<p><strong>ಚಿಕ್ಕಮಗಳೂರು:</strong> ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಲ್ಲಿ ಜಿಲ್ಲೆಯಲ್ಲಿ ಐವರು ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ಅಷ್ಟೂ ದಾಳಿಗಳು ಎನ್.ಆರ್.ಪುರ ತಾಲ್ಲೂಕಿನಲ್ಲೇ ನಡೆದಿವೆ.</p>.<p>ಎನ್.ಆರ್.ಪುರ ತಾಲ್ಲೂಕಿನ ಸೀತೂರು ಗ್ರಾಮದ ಉಮೇಶ್ (56), 2024ರ ನವೆಂಬರ್ 30ರಂದು ಆನೆ ದಾಳಿಗೆ ಮೃತಪಟ್ಟರು. ಡಿಸೆಂಬರ್ 19ರಂದು ಮಡಬೂರಿನಲ್ಲಿ ಕೆ.ಕೆ.ಎಲಿಯಾಸ್ (72) ಅವರನ್ನು ಕಾಡಾನೆಯೊಂದು ತುಳಿದು ಕೊಂದಿತು.</p>.<p>2025ರಲ್ಲಿ ಫೆಬ್ರವರಿ 8ರಂದು ತಣಿಗೆಗೆಬೈಲು ವ್ಯಾಪ್ತಿಯ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ ವಿನೋದಾ ಬಾಯಿ(39) ಮೇಲೆ ಆನೆಯ ದಾಳಿ ನಡೆಸಿತ್ತು. ಜುಲೈ 23ರಂದು ಬಾಳೆಹೊನ್ನೂರು ಬಳಿಯ ಬನ್ನೂರಿನ ಬಳಿ ಅನಿತಾ (25) ಆನೆ ದಾಳಿಯಿಂದ ಸಾವನ್ನಪ್ಪಿದ್ದಾರೆ.</p>.<p>ನಾಲ್ಕು ದಿನಗಳ ಅಂತರದಲ್ಲೇ ಹುಯಿಗೆರೆ ಪಂಚಾಯಿತಿನ ಅಂಡವಾನಿ ಬಳಿ ಭಾನುವಾರ ಸಂಜೆ (ಜುಲೈ 27) ಆನೆ ದಾಳಿಗೆ ಸಿಲುಕಿ ಸುಬ್ರಾಯಗೌಡ (63) ಮೃತಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಲ್ಲಿ ಜಿಲ್ಲೆಯಲ್ಲಿ ಐವರು ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ಅಷ್ಟೂ ದಾಳಿಗಳು ಎನ್.ಆರ್.ಪುರ ತಾಲ್ಲೂಕಿನಲ್ಲೇ ನಡೆದಿವೆ.</p>.<p>ಎನ್.ಆರ್.ಪುರ ತಾಲ್ಲೂಕಿನ ಸೀತೂರು ಗ್ರಾಮದ ಉಮೇಶ್ (56), 2024ರ ನವೆಂಬರ್ 30ರಂದು ಆನೆ ದಾಳಿಗೆ ಮೃತಪಟ್ಟರು. ಡಿಸೆಂಬರ್ 19ರಂದು ಮಡಬೂರಿನಲ್ಲಿ ಕೆ.ಕೆ.ಎಲಿಯಾಸ್ (72) ಅವರನ್ನು ಕಾಡಾನೆಯೊಂದು ತುಳಿದು ಕೊಂದಿತು.</p>.<p>2025ರಲ್ಲಿ ಫೆಬ್ರವರಿ 8ರಂದು ತಣಿಗೆಗೆಬೈಲು ವ್ಯಾಪ್ತಿಯ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ ವಿನೋದಾ ಬಾಯಿ(39) ಮೇಲೆ ಆನೆಯ ದಾಳಿ ನಡೆಸಿತ್ತು. ಜುಲೈ 23ರಂದು ಬಾಳೆಹೊನ್ನೂರು ಬಳಿಯ ಬನ್ನೂರಿನ ಬಳಿ ಅನಿತಾ (25) ಆನೆ ದಾಳಿಯಿಂದ ಸಾವನ್ನಪ್ಪಿದ್ದಾರೆ.</p>.<p>ನಾಲ್ಕು ದಿನಗಳ ಅಂತರದಲ್ಲೇ ಹುಯಿಗೆರೆ ಪಂಚಾಯಿತಿನ ಅಂಡವಾನಿ ಬಳಿ ಭಾನುವಾರ ಸಂಜೆ (ಜುಲೈ 27) ಆನೆ ದಾಳಿಗೆ ಸಿಲುಕಿ ಸುಬ್ರಾಯಗೌಡ (63) ಮೃತಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>