ಮೃತರು ಮೊದಲು ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆಕಟ್ಟೆಯ ಕೆರೆಗದ್ದೆಯಲ್ಲಿ ವಾಸವಿದ್ದರು. ಪುನರ್ವಸತಿ ಯೋಜನೆಯಡಿ ತಮ್ಮ ಜಮೀನು ಬಿಟ್ಟುಕೊಟ್ಟು, ಬಂದ ಪರಿಹಾರದ ಹಣದಲ್ಲಿ ನೆಮ್ಮಾರ್ ಸಮೀಪ ಮದ್ಲುಬೈಲಿನಲ್ಲಿ 3 ಎಕರೆ 39 ಗುಂಟೆ ಜಮೀನು ಖರೀದಿಸಿದ್ದರು. ಅಲ್ಲಿ ಮನೆ ಕಟ್ಟಿಕೊಂಡು ಐದು ವರ್ಷಗಳಿಂದ ವಾಸವಾಗಿದ್ದರು.