‘ಕೆಳಗೂರಿನ ಈರೇಗೌಡ ಅವರ ಮನೋಜ್ ಎಸ್ಟೇಟ್ಗೆ ಸರೋಜಾ ಬಾಯಿ, ಅವರ ಕೆಲಸಕ್ಕೆ ಹೋಗಿದ್ದರು. ತೋಟಕ್ಕೆ ನುಗ್ಗಿದ ಆನೆ ಅವರ ಬೆನ್ನತ್ತಿದೆ. ಆನೆ ನೋಡಿ ಕಾಲ್ಕಿತ್ತ ಪುತ್ರಿಯು ಅಮ್ಮನಿಗೆ ಓಡುವಂತೆ ಹೇಳಿದ್ದಾರೆ. ಸರೋಜಾ ಓಡುವ ಭರದಲ್ಲಿ ಬಿದ್ದಿದ್ದಾರೆ. ಆನೆ ಅವರ ಮೇಲೆ ಎರಗಿದೆ’ ಎಂದು ತೋಟದ ಕಾರ್ಮಿಕ ಕುಮಾರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.