‘ಪ್ರವಾಸಿಗರು ಚಾರ್ಮಾಡಿ ಘಾಟ್ನ ಸೌಂದರ್ಯ ವೀಕ್ಷಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಇಕ್ಕಟ್ಟಾದ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ, ಜಲಪಾತ, ಪ್ರಪಾತದ ಅಂಚಿನಲ್ಲಿ ನಿಂತು ಸೆಲ್ಫಿ ತೆಗೆಯುವುದಕ್ಕೆ ನಿಷೇಧ ಹೇರಬೇಕು, ವಾಹನ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಪೊಲೀಸರ ಸಹಕಾರ ಅಗತ್ಯ’ ಎಂದು ಬಣಕಲ್ ಫ್ರೆಂಡ್ಸ್ ಕ್ಲಬ್ನ ಗೌರವ ಅಧ್ಯಕ್ಷ ಬಿ.ಸಿ. ಪ್ರವೀಣ್ ಹೇಳಿದರು.