<p><strong>ಕೊಪ್ಪ: ಇ</strong>ಲ್ಲಿನ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 8ನೇ ವರ್ಷದ ‘ಮಲ್ನಾಡ್ ಇಕೊ ಡ್ರೈವ್ 2025’ 4*4 ಆಫ್ ರೋಡ್ ರ್ಯಾಲಿ ನೋಡುಗರ ಮೈ ಜುಮ್ಮೆನಿಸಿತು.</p>.<p>ತಾಲ್ಲೂಕಿನ ಹಿರೇಕೊಡಿಗೆ ಗ್ರಾಮದ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ ರ್ಯಾಲಿಗೆ ಚಾಲನೆ ನೀಡಲಾಯಿತು.</p>.<p>ಶೆಟ್ಟಿಹಡ್ಲು, ಅಬ್ಬಿಗುಂಡಿ, ಅಸೂಡಿ, ಬಿಳುವಿನಕೊಪ್ಪ, ದೋರಗಲ್, ಅಲಿಗೆ ಭಾಗದಲ್ಲಿ ಹಳ್ಳ, ಅಡಿಕೆ ತೋಟ, ಗದ್ದೆಗಳಲ್ಲಿ ಚಾಲಕರು ಹರಸಾಹಸಪಟ್ಟು ವಾಹನ ಚಲಾಯಿಸಿದರು. ಮಹಿಳೆಯರು ವಾಹನ ಚಲಾಯಿಸಿ, ಸಾಹಸ ಮೆರೆದರು.</p>.<p>ಏರು, ತಗ್ಗು–ದಿಣ್ಣೆ, ಕಡಿದಾದ ರಸ್ತೆಯಲ್ಲಿ ವಾಹನ ಚಲಾಯಿಸಿದ ಪರಿ ನೋಡುಗರನ್ನು ಆಕರ್ಶಿಸಿತು. ಕೆಲವು ಕಡೆಗಳಲ್ಲಿ ಟ್ರ್ಯಾಕ್ ಮಧ್ಯೆ ವಾಹನ ಸಿಲುಕಿಕೊಂಡಾಗ ಅದನ್ನು ಮೇಲೆ ಎಳೆದು ತರಲು 4*4 ಟ್ರ್ಯಾಕ್ಟರ್ ಬಳಸಲಾಯಿತು. ಮಳೆ ಬಂದಿದ್ದ ಕಾರಣಕ್ಕೆ ಟ್ರ್ಯಾಕ್ ಕೆಸರುಮಯವಾಗಿತ್ತು. ಅಕ್ಕ ಪಕ್ಕದಲ್ಲಿ ನೋಡುತ್ತಾ ಮೂಕವಿಸ್ಮಿತರಾಗಿ ನಿಂತಿದ್ದವರ ಮೈಗೆ ಕೆಸರು ರಾಚಿತು. </p>.<p>ಜೀಪ್, ಜಿಪ್ಸಿ, ಥಾರ್, ಜಿಮ್ಮಿ, ಫಾರ್ಚುನರ್ ಸೇರಿದಂತೆ 150ಕ್ಕೂ ಹೆಚ್ಚು ವಾಹನಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದವು. ಬೆಳಿಗ್ಗೆ ರ್ಯಾಲಿಗೆ ಉದ್ಯಮಿ ವಿಶ್ವನಾಥ್ ಗದ್ದೆಮನೆ ಚಾಲನೆ ನೀಡಿದರು.</p>.<p>ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಚಿನ್ ನಂದಿಗೋಡು, ಕಾರ್ಯದರ್ಶಿ ರೋಹಿತ್ ಬಾಳೆಗದ್ದೆ, ಪದಾಧಿಕಾರಿಗಳಾದ ಪೃಥ್ವಿರಾಜ್ ಕೌರಿ, ಸುನಿಲ್, ಮಂಜುನಾಥ್ ತನೂಡಿ, ಇಂದ್ರೇಶ್ ಕೆ.ಎನ್., ಅನೂಪ್ ನಾರ್ವೆ, ಹಿರೇಕೊಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪ: ಇ</strong>ಲ್ಲಿನ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 8ನೇ ವರ್ಷದ ‘ಮಲ್ನಾಡ್ ಇಕೊ ಡ್ರೈವ್ 2025’ 4*4 ಆಫ್ ರೋಡ್ ರ್ಯಾಲಿ ನೋಡುಗರ ಮೈ ಜುಮ್ಮೆನಿಸಿತು.</p>.<p>ತಾಲ್ಲೂಕಿನ ಹಿರೇಕೊಡಿಗೆ ಗ್ರಾಮದ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ ರ್ಯಾಲಿಗೆ ಚಾಲನೆ ನೀಡಲಾಯಿತು.</p>.<p>ಶೆಟ್ಟಿಹಡ್ಲು, ಅಬ್ಬಿಗುಂಡಿ, ಅಸೂಡಿ, ಬಿಳುವಿನಕೊಪ್ಪ, ದೋರಗಲ್, ಅಲಿಗೆ ಭಾಗದಲ್ಲಿ ಹಳ್ಳ, ಅಡಿಕೆ ತೋಟ, ಗದ್ದೆಗಳಲ್ಲಿ ಚಾಲಕರು ಹರಸಾಹಸಪಟ್ಟು ವಾಹನ ಚಲಾಯಿಸಿದರು. ಮಹಿಳೆಯರು ವಾಹನ ಚಲಾಯಿಸಿ, ಸಾಹಸ ಮೆರೆದರು.</p>.<p>ಏರು, ತಗ್ಗು–ದಿಣ್ಣೆ, ಕಡಿದಾದ ರಸ್ತೆಯಲ್ಲಿ ವಾಹನ ಚಲಾಯಿಸಿದ ಪರಿ ನೋಡುಗರನ್ನು ಆಕರ್ಶಿಸಿತು. ಕೆಲವು ಕಡೆಗಳಲ್ಲಿ ಟ್ರ್ಯಾಕ್ ಮಧ್ಯೆ ವಾಹನ ಸಿಲುಕಿಕೊಂಡಾಗ ಅದನ್ನು ಮೇಲೆ ಎಳೆದು ತರಲು 4*4 ಟ್ರ್ಯಾಕ್ಟರ್ ಬಳಸಲಾಯಿತು. ಮಳೆ ಬಂದಿದ್ದ ಕಾರಣಕ್ಕೆ ಟ್ರ್ಯಾಕ್ ಕೆಸರುಮಯವಾಗಿತ್ತು. ಅಕ್ಕ ಪಕ್ಕದಲ್ಲಿ ನೋಡುತ್ತಾ ಮೂಕವಿಸ್ಮಿತರಾಗಿ ನಿಂತಿದ್ದವರ ಮೈಗೆ ಕೆಸರು ರಾಚಿತು. </p>.<p>ಜೀಪ್, ಜಿಪ್ಸಿ, ಥಾರ್, ಜಿಮ್ಮಿ, ಫಾರ್ಚುನರ್ ಸೇರಿದಂತೆ 150ಕ್ಕೂ ಹೆಚ್ಚು ವಾಹನಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದವು. ಬೆಳಿಗ್ಗೆ ರ್ಯಾಲಿಗೆ ಉದ್ಯಮಿ ವಿಶ್ವನಾಥ್ ಗದ್ದೆಮನೆ ಚಾಲನೆ ನೀಡಿದರು.</p>.<p>ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಚಿನ್ ನಂದಿಗೋಡು, ಕಾರ್ಯದರ್ಶಿ ರೋಹಿತ್ ಬಾಳೆಗದ್ದೆ, ಪದಾಧಿಕಾರಿಗಳಾದ ಪೃಥ್ವಿರಾಜ್ ಕೌರಿ, ಸುನಿಲ್, ಮಂಜುನಾಥ್ ತನೂಡಿ, ಇಂದ್ರೇಶ್ ಕೆ.ಎನ್., ಅನೂಪ್ ನಾರ್ವೆ, ಹಿರೇಕೊಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>