆಯಾಗಿದೆ.
‘ವಾಸುದೇವ ಅವರು ಶುಕ್ರವಾರ ಬೆಳಿಗ್ಗೆ ಭತ್ತ ನಟ್ಟಿ ನಿಟ್ಟಿನಲ್ಲಿ ತಯಾರಿಗೆ ಗದ್ದೆಗೆ ತೆರಳಿದ್ದರು. ಸಂಜೆಯಾದರೂ ವಾಪಸ್ ಬಂದಿರಲಿಲ್ಲ. ಹುಡುಕಾಡಿದಾಗ ಹಳ್ಳದಲ್ಲಿ ಶವ ಪತ್ತೆಯಾಗಿದೆ’ ಎಂದು ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾಕರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ವಾಸುದೇವ ಅವರಿಗೆ ಪತ್ನಿ ಇದ್ದಾರೆ.