<p><strong>ಚಿಕ್ಕಮಗಳೂರು:</strong> ನಗರದ ಗೃಹ ಮಂಡಳಿ (ಹೌಸಿಂಗ್ ಬೋರ್ಡ್) ಬಡಾವಣೆ, ಸುತ್ತಲಿನ ಪ್ರದೇಶಗಳ ಉದ್ಯಾನಗಳು ದುಸ್ಥಿತಿಯಲ್ಲಿವೆ. ಒಳ ಚರಂಡಿ, ‘ಅಮೃತ್’ ಯೋಜನೆ ಪೈಪ್ ಅಳವಡಿಸಲು ರಸ್ತೆ ಅಗೆದಿರುವ ಕಡೆಗಳಲ್ಲಿ ಗುಂಡಿಗಳಾಗಿವೆ.</p>.<p>ನ್ಯಾಯಾಧೀಶರ ವಸತಿ ಸಮುಚ್ಛಯ ಭಾಗದ ಸಂಪರ್ಕ ಹಾದಿ ಅಧ್ವಾನ ಸ್ಥಿತಿಯಲ್ಲಿದೆ. ಮಳೆಯಾದಾಗ ದಾರಿ ಕೆಸರುಮಯವಾಗುತ್ತದೆ. ಓಡಾಟ ಪಡಿಪಾಟಲಾಗಿದೆ.</p>.<p>ಇದೇ ಹಾದಿ ಬದಿ ಒಂದು ಉದ್ಯಾನ ಇದೆ. ಉದ್ಯಾನದಲ್ಲಿ ಪಾರ್ಥೆನಿಯಂ, ಕಳೆ ಗಿಡಗಳು ಬೆಳದಿವೆ. ಕೆಲವರು ಉದ್ಯಾನಗಳಿಗೆ ಹಸುಗಳನ್ನು ಮೇಯಲು ಬಿಡುವ ಪರಿಪಾಟ ರೂಢಿಸಿಕೊಂಡಿದ್ದಾರೆ.</p>.<p>ಈ ಒಂದನೇ ವಾರ್ಡ್ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಉದ್ಯಾನಗಳು ಇವೆ. ಬಹುತೇಕ ಎಲ್ಲವೂ ನಿರ್ವಹಣೆ ಇಲ್ಲದೆ ಕಸದ ಕೊಂಪೆಗಳಾಗಿವೆ. ಕೆಲವು ಪಾರ್ಕ್ಗಳಿಗೆ ಬೇಲಿಯೂ ಇಲ್ಲ. ನಿವಾಸಿಗಳು ತ್ಯಾಜ್ಯವನ್ನು ತಂದು ಉದ್ಯಾನಗಳಿಗೆ ಸುರಿಯುತ್ತಾರೆ.</p>.<p>ಪ್ರತಿ ಗಲ್ಲಿ, ರಸ್ತೆ ಅಗೆದು ಒಳಚರಂಡಿ, ಅಮೃತ್ ಯೋಜನೆಯಡಿ ಪೈಪ್ ಅಳವಡಿಸಲಾಗಿದೆ. ಆದರೆ, ಅಗೆದ ಭಾಗಗಳನ್ನು ಸರಿಯಾಗಿ ಮುಚ್ಚಿಲ್ಲ. ಅಗೆದ ಭಾಗಗಳಲ್ಲಿ ತಗ್ಗಾಗಿದೆ.</p>.<p>ನಮ್ಮ ಬಡಾವಣೆಯಲ್ಲಿ ಎರಡು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಅದು ಜೋರಾಗಿ ಬರಲ್ಲ. ಕೆಲವೊಮ್ಮೆ ಪೈಪ್ ಒಡೆದು ಸಮಸ್ಯೆಯಾದರೆ ವಾರಗಟ್ಟಲೆ ನೀರು ಬಿಡಲ್ಲ ಎಂದು ಗೃಹ ಮಂಡಳಿ ಬಡಾವಣೆ ಜನರು ಹೇಳುತ್ತಾರೆ.</p>.<p>ಬಡಾವಣೆಗಳಲ್ಲಿ ಕೆಲ ಗಲ್ಲಿಗಳ ಚರಂಡಿಗಳಲ್ಲಿ ತ್ಯಾಜ್ಯ, ಕಸ ತುಂಬಿಕೊಂಡಿದೆ. ರಸ್ತೆ ಬದಿಗಳಲ್ಲಿ ಪಾರ್ಥೆನಿಯಂ ಗಿಡಗಳು, ಹುಲ್ಲು ಬೆಳೆದಿದೆ. ನಿವೇಶನಗಳಲ್ಲಿ ಮುಳ್ಳಿನ ಗಿಡಗಳು, ಪೊದೆಗಳು ಆಳುದ್ದಕ್ಕೆ ಬೆಳೆದಿವೆ.</p>.<p><strong>‘ಉದ್ಯಾನ ಅಭಿವೃದ್ಧಿಗೆ ಮುಂದಿನ ವರ್ಷ ಕ್ರಮ’</strong><br />‘ಒಂದನೇ ವಾರ್ಡ್ ದೊಡ್ಡ ವಾರ್ಡ್. ಎಐಟಿ ವೃತ್ತದಿಂದ ತಾಜ್ ಹೋಟೆಲ್ವರೆಗೆ ವ್ಯಾಪ್ತಿ ಇದೆ. ಹೆದ್ದಾರಿ (ಎನ್.ಎಚ್–173) ಕಾಮಗಾರಿ, ಪೈಪ್ ಅಳವಡಿಕೆ ಮೊದಲಾದ ಕಾಮಗಾರಿಗಳಿಂದಾಗಿ ಕೆಲ ಸಮಸ್ಯೆಗಳು ಆಗಿವೆ. ಕಾಮಗಾರಿಗಳು ಮುಗಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ವಾರ್ಡ್ ಸದಸ್ಯೆ ಕವಿತಾಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ರಸ್ತೆ, ಚರಂಡಿ, ಸ್ವಚ್ಛತೆ ಕಾಮಗಾರಿಗೆ ಒತ್ತು ನೀಡಿದ್ದೇವೆ. ಕಾಮಗಾರಿಗೆ ರಸ್ತೆ ಅಗೆದು ಮುಚ್ಚಿರುವ ಕಡೆಗಳಲ್ಲಿ ಡಾಂಬರು ಹಾಕಿಸಲು ಕ್ರಮ ವಹಿಸಲಾಗುವುದು. ಇನ್ನು ಉದ್ಯಾನ ಅಭಿವೃದ್ಧಿಗೆ ಮುಂದಿನ ವರ್ಷ ಕ್ರಮ ವಹಿಸಲಾಗುವುದು’ ಎಂದರು.</p>.<p>‘ನಗರಸಭೆ ಅನುದಾನದಲ್ಲಿ ಈ ಸಿಂಹಪಾಲು ಅನುದಾನ ವಾರ್ಡ್ಗೆ ಸಿಕ್ಕಿದೆ. ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿ ಮಾಡುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ನಗರದ ಗೃಹ ಮಂಡಳಿ (ಹೌಸಿಂಗ್ ಬೋರ್ಡ್) ಬಡಾವಣೆ, ಸುತ್ತಲಿನ ಪ್ರದೇಶಗಳ ಉದ್ಯಾನಗಳು ದುಸ್ಥಿತಿಯಲ್ಲಿವೆ. ಒಳ ಚರಂಡಿ, ‘ಅಮೃತ್’ ಯೋಜನೆ ಪೈಪ್ ಅಳವಡಿಸಲು ರಸ್ತೆ ಅಗೆದಿರುವ ಕಡೆಗಳಲ್ಲಿ ಗುಂಡಿಗಳಾಗಿವೆ.</p>.<p>ನ್ಯಾಯಾಧೀಶರ ವಸತಿ ಸಮುಚ್ಛಯ ಭಾಗದ ಸಂಪರ್ಕ ಹಾದಿ ಅಧ್ವಾನ ಸ್ಥಿತಿಯಲ್ಲಿದೆ. ಮಳೆಯಾದಾಗ ದಾರಿ ಕೆಸರುಮಯವಾಗುತ್ತದೆ. ಓಡಾಟ ಪಡಿಪಾಟಲಾಗಿದೆ.</p>.<p>ಇದೇ ಹಾದಿ ಬದಿ ಒಂದು ಉದ್ಯಾನ ಇದೆ. ಉದ್ಯಾನದಲ್ಲಿ ಪಾರ್ಥೆನಿಯಂ, ಕಳೆ ಗಿಡಗಳು ಬೆಳದಿವೆ. ಕೆಲವರು ಉದ್ಯಾನಗಳಿಗೆ ಹಸುಗಳನ್ನು ಮೇಯಲು ಬಿಡುವ ಪರಿಪಾಟ ರೂಢಿಸಿಕೊಂಡಿದ್ದಾರೆ.</p>.<p>ಈ ಒಂದನೇ ವಾರ್ಡ್ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಉದ್ಯಾನಗಳು ಇವೆ. ಬಹುತೇಕ ಎಲ್ಲವೂ ನಿರ್ವಹಣೆ ಇಲ್ಲದೆ ಕಸದ ಕೊಂಪೆಗಳಾಗಿವೆ. ಕೆಲವು ಪಾರ್ಕ್ಗಳಿಗೆ ಬೇಲಿಯೂ ಇಲ್ಲ. ನಿವಾಸಿಗಳು ತ್ಯಾಜ್ಯವನ್ನು ತಂದು ಉದ್ಯಾನಗಳಿಗೆ ಸುರಿಯುತ್ತಾರೆ.</p>.<p>ಪ್ರತಿ ಗಲ್ಲಿ, ರಸ್ತೆ ಅಗೆದು ಒಳಚರಂಡಿ, ಅಮೃತ್ ಯೋಜನೆಯಡಿ ಪೈಪ್ ಅಳವಡಿಸಲಾಗಿದೆ. ಆದರೆ, ಅಗೆದ ಭಾಗಗಳನ್ನು ಸರಿಯಾಗಿ ಮುಚ್ಚಿಲ್ಲ. ಅಗೆದ ಭಾಗಗಳಲ್ಲಿ ತಗ್ಗಾಗಿದೆ.</p>.<p>ನಮ್ಮ ಬಡಾವಣೆಯಲ್ಲಿ ಎರಡು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಅದು ಜೋರಾಗಿ ಬರಲ್ಲ. ಕೆಲವೊಮ್ಮೆ ಪೈಪ್ ಒಡೆದು ಸಮಸ್ಯೆಯಾದರೆ ವಾರಗಟ್ಟಲೆ ನೀರು ಬಿಡಲ್ಲ ಎಂದು ಗೃಹ ಮಂಡಳಿ ಬಡಾವಣೆ ಜನರು ಹೇಳುತ್ತಾರೆ.</p>.<p>ಬಡಾವಣೆಗಳಲ್ಲಿ ಕೆಲ ಗಲ್ಲಿಗಳ ಚರಂಡಿಗಳಲ್ಲಿ ತ್ಯಾಜ್ಯ, ಕಸ ತುಂಬಿಕೊಂಡಿದೆ. ರಸ್ತೆ ಬದಿಗಳಲ್ಲಿ ಪಾರ್ಥೆನಿಯಂ ಗಿಡಗಳು, ಹುಲ್ಲು ಬೆಳೆದಿದೆ. ನಿವೇಶನಗಳಲ್ಲಿ ಮುಳ್ಳಿನ ಗಿಡಗಳು, ಪೊದೆಗಳು ಆಳುದ್ದಕ್ಕೆ ಬೆಳೆದಿವೆ.</p>.<p><strong>‘ಉದ್ಯಾನ ಅಭಿವೃದ್ಧಿಗೆ ಮುಂದಿನ ವರ್ಷ ಕ್ರಮ’</strong><br />‘ಒಂದನೇ ವಾರ್ಡ್ ದೊಡ್ಡ ವಾರ್ಡ್. ಎಐಟಿ ವೃತ್ತದಿಂದ ತಾಜ್ ಹೋಟೆಲ್ವರೆಗೆ ವ್ಯಾಪ್ತಿ ಇದೆ. ಹೆದ್ದಾರಿ (ಎನ್.ಎಚ್–173) ಕಾಮಗಾರಿ, ಪೈಪ್ ಅಳವಡಿಕೆ ಮೊದಲಾದ ಕಾಮಗಾರಿಗಳಿಂದಾಗಿ ಕೆಲ ಸಮಸ್ಯೆಗಳು ಆಗಿವೆ. ಕಾಮಗಾರಿಗಳು ಮುಗಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ವಾರ್ಡ್ ಸದಸ್ಯೆ ಕವಿತಾಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ರಸ್ತೆ, ಚರಂಡಿ, ಸ್ವಚ್ಛತೆ ಕಾಮಗಾರಿಗೆ ಒತ್ತು ನೀಡಿದ್ದೇವೆ. ಕಾಮಗಾರಿಗೆ ರಸ್ತೆ ಅಗೆದು ಮುಚ್ಚಿರುವ ಕಡೆಗಳಲ್ಲಿ ಡಾಂಬರು ಹಾಕಿಸಲು ಕ್ರಮ ವಹಿಸಲಾಗುವುದು. ಇನ್ನು ಉದ್ಯಾನ ಅಭಿವೃದ್ಧಿಗೆ ಮುಂದಿನ ವರ್ಷ ಕ್ರಮ ವಹಿಸಲಾಗುವುದು’ ಎಂದರು.</p>.<p>‘ನಗರಸಭೆ ಅನುದಾನದಲ್ಲಿ ಈ ಸಿಂಹಪಾಲು ಅನುದಾನ ವಾರ್ಡ್ಗೆ ಸಿಕ್ಕಿದೆ. ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿ ಮಾಡುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>