<p><strong>ಚಿಕ್ಕಮಗಳೂರು:</strong> ಅಯ್ಯನಕೆರೆ ಕೋಡಿಬಿದ್ದು ಹರಿಯುವ ನೀರಿನಿಂದ ಕೆರೆಗಳನ್ನು ತುಂಬಿಸುವ ಕಾಮಗಾರಿ ಸ್ಥಗಿತಗೊಳಿಸಿ ಯಥಾಸ್ಥಿತಿ ಕಾಪಾಡಬೇಕು ಎಂದು ಮುಖಂಡ ಲೋಕೇಶ್ ಹೇಳಿದರು.</p>.<p>‘ಸಖರಾಯಪಟ್ಟಣ ಹೋಬಳಿಯ ಅಗ್ರಹಾರದ ಬಳಿ ಇರುವ ಚೆಕ್ಡ್ಯಾಂನಿಂದ ನಾಗೇನಹಳ್ಳಿ ಮತ್ತು ಹುಲಿಕೆರೆ ಸಮೀಪದ ಬೆರಟಿಕೆರೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆ ಬಗ್ಗೆ ಅಧಿಕಾರಿಗಳು ಎರಡು ಭಾಗದ ರೈತರಿಗೆ ಸರಿಯಾದ ಮಾಹಿತಿ ನೀಡಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.</p>.<p>ಡಿಪಿಆರ್ನಲ್ಲಿ 200 ಎಚ್ಪಿ ಎರಡು ಮೋಟರ್, ಒಂದು ಮೈನ್ ಇನ್ನೊಂದು ಸ್ಟ್ಯಾಂಡ್ ಬೈ ಎಂಬ ಉಲ್ಲೇಖವಿದೆ. ಕೆರೆಯಿಂದ ಕೂಡಿ ಬಿದ್ದು ಹರಿಯುವ ನೀರಿನಿಂದ ಕೆರೆಗಳನ್ನು ತುಂಬಿಸುವ ಯೋಜನೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಅಯ್ಯನಕೆರೆಯಿಂದ ಕೂಡಿಬಿದ್ದ ನೀರು ವೇದಾನದಿಗೆ ಬರುವುದೇ ಇಲ್ಲ ಎಂದರು.</p>.<p>ಡಿಪಿಆರ್ನಲ್ಲಿ ಇರುವಂತೆ ಅಯ್ಯನಕೆರೆಯಿಂದ ಕೋಡಿಬಿದ್ದ ನೀರು 3,500 ಕ್ಯೂಸೆಕ್ ಹರಿಯುತ್ತದೆ ಎಂದು ನಮೂದಿಸಿದ್ದಾರೆ. ಪ್ರತಿ ಸೆಕೆಂಡಿಗೆ ಅಷ್ಟು ನೀರು ಹರಿಯುತ್ತದೆ ಎಂದಲ್ಲ. ಶುದ್ಧ ಸುಳ್ಳು ಮತ್ತು ಅವೈಜ್ಞಾನಿಕ ಮಾಹಿತಿಯನ್ನು ಕೆಲವರು ನೀಡುತ್ತಿದ್ದಾರೆ ಎಂದು ದೂರಿದರು.</p>.<p>ಅಧಿಕಾರಿಗಳು ತಮ್ಮ ಯೋಜನೆಗೆ ಬೇಕಾದಷ್ಟು ಸಮೀಕ್ಷೆ ಮಾಡಿದ್ದಾರೆಯೇ ಹೊರತು ಕೆಳಭಾಗದ ನೂರಕ್ಕೂ ಅಧಿಕ ಹಳ್ಳಿಗಳ ರೈತರಿಗೆ ಆಗುವ ಅನಾನುಕೂಲದ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ ಎಂದರು.</p>.<p>ಅಂತರ್ಜಲ ವೃದ್ಧಿಯಾಗಲೆಂದು ಚೆಕ್ಡ್ಯಾಂ ನಿರ್ಮಿಸಲಾಗಿದೆ. ಅದೇ ಚೆಕ್ಡ್ಯಾಂನಿಂದ ಬೇರೆಡೆಗೆ ನೀರ ಕೊಂಡೊಯ್ಯುವುದು ಅವೈಜ್ಞಾನಿಕ ಯೋಜನೆ. ಇದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ಕುಡಿಯುವ ನೀರಿಗಾಗಿ ನಾಗೇನಳ್ಳಿ ಕೆರೆ ಮತ್ತು ಬೆರಟಿಕೆರೆಗೆ ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.</p>.<p>ನೂರಾರು ಹಳ್ಳಿಗಳಿಗೆ ವೇದಾನದಿ ಜೀವ ನದಿಯಾಗಿದೆ. ವೇದಾನದಿಯ ನೀರನ್ನೆ ನೂರಾರು ಹಳ್ಳಿಗಳು ಕುಡಿಯಲು ಇಂದಿಗೂ ಬಳಸುತ್ತಿವೆ. ವೇದಾನದಿಯ ನೀರು ಉಳಿಸಿ ರೈತರಿಗೆ ಅನುಕೂಲ ಮಾಡಿ ಅವರ ಜೀವ ಉಳಿಸಬೇಕು ಮನವಿ ಮಾಡಿದರು.</p>.<p>ಸುದ್ದಿಗೋಷ್ಠಿಯಲ್ಲಿ ಜಿಗಣೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಅಯ್ಯನಕೆರೆ ಕೋಡಿಬಿದ್ದು ಹರಿಯುವ ನೀರಿನಿಂದ ಕೆರೆಗಳನ್ನು ತುಂಬಿಸುವ ಕಾಮಗಾರಿ ಸ್ಥಗಿತಗೊಳಿಸಿ ಯಥಾಸ್ಥಿತಿ ಕಾಪಾಡಬೇಕು ಎಂದು ಮುಖಂಡ ಲೋಕೇಶ್ ಹೇಳಿದರು.</p>.<p>‘ಸಖರಾಯಪಟ್ಟಣ ಹೋಬಳಿಯ ಅಗ್ರಹಾರದ ಬಳಿ ಇರುವ ಚೆಕ್ಡ್ಯಾಂನಿಂದ ನಾಗೇನಹಳ್ಳಿ ಮತ್ತು ಹುಲಿಕೆರೆ ಸಮೀಪದ ಬೆರಟಿಕೆರೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆ ಬಗ್ಗೆ ಅಧಿಕಾರಿಗಳು ಎರಡು ಭಾಗದ ರೈತರಿಗೆ ಸರಿಯಾದ ಮಾಹಿತಿ ನೀಡಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.</p>.<p>ಡಿಪಿಆರ್ನಲ್ಲಿ 200 ಎಚ್ಪಿ ಎರಡು ಮೋಟರ್, ಒಂದು ಮೈನ್ ಇನ್ನೊಂದು ಸ್ಟ್ಯಾಂಡ್ ಬೈ ಎಂಬ ಉಲ್ಲೇಖವಿದೆ. ಕೆರೆಯಿಂದ ಕೂಡಿ ಬಿದ್ದು ಹರಿಯುವ ನೀರಿನಿಂದ ಕೆರೆಗಳನ್ನು ತುಂಬಿಸುವ ಯೋಜನೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಅಯ್ಯನಕೆರೆಯಿಂದ ಕೂಡಿಬಿದ್ದ ನೀರು ವೇದಾನದಿಗೆ ಬರುವುದೇ ಇಲ್ಲ ಎಂದರು.</p>.<p>ಡಿಪಿಆರ್ನಲ್ಲಿ ಇರುವಂತೆ ಅಯ್ಯನಕೆರೆಯಿಂದ ಕೋಡಿಬಿದ್ದ ನೀರು 3,500 ಕ್ಯೂಸೆಕ್ ಹರಿಯುತ್ತದೆ ಎಂದು ನಮೂದಿಸಿದ್ದಾರೆ. ಪ್ರತಿ ಸೆಕೆಂಡಿಗೆ ಅಷ್ಟು ನೀರು ಹರಿಯುತ್ತದೆ ಎಂದಲ್ಲ. ಶುದ್ಧ ಸುಳ್ಳು ಮತ್ತು ಅವೈಜ್ಞಾನಿಕ ಮಾಹಿತಿಯನ್ನು ಕೆಲವರು ನೀಡುತ್ತಿದ್ದಾರೆ ಎಂದು ದೂರಿದರು.</p>.<p>ಅಧಿಕಾರಿಗಳು ತಮ್ಮ ಯೋಜನೆಗೆ ಬೇಕಾದಷ್ಟು ಸಮೀಕ್ಷೆ ಮಾಡಿದ್ದಾರೆಯೇ ಹೊರತು ಕೆಳಭಾಗದ ನೂರಕ್ಕೂ ಅಧಿಕ ಹಳ್ಳಿಗಳ ರೈತರಿಗೆ ಆಗುವ ಅನಾನುಕೂಲದ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ ಎಂದರು.</p>.<p>ಅಂತರ್ಜಲ ವೃದ್ಧಿಯಾಗಲೆಂದು ಚೆಕ್ಡ್ಯಾಂ ನಿರ್ಮಿಸಲಾಗಿದೆ. ಅದೇ ಚೆಕ್ಡ್ಯಾಂನಿಂದ ಬೇರೆಡೆಗೆ ನೀರ ಕೊಂಡೊಯ್ಯುವುದು ಅವೈಜ್ಞಾನಿಕ ಯೋಜನೆ. ಇದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ಕುಡಿಯುವ ನೀರಿಗಾಗಿ ನಾಗೇನಳ್ಳಿ ಕೆರೆ ಮತ್ತು ಬೆರಟಿಕೆರೆಗೆ ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.</p>.<p>ನೂರಾರು ಹಳ್ಳಿಗಳಿಗೆ ವೇದಾನದಿ ಜೀವ ನದಿಯಾಗಿದೆ. ವೇದಾನದಿಯ ನೀರನ್ನೆ ನೂರಾರು ಹಳ್ಳಿಗಳು ಕುಡಿಯಲು ಇಂದಿಗೂ ಬಳಸುತ್ತಿವೆ. ವೇದಾನದಿಯ ನೀರು ಉಳಿಸಿ ರೈತರಿಗೆ ಅನುಕೂಲ ಮಾಡಿ ಅವರ ಜೀವ ಉಳಿಸಬೇಕು ಮನವಿ ಮಾಡಿದರು.</p>.<p>ಸುದ್ದಿಗೋಷ್ಠಿಯಲ್ಲಿ ಜಿಗಣೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>