ಸಿ.ಟಿ.ರವಿ ಅಫೀಮು ಕುಡಿದವರ ರೀತಿ ಮಾತನಾಡುತ್ತಾರೆ. ದೇಶಭಕ್ತಿ, ರಾಷ್ಟ್ರಭಕ್ತಿ ಬಗ್ಗೆ ನಮಗೆ ಪಾಠ ಹೇಳುತ್ತಾರೆ. ಅವರಿಂದ ನಾವು ಪಾಠ ಕಲಿಯಬೇಕಾ? ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಜನ ಪರವಾಗಿರಲು ಸಾಧ್ಯ ಇಲ್ಲ. ರವಿ ಅವರ ದತ್ತ ಮಾಲೆಗೆ ಮಾರು ಹೋಗಬೇಡಿ, ದಾರಿ ತಪ್ಪಿಸುತ್ತಾರೆ. ಸಿ.ಟಿ.ರವಿ ಮತ್ತೆ ಗೆಲ್ಲಬಾರದು ಎಂದರು.
ನಾನೂ ಹಿಂದೂ ಅಲ್ವಾ? ನಮ್ಮ ಅಪ್ಪ ಸಿದ್ದರಾಮಯ್ಯ ಎಂದು ಹೆಸರು ಕರೆದಿಲ್ವಾ? ನನ್ನನ್ನು ಸಿದ್ರಾಮುಲ್ಲಾ ಎಂದು ಹೇಳಲು ಸಿ.ಟಿ.ರವಿ ಯಾವ ಗಿರಾಕಿ? ಎಂದು ಪ್ರಶ್ನಿಸಿದರು.