<p>ಕಳಸ: ತಾಲ್ಲೂಕಿನ ಇಡಕಿಣಿ ಗ್ರಾಮದ ಹೆಮ್ಮಕ್ಕಿ ಆಸುಪಾಸಿನ ಗ್ರಾಮಸ್ಥರು ರಸ್ತೆ, ನೀರು, ವಸತಿ, ಆರೋಗ್ಯ ಸೇವೆ, ಶಿಕ್ಷಣ ಮುಂತಾದ ಮೂಲ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.</p>.<p>ಬರ್ಗಲ್ ಕಾಲೊನಿ, ಸಿಡ್ಲಾರ್ ಮಕ್ಕಿ, ಹಡ್ಲುಮನೆ, ಸುಕನ ಕೊಳಲು, ಮಾಟ್ರಳ್ಳಿ, ಭದ್ರಕಾಳಿ, ಮಳಲಿಕೆರೆ, ನರ್ಗಲ್, ನಾಗಸಂಪಿಗೆಮಕ್ಕಿ, ರಾಮನಕುಡಿಗೆ, ಕಟ್ಟಿನಗುಂಡಿ, ಕೋಟೆಮಕ್ಕಿ ಗ್ರಾಮಸ್ಥರು ಮೂಲ ಸೌಲಭ್ಯಗಳು ಇಲ್ಲದೆ ಪರದಾಡುತ್ತಿದ್ದಾರೆ. ಈ ಗ್ರಾಮಗಳ ನಿವಾಸಿಗಳು ನ್ಯಾಯಬೆಲೆ ಅಂಗಡಿಗಾಗಿ ದೂರದ ಹಿರೇಬೈಲಿಗೆ ಹೋಗಬೇಕಿದೆ. ಹೆಮ್ಮಕ್ಕಿಯಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪಿಸಬೇಕು. ಅನಾರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ದೂರದ ಹಿರೇಬೈಲ್ ಅಥವಾ ಕಳಸಕ್ಕೆ ಹೋಗಬೇಕಿದೆ. ಇದನ್ನು ತಪ್ಪಿಸಲು ಹೆಮ್ಮಕ್ಕಿಯಲ್ಲಿ ಆರೋಗ್ಯ ಉಪಕೇಂದ್ರ ಸ್ಥಾಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.</p>.<p>ಹೆಮ್ಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲಾಗಿದೆ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ 42 ಮಕ್ಕಳು ಇದ್ದು ಮಂದಿನ ವಿದ್ಯಾಭ್ಯಾಸಕ್ಕಾಗಿ ಹಿರೇಬೈಲು ಅಥವಾ ದೂರದ ಕಳಸಕ್ಕೆ ಹೋಗುವುದು ಅನಿವಾರ್ಯ ಆಗಿದೆ. ಹೆಮ್ಮಕ್ಕಿಗೆ ಶಿಕ್ಷಕರನ್ನು ನೇಮಿಸಿ ಹಿರಿಯ ಪ್ರಾಥಮಿಕ ಶಾಲೆ ಪುನರಾರಂಭಿಸಬೇಕು. ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಇಡಕಿಣಿ, ಹೆಮ್ಮಕ್ಕಿ ಗ್ರಾಮಗಳ ರಸ್ತೆ ದುರಸ್ತಿ ಆರಂಭಿಸಿ ಮೂರು ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ. ಹೆಮ್ಮಕ್ಕಿ-ಬಾಳೆಹೊಳೆ ರಸ್ತೆ ಹದಗೆಟ್ಟಿದೆ. ಹೆಮ್ಮಕ್ಕಿ ಪ್ರದೇಶದ ಎಲ್ಲ ಗ್ರಾಮಾಂತರ ರಸ್ತೆಗಳ ದುರಸ್ತಿ ಮಾಡಬೇಕು ಎಂಜಿ.ದು ಆಗ್ರಹಿಸಲಾಗಿದೆ.</p>.<p>ಹೆಮ್ಮಕ್ಕಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು, ಭಾಗದ ವಸತಿರಹಿತರಿಗೆ ನಿವೇಶನ ಹಂಚಬೇಕು. ಕೆರೆಕುಡಿಗೆ, ಹೆಮ್ಮಕ್ಕಿ, ಭದ್ರಕಾಳಿ, ನಾಗಸಂಪಿಗೆಮಕ್ಕಿ, ಸಿಡ್ಲರ್ಮಕ್ಕಿ ಪ್ರದೇಶದಲ್ಲಿ ಸ್ಮಶಾನಕ್ಕಾಗಿ ಭೂಮಿ ಮಂಜೂರು ಮಾಡಬೇಕು ಎಂಬುದು ಇತರ ಬೇಡಿಕೆಗಳಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳಸ: ತಾಲ್ಲೂಕಿನ ಇಡಕಿಣಿ ಗ್ರಾಮದ ಹೆಮ್ಮಕ್ಕಿ ಆಸುಪಾಸಿನ ಗ್ರಾಮಸ್ಥರು ರಸ್ತೆ, ನೀರು, ವಸತಿ, ಆರೋಗ್ಯ ಸೇವೆ, ಶಿಕ್ಷಣ ಮುಂತಾದ ಮೂಲ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.</p>.<p>ಬರ್ಗಲ್ ಕಾಲೊನಿ, ಸಿಡ್ಲಾರ್ ಮಕ್ಕಿ, ಹಡ್ಲುಮನೆ, ಸುಕನ ಕೊಳಲು, ಮಾಟ್ರಳ್ಳಿ, ಭದ್ರಕಾಳಿ, ಮಳಲಿಕೆರೆ, ನರ್ಗಲ್, ನಾಗಸಂಪಿಗೆಮಕ್ಕಿ, ರಾಮನಕುಡಿಗೆ, ಕಟ್ಟಿನಗುಂಡಿ, ಕೋಟೆಮಕ್ಕಿ ಗ್ರಾಮಸ್ಥರು ಮೂಲ ಸೌಲಭ್ಯಗಳು ಇಲ್ಲದೆ ಪರದಾಡುತ್ತಿದ್ದಾರೆ. ಈ ಗ್ರಾಮಗಳ ನಿವಾಸಿಗಳು ನ್ಯಾಯಬೆಲೆ ಅಂಗಡಿಗಾಗಿ ದೂರದ ಹಿರೇಬೈಲಿಗೆ ಹೋಗಬೇಕಿದೆ. ಹೆಮ್ಮಕ್ಕಿಯಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪಿಸಬೇಕು. ಅನಾರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ದೂರದ ಹಿರೇಬೈಲ್ ಅಥವಾ ಕಳಸಕ್ಕೆ ಹೋಗಬೇಕಿದೆ. ಇದನ್ನು ತಪ್ಪಿಸಲು ಹೆಮ್ಮಕ್ಕಿಯಲ್ಲಿ ಆರೋಗ್ಯ ಉಪಕೇಂದ್ರ ಸ್ಥಾಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.</p>.<p>ಹೆಮ್ಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲಾಗಿದೆ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ 42 ಮಕ್ಕಳು ಇದ್ದು ಮಂದಿನ ವಿದ್ಯಾಭ್ಯಾಸಕ್ಕಾಗಿ ಹಿರೇಬೈಲು ಅಥವಾ ದೂರದ ಕಳಸಕ್ಕೆ ಹೋಗುವುದು ಅನಿವಾರ್ಯ ಆಗಿದೆ. ಹೆಮ್ಮಕ್ಕಿಗೆ ಶಿಕ್ಷಕರನ್ನು ನೇಮಿಸಿ ಹಿರಿಯ ಪ್ರಾಥಮಿಕ ಶಾಲೆ ಪುನರಾರಂಭಿಸಬೇಕು. ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಇಡಕಿಣಿ, ಹೆಮ್ಮಕ್ಕಿ ಗ್ರಾಮಗಳ ರಸ್ತೆ ದುರಸ್ತಿ ಆರಂಭಿಸಿ ಮೂರು ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ. ಹೆಮ್ಮಕ್ಕಿ-ಬಾಳೆಹೊಳೆ ರಸ್ತೆ ಹದಗೆಟ್ಟಿದೆ. ಹೆಮ್ಮಕ್ಕಿ ಪ್ರದೇಶದ ಎಲ್ಲ ಗ್ರಾಮಾಂತರ ರಸ್ತೆಗಳ ದುರಸ್ತಿ ಮಾಡಬೇಕು ಎಂಜಿ.ದು ಆಗ್ರಹಿಸಲಾಗಿದೆ.</p>.<p>ಹೆಮ್ಮಕ್ಕಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು, ಭಾಗದ ವಸತಿರಹಿತರಿಗೆ ನಿವೇಶನ ಹಂಚಬೇಕು. ಕೆರೆಕುಡಿಗೆ, ಹೆಮ್ಮಕ್ಕಿ, ಭದ್ರಕಾಳಿ, ನಾಗಸಂಪಿಗೆಮಕ್ಕಿ, ಸಿಡ್ಲರ್ಮಕ್ಕಿ ಪ್ರದೇಶದಲ್ಲಿ ಸ್ಮಶಾನಕ್ಕಾಗಿ ಭೂಮಿ ಮಂಜೂರು ಮಾಡಬೇಕು ಎಂಬುದು ಇತರ ಬೇಡಿಕೆಗಳಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>