ದೇವಸ್ಥಾನದಿಂದ ವಧುವಿಗೆ ಚಿನ್ನದ ತಾಳಿ, ಸೀರೆ, ವರನಿಗೆ ಪಂಚೆ, ಶಲ್ಯ ನೀಡಲಾಗಿತ್ತು. ಅರ್ಚಕರು ಧ್ವನಿವರ್ಧಕದ ಮೂಲಕ ನೀಡಿದ ಸೂಚನೆಯಂತೆ ವಧೂವರರು ಪರಸ್ಪರ ಕೆನ್ನೆಗೆ ಎಳ್ಳು – ಜೀರಿಗೆ ಸವರಿದರು. ಭೀಮೇಶ್ವರ ಜೋಷಿ ದಂಪತಿ ವರರಿಗೂ ತಾಳಿಯನ್ನು ನೀಡಿದರು. ವೇದ ಮಂತ್ರ ಪಠಣೆ ನಡುವೆ ಮಾಂಗಲ್ಯಧಾರಣೆ ನಡೆಯಿತು. ತಮ್ಮ ಪೋಷಕರ ಸಾಕ್ಷಿಯಾಗಿ ವಧೂ ವರರು ಹಾರ ಬದಲಿಸಿಕೊಂಡು ಸತಿಪತಿಗಳಾದರು.