‘ಮುನ್ನಾ ಅಜರ್ ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಶೃಂಗೇರಿ ಸ್ವಾಮೀಜಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿ, ಸ್ವಾಮೀಜಿ ಅವರ ಫೋಟೊ ಕೆಳಗೆ ‘ಹಮಾರಾ ಗಾಂವ್ ಕಾ ಕುತ್ತಾ ಹೇ ತು’ ಎಂದು ಬರೆದಿರುವುದಾಗಿ ಹರೀಶ್ ವಿ.ಶೆಟ್ಟಿ ಎಂಬವರು ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2015ರ ನವೆಂಬರ್ 29ರಂದು ಪ್ರಕರಣ ನಡೆದಿತ್ತು. ಪೊಲೀಸರು ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು’ ಎಂದು ಪ್ರಕರಣದಲ್ಲಿ ವಾದ ಮಂಡಿಸಿದ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಣಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.