<p><strong>ಚಿಕ್ಕಮಗಳೂರು:</strong> ಪ್ರಧಾನಿ ನರೇಂದ್ರ ಮೋದಿ ಅವರು ‘ಸಹಕಾರ ಸಮೃದ್ಧಿ’ ದೃಷ್ಟಿಕೋನ ಇಟ್ಟುಕೊಂಡು ಸಹಕಾರ ಸಚಿವಾಲಯ ರಚನೆ ಮಾಡಿರುವುದು ದೇಶದ ಸಹಕಾರಿ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಎಂದು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಾಸಕ ಬೆಳ್ಳಿ ಪ್ರಕಾಶ್ ಹೇಳಿದ್ದಾರೆ.</p>.<p>‘ಸಹಕಾರ ಸಂಸ್ಥೆಗಳನ್ನು ಬಲಪಡಿಸಲು ಪ್ರತ್ಯೇಕವಾದ ಆಡಳಿತ, ಕಾನೂನು, ನೀತಿ ಚೌಕಟ್ಟನ್ನು ರಚಿಸಲು ಸಹಕಾರ ಸಚಿವಾಲಯ ರೂಪುರೇಷೆ ಸಿದ್ಧಪಡಿಸಲಿದೆ. ರಾಷ್ಟ್ರದ ಸಹಕಾರ ಚಳವಳಿಗೆ ವರದಾನವಾಗಲಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.</p>.<p>‘ಭಾರತದಲ್ಲಿ ಸಹಕಾರ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ದೇಶದ ಮೊದಲ ಸಹಕಾರ ಸಂಘವು ರಾಜ್ಯದ<br />ಗದಗ ಜಿಲ್ಲೆಯ ಕಣಗಿನಾಳ ಗ್ರಾಮದಲ್ಲಿ 1905ರಲ್ಲಿ ನೋಂದಾಯಿತವಾಯಿತು. ಸಿದ್ಧನಗೌಡ ಸಣ್ಣರಾಮನಗೌಡ ಪಾಟೀಲ ಅವರು ಸಂಸ್ಥಾಪಕರ ಅಧ್ಯಕ್ಷರಾಗಿದ್ದರು. ಅವರು ದೇಶದ ಸಹಕಾರ ಚಳವಳಿಯ ಆದ್ಯ ಪ್ರವರ್ತಕರಾಗಿದ್ದರು’ ಎಂದು ತಿಳಿಸಿದ್ದಾರೆ.</p>.<p>‘ಸಹಕಾರಿ ಬ್ಯಾಂಕ್ಗಳಿಂದಾಗಿ ಗ್ರಾಮೀಣ ಭಾರತದ ಕೃಷಿಕರು, ಬಡ ಜನರು ಹಾಗೂ ಮಹಿಳೆಯರಲ್ಲಿ ಆರ್ಥಿಕ ಸಾಮರ್ಥ್ಯ, ಆತ್ಮವಿಶ್ವಾಸ ವೃದ್ಧಿಸುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಪ್ರಧಾನಿ ನರೇಂದ್ರ ಮೋದಿ ಅವರು ‘ಸಹಕಾರ ಸಮೃದ್ಧಿ’ ದೃಷ್ಟಿಕೋನ ಇಟ್ಟುಕೊಂಡು ಸಹಕಾರ ಸಚಿವಾಲಯ ರಚನೆ ಮಾಡಿರುವುದು ದೇಶದ ಸಹಕಾರಿ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಎಂದು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಾಸಕ ಬೆಳ್ಳಿ ಪ್ರಕಾಶ್ ಹೇಳಿದ್ದಾರೆ.</p>.<p>‘ಸಹಕಾರ ಸಂಸ್ಥೆಗಳನ್ನು ಬಲಪಡಿಸಲು ಪ್ರತ್ಯೇಕವಾದ ಆಡಳಿತ, ಕಾನೂನು, ನೀತಿ ಚೌಕಟ್ಟನ್ನು ರಚಿಸಲು ಸಹಕಾರ ಸಚಿವಾಲಯ ರೂಪುರೇಷೆ ಸಿದ್ಧಪಡಿಸಲಿದೆ. ರಾಷ್ಟ್ರದ ಸಹಕಾರ ಚಳವಳಿಗೆ ವರದಾನವಾಗಲಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.</p>.<p>‘ಭಾರತದಲ್ಲಿ ಸಹಕಾರ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ದೇಶದ ಮೊದಲ ಸಹಕಾರ ಸಂಘವು ರಾಜ್ಯದ<br />ಗದಗ ಜಿಲ್ಲೆಯ ಕಣಗಿನಾಳ ಗ್ರಾಮದಲ್ಲಿ 1905ರಲ್ಲಿ ನೋಂದಾಯಿತವಾಯಿತು. ಸಿದ್ಧನಗೌಡ ಸಣ್ಣರಾಮನಗೌಡ ಪಾಟೀಲ ಅವರು ಸಂಸ್ಥಾಪಕರ ಅಧ್ಯಕ್ಷರಾಗಿದ್ದರು. ಅವರು ದೇಶದ ಸಹಕಾರ ಚಳವಳಿಯ ಆದ್ಯ ಪ್ರವರ್ತಕರಾಗಿದ್ದರು’ ಎಂದು ತಿಳಿಸಿದ್ದಾರೆ.</p>.<p>‘ಸಹಕಾರಿ ಬ್ಯಾಂಕ್ಗಳಿಂದಾಗಿ ಗ್ರಾಮೀಣ ಭಾರತದ ಕೃಷಿಕರು, ಬಡ ಜನರು ಹಾಗೂ ಮಹಿಳೆಯರಲ್ಲಿ ಆರ್ಥಿಕ ಸಾಮರ್ಥ್ಯ, ಆತ್ಮವಿಶ್ವಾಸ ವೃದ್ಧಿಸುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>