<p><strong>ಚಿಕ್ಕಮಗಳೂರು: </strong>ಮಲೆಕುಡಿಯ ಸಮುದಾಯದ ಸುಬ್ಬರಾಯ (70) ಅವರ ಮೃತದೇಹವನ್ನು ತೆಪ್ಪದಲ್ಲಿ ಇಟ್ಟುಕೊಂಡು ಹೊಳೆ ದಾಟಿ ಹೊಳೆಕೂಡಿಗೆ ಗ್ರಾಮಕ್ಕೆ ಒಯ್ದು ಶನಿವಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.</p>.<p>ಮೂಡಿಗೆರೆ ತಾಲ್ಲೂಕಿನ ಹೊಳೆಕೂಡಿಗೆಯ ಸುಬ್ಬರಾಯ ಅವರು (70) ಶುಕ್ರವಾರ ರಾತ್ರಿ ಬಣಕಲ್ನಲ್ಲಿ ನಿಧನರಾದರು. ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಶನಿವಾರ ಹೊಳೆಕೂಡಿಗೆಗೆ ಒಯ್ಯಲಾಯಿತು.</p>.<p>ಹೊಳೆಕೂಡಿಗೆಗೆ ರಸ್ತೆ ಸಂಪರ್ಕ ಇಲ್ಲ, ಹೊಳೆ ದಾಟಿಕೊಂಡು ಸಾಗಬೇಕು. ಹೀಗಾಗಿ, ತೆಪ್ಪದಲ್ಲಿ ಶವ ಇಟ್ಟು ಸಾಗಿಸಲಾಯಿತು ಎಂದು ಮೃತರ ಮೊಮ್ಮಗಳು ಅನಿತಾ ‘ಪ್ರಜಾವಾಣಿ’ಯೊಂದಿಗೆಗೋಳು ತೋಡಿಕೊಂಡರು.</p>.<p>ನಾಲ್ಕು ದಶಕಗಳಿಂದ ಹೊಳೆಕೂಡಿಗೆಯ ಕುಟುಂಬಗಳು ಸಂಪರ್ಕಕ್ಕೆ ತೆಪ್ಪವನ್ನೇ ಆಶ್ರಯಿಸಿವೆ. ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಅಥವಾ ತೂಗು ಸೇತುವೆ ನಿರ್ಮಿಸುವಂತೆ ಹಲವು ಬಾರಿ ಜಿಲ್ಲಾಧಿಕಾರಿ, ಶಾಸಕರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈವರೆಗೆ ಸಮಸ್ಯೆ ಪರಿಹಾರವಾಗಿಲ್ಲ ಎಂದು ಅವರು ಬೇಸರವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಮಲೆಕುಡಿಯ ಸಮುದಾಯದ ಸುಬ್ಬರಾಯ (70) ಅವರ ಮೃತದೇಹವನ್ನು ತೆಪ್ಪದಲ್ಲಿ ಇಟ್ಟುಕೊಂಡು ಹೊಳೆ ದಾಟಿ ಹೊಳೆಕೂಡಿಗೆ ಗ್ರಾಮಕ್ಕೆ ಒಯ್ದು ಶನಿವಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.</p>.<p>ಮೂಡಿಗೆರೆ ತಾಲ್ಲೂಕಿನ ಹೊಳೆಕೂಡಿಗೆಯ ಸುಬ್ಬರಾಯ ಅವರು (70) ಶುಕ್ರವಾರ ರಾತ್ರಿ ಬಣಕಲ್ನಲ್ಲಿ ನಿಧನರಾದರು. ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಶನಿವಾರ ಹೊಳೆಕೂಡಿಗೆಗೆ ಒಯ್ಯಲಾಯಿತು.</p>.<p>ಹೊಳೆಕೂಡಿಗೆಗೆ ರಸ್ತೆ ಸಂಪರ್ಕ ಇಲ್ಲ, ಹೊಳೆ ದಾಟಿಕೊಂಡು ಸಾಗಬೇಕು. ಹೀಗಾಗಿ, ತೆಪ್ಪದಲ್ಲಿ ಶವ ಇಟ್ಟು ಸಾಗಿಸಲಾಯಿತು ಎಂದು ಮೃತರ ಮೊಮ್ಮಗಳು ಅನಿತಾ ‘ಪ್ರಜಾವಾಣಿ’ಯೊಂದಿಗೆಗೋಳು ತೋಡಿಕೊಂಡರು.</p>.<p>ನಾಲ್ಕು ದಶಕಗಳಿಂದ ಹೊಳೆಕೂಡಿಗೆಯ ಕುಟುಂಬಗಳು ಸಂಪರ್ಕಕ್ಕೆ ತೆಪ್ಪವನ್ನೇ ಆಶ್ರಯಿಸಿವೆ. ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಅಥವಾ ತೂಗು ಸೇತುವೆ ನಿರ್ಮಿಸುವಂತೆ ಹಲವು ಬಾರಿ ಜಿಲ್ಲಾಧಿಕಾರಿ, ಶಾಸಕರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈವರೆಗೆ ಸಮಸ್ಯೆ ಪರಿಹಾರವಾಗಿಲ್ಲ ಎಂದು ಅವರು ಬೇಸರವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>