<p><strong>ಅಜ್ಜಂಪುರ:</strong> ಭದ್ರಾ ಮೇಲ್ದಂಡೆ ಯೋಜನೆ ಅಡಿ, ಭದ್ರಾ ಜಲಾಶಯ ದಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುತ್ತಿದೆ. ಇದರಿಂದ ತಾಲ್ಲೂಕಿನ ಎಚ್. ತಿಮ್ಮಾಪುರ ಬಳಿ ಸೇತುವೆಯೊಂದು ಜಲಾವೃತಗೊಂಡಿದೆ. ಇದರಿಂದ ಕೃಷಿ ಜಮೀನುಗಳಿಗೆ ತೆರಳುವ ಮಾರ್ಗ ಬಂದ್ ಆಗಿದ್ದು, ಕೃಷಿ ಚಟುವಟಿಕೆಗೆ ಭಾರಿ ತೊಂದರೆ ಎದುರಾಗಿದೆ.</p>.<p>‘ಒಂದೆರಡು ಕಿ.ಮೀ ಅಂತರದ ಜಮೀನಿಗೆ ತೆರಳಲು 20- 25 ಕಿಮೀ ದೂರ ಸಾಗುವಂತಾಗಿದೆ. ಈಗ ಹಿಂಗಾರು ಬಿತ್ತನೆ ಸಮಯ. ಜೋಳ, ಕಡಲೆ ಬಿತ್ತನೆ ನಡೆಸಬೇಕಿತ್ತು. ಸೇತುವೆ ಮುಳುಗಡೆಯಿಂದ ಹಿಂಗಾರು ಬೆಳೆ ಕೈತಪ್ಪಲಿದೆಯೋ ಎಂಬ ಆತಂಕ ಮನೆಮಾಡಿದೆ’ ಎಂದು ಕೃಷಿಕ ಮಲ್ಲಪ್ಪ ಹೇಳಿದ್ದಾರೆ.</p>.<p>‘ಸೇತುವೆ ಕಾಮಗಾರಿ ಕಳಪೆಯಾಗಿದೆ. ತಡೆಗೋಡೆಯನ್ನೂ ಹಾಕಿಲ್ಲ. ಸೇತುವೆ, ನಿರ್ಮಾಣಗೊಂಡು 6 ತಿಂಗಳು ಕಳೆಯುವಷ್ಟರಲ್ಲಿಯೇ ಕುಸಿದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನ ಆಗಿಲ್ಲ. ಇನ್ನು ನೀರಿನಿಂದಾಗುವ ಸಮಸ್ಯೆ ತಡೆಯುವಂತೆ ಅಧಿಕಾರಿಗಳು, ಶಾಸಕರಿಗೆ ಮನವಿ ಮಾಡಿದ್ದರೂ ಪರಿಹಾರ ದೊರೆತಿಲ್ಲ’ ಎಂದು ಪ್ರಭು ಅಸಮಧಾನ ವ್ಯಕ್ತಪಡಿಸಿದ್ದಾರೆ.</p>.<p>ಹಿಂದೊಮ್ಮೆ ಅಜ್ಜಂಪುರ ತಹಶೀಲ್ದಾರ್ ಸ್ಥಳಕ್ಕೆ ಬೇಟಿ ನೀಡಿದ್ದರು. ನಮ್ಮ ಸಮಸ್ಯೆ ಆಲಿಸಿ, ಕೃಷಿ ಜಮೀನಿಗೆ ನೀರು ಹರಿಯದಂತೆ ಮತ್ತು ಜಾನುವಾರು, ರೈತರು ಸುಗಮವಾಗಿ ಸಾಗಲು ಸರಿಯಾದ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಕಾರ್ಯಗತಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.</p>.<p>‘ನೀರಿನ ಸೆಳೆತಕ್ಕೆ ಸಿಲುಕಿ ಗ್ರಾಮದ ಮಹೇಶ್ವರಪ್ಪ ಅವರ 2 ಎತ್ತು, ವೀರಭದ್ರಪ್ಪನವರ ಒಂದು ಹಸು ಮೃತಪಟ್ಟಿದೆ. ಅವರಿಗೆ ಪರಿಹಾರ ನೀಡಬೇಕು. ನೀರು ಹರಿವು ಪ್ರಮಾಣ ತಗ್ಗಿಸಿ, ಜಮೀನುಗಳಿಗೆ ತೆರಳಲು ಅನುಕೂಲ ಮಾಡಿಕೊಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಜ್ಜಂಪುರ:</strong> ಭದ್ರಾ ಮೇಲ್ದಂಡೆ ಯೋಜನೆ ಅಡಿ, ಭದ್ರಾ ಜಲಾಶಯ ದಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುತ್ತಿದೆ. ಇದರಿಂದ ತಾಲ್ಲೂಕಿನ ಎಚ್. ತಿಮ್ಮಾಪುರ ಬಳಿ ಸೇತುವೆಯೊಂದು ಜಲಾವೃತಗೊಂಡಿದೆ. ಇದರಿಂದ ಕೃಷಿ ಜಮೀನುಗಳಿಗೆ ತೆರಳುವ ಮಾರ್ಗ ಬಂದ್ ಆಗಿದ್ದು, ಕೃಷಿ ಚಟುವಟಿಕೆಗೆ ಭಾರಿ ತೊಂದರೆ ಎದುರಾಗಿದೆ.</p>.<p>‘ಒಂದೆರಡು ಕಿ.ಮೀ ಅಂತರದ ಜಮೀನಿಗೆ ತೆರಳಲು 20- 25 ಕಿಮೀ ದೂರ ಸಾಗುವಂತಾಗಿದೆ. ಈಗ ಹಿಂಗಾರು ಬಿತ್ತನೆ ಸಮಯ. ಜೋಳ, ಕಡಲೆ ಬಿತ್ತನೆ ನಡೆಸಬೇಕಿತ್ತು. ಸೇತುವೆ ಮುಳುಗಡೆಯಿಂದ ಹಿಂಗಾರು ಬೆಳೆ ಕೈತಪ್ಪಲಿದೆಯೋ ಎಂಬ ಆತಂಕ ಮನೆಮಾಡಿದೆ’ ಎಂದು ಕೃಷಿಕ ಮಲ್ಲಪ್ಪ ಹೇಳಿದ್ದಾರೆ.</p>.<p>‘ಸೇತುವೆ ಕಾಮಗಾರಿ ಕಳಪೆಯಾಗಿದೆ. ತಡೆಗೋಡೆಯನ್ನೂ ಹಾಕಿಲ್ಲ. ಸೇತುವೆ, ನಿರ್ಮಾಣಗೊಂಡು 6 ತಿಂಗಳು ಕಳೆಯುವಷ್ಟರಲ್ಲಿಯೇ ಕುಸಿದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನ ಆಗಿಲ್ಲ. ಇನ್ನು ನೀರಿನಿಂದಾಗುವ ಸಮಸ್ಯೆ ತಡೆಯುವಂತೆ ಅಧಿಕಾರಿಗಳು, ಶಾಸಕರಿಗೆ ಮನವಿ ಮಾಡಿದ್ದರೂ ಪರಿಹಾರ ದೊರೆತಿಲ್ಲ’ ಎಂದು ಪ್ರಭು ಅಸಮಧಾನ ವ್ಯಕ್ತಪಡಿಸಿದ್ದಾರೆ.</p>.<p>ಹಿಂದೊಮ್ಮೆ ಅಜ್ಜಂಪುರ ತಹಶೀಲ್ದಾರ್ ಸ್ಥಳಕ್ಕೆ ಬೇಟಿ ನೀಡಿದ್ದರು. ನಮ್ಮ ಸಮಸ್ಯೆ ಆಲಿಸಿ, ಕೃಷಿ ಜಮೀನಿಗೆ ನೀರು ಹರಿಯದಂತೆ ಮತ್ತು ಜಾನುವಾರು, ರೈತರು ಸುಗಮವಾಗಿ ಸಾಗಲು ಸರಿಯಾದ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಕಾರ್ಯಗತಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.</p>.<p>‘ನೀರಿನ ಸೆಳೆತಕ್ಕೆ ಸಿಲುಕಿ ಗ್ರಾಮದ ಮಹೇಶ್ವರಪ್ಪ ಅವರ 2 ಎತ್ತು, ವೀರಭದ್ರಪ್ಪನವರ ಒಂದು ಹಸು ಮೃತಪಟ್ಟಿದೆ. ಅವರಿಗೆ ಪರಿಹಾರ ನೀಡಬೇಕು. ನೀರು ಹರಿವು ಪ್ರಮಾಣ ತಗ್ಗಿಸಿ, ಜಮೀನುಗಳಿಗೆ ತೆರಳಲು ಅನುಕೂಲ ಮಾಡಿಕೊಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>