ಏನಿದು ಪ್ರಕರಣ: 2013ನೇ ಇಸವಿಯಲ್ಲಿ ಪ್ರಕರಣ ನಡೆದಿತ್ತು. ಕಲ್ಲೇಶ ಅವರು ಮರವಂಜಿ ಗ್ರಾಮದ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಆಗಿದ್ದರು. ರೇವಮ್ಮ ಎಂಬವರು ₹9,900, ಚಿಕ್ಕಮ್ಮ ಎಂಬವರು ₹ 10,000 ನಗದನ್ನು ಉಳಿತಾಯ ಖಾತೆಗೆ ಜಮೆ ಮಾಡಲು ನೀಡಿದ್ದರು. ಕಲ್ಲೇಶ ಹಣ ಪಡೆದು ಪಾಸ್ ಪುಸ್ತಕದಲ್ಲಿ ಮೊತ್ತ ನಮೂದಿಸಿದ್ದರು. ಆದರೆ, ಇಲಾಖೆಗೆ ಹಣವನ್ನು ಪಾವತಿಸಿರಲಿಲ್ಲ. ಅದನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು.