ಚಿಕ್ಕಮಗಳೂರು: ಬಿರು ಬಿಸಿಲಿನಿಂದ ಕಂಗಟ್ಟಿದ್ದ ಚಿಕ್ಕಮಗಳೂರು ನಗರದ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ ಸುರಿದು ತಂಪೆರೆಯಿತು.
ಗುಡುಗು- ಸಿಡಿಲು ಸಹಿತ ಅರ್ಧ ಗಂಟೆಗೂ ಹೆಚ್ಚ ಕಾಲ ಮಳೆ ಸುರಿಯಿತು. ಅಪರೂಪದ ಆಲಿಕಲ್ಲು ಮಳೆ ಕಂಡು ಜನ ಸಂಭ್ರಮಿಸಿದರು. ರಸ್ತೆಗಳಲ್ಲಿ ನೀರು ಹರಿಯಿತು. ಮಳೆ ಇಲ್ಲದೆ ಬಿರಿದಿದ್ದ ಇಳೆ ತಂಪಾಯಿತು.