<p><strong>ಚಿಕ್ಕಮಗಳೂರು: </strong>ಗ್ರಾಹಕರಿಬ್ಬರು ಉಳಿತಾಯ ಖಾತೆಗೆ ಕಟ್ಟಿದ ಹಣವನ್ನು ಇಲಾಖೆಗೆ ಪಾವತಿಸದೆ ಸ್ವಂತಕ್ಕೆ ಬಳಸಿಕೊಂಡ ಪ್ರಕರಣದಲ್ಲಿ ಅಂಚೆ ಇಲಾಖೆ ನೌಕರ ವಿ.ಆರ್.ಕಲ್ಲೇಶಗೆ ಒಂದು ವರ್ಷ ಜೈಲು, ₹ 5,000 ದಂಡವನ್ನು ಕಡೂರಿನ ಜೆಎಂಎಫ್ ಕೋರ್ಟ್ ವಿಧಿಸಿದೆ.</p>.<p>ನ್ಯಾಯಾಧೀಶ ಈರಪ್ಪ ಢವಳೇಶ್ವರ್ ಈ ಆದೇಶ ನೀಡಿದ್ದಾರೆ.</p>.<p class="Subhead"><strong>ಏನಿದು ಪ್ರಕರಣ: </strong>2013ನೇ ಇಸವಿಯಲ್ಲಿ ಪ್ರಕರಣ ನಡೆದಿತ್ತು. ಕಲ್ಲೇಶ ಅವರು ಮರವಂಜಿ ಗ್ರಾಮದ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಆಗಿದ್ದರು. ರೇವಮ್ಮ ಎಂಬವರು ₹9,900, ಚಿಕ್ಕಮ್ಮ ಎಂಬವರು ₹ 10,000 ನಗದನ್ನು ಉಳಿತಾಯ ಖಾತೆಗೆ ಜಮೆ ಮಾಡಲು ನೀಡಿದ್ದರು. ಕಲ್ಲೇಶ ಹಣ ಪಡೆದು ಪಾಸ್ ಪುಸ್ತಕದಲ್ಲಿ ಮೊತ್ತ ನಮೂದಿಸಿದ್ದರು. ಆದರೆ, ಇಲಾಖೆಗೆ ಹಣವನ್ನು ಪಾವತಿಸಿರಲಿಲ್ಲ. ಅದನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು.</p>.<p>ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸಹಾಯಕ ಪಬ್ಲಿಕ್ ಪ್ರಾಸಿಕ್ಯುಟರ್ ಬಿ.ಎಂ.ಹರೀಶ್ ಕುಮಾರ್ ಸಾಕ್ಷ್ಯ ವಿಚಾರಣೆ ಮಾಡಿದ್ದರು. ಸಹಾಯಕ ಪಬ್ಲಿಕ್ ಪ್ರಾಸಿಕ್ಯುಟರ್ ನಾಜಿಯಾ ಪರ್ವಿನ್ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಗ್ರಾಹಕರಿಬ್ಬರು ಉಳಿತಾಯ ಖಾತೆಗೆ ಕಟ್ಟಿದ ಹಣವನ್ನು ಇಲಾಖೆಗೆ ಪಾವತಿಸದೆ ಸ್ವಂತಕ್ಕೆ ಬಳಸಿಕೊಂಡ ಪ್ರಕರಣದಲ್ಲಿ ಅಂಚೆ ಇಲಾಖೆ ನೌಕರ ವಿ.ಆರ್.ಕಲ್ಲೇಶಗೆ ಒಂದು ವರ್ಷ ಜೈಲು, ₹ 5,000 ದಂಡವನ್ನು ಕಡೂರಿನ ಜೆಎಂಎಫ್ ಕೋರ್ಟ್ ವಿಧಿಸಿದೆ.</p>.<p>ನ್ಯಾಯಾಧೀಶ ಈರಪ್ಪ ಢವಳೇಶ್ವರ್ ಈ ಆದೇಶ ನೀಡಿದ್ದಾರೆ.</p>.<p class="Subhead"><strong>ಏನಿದು ಪ್ರಕರಣ: </strong>2013ನೇ ಇಸವಿಯಲ್ಲಿ ಪ್ರಕರಣ ನಡೆದಿತ್ತು. ಕಲ್ಲೇಶ ಅವರು ಮರವಂಜಿ ಗ್ರಾಮದ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಆಗಿದ್ದರು. ರೇವಮ್ಮ ಎಂಬವರು ₹9,900, ಚಿಕ್ಕಮ್ಮ ಎಂಬವರು ₹ 10,000 ನಗದನ್ನು ಉಳಿತಾಯ ಖಾತೆಗೆ ಜಮೆ ಮಾಡಲು ನೀಡಿದ್ದರು. ಕಲ್ಲೇಶ ಹಣ ಪಡೆದು ಪಾಸ್ ಪುಸ್ತಕದಲ್ಲಿ ಮೊತ್ತ ನಮೂದಿಸಿದ್ದರು. ಆದರೆ, ಇಲಾಖೆಗೆ ಹಣವನ್ನು ಪಾವತಿಸಿರಲಿಲ್ಲ. ಅದನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು.</p>.<p>ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸಹಾಯಕ ಪಬ್ಲಿಕ್ ಪ್ರಾಸಿಕ್ಯುಟರ್ ಬಿ.ಎಂ.ಹರೀಶ್ ಕುಮಾರ್ ಸಾಕ್ಷ್ಯ ವಿಚಾರಣೆ ಮಾಡಿದ್ದರು. ಸಹಾಯಕ ಪಬ್ಲಿಕ್ ಪ್ರಾಸಿಕ್ಯುಟರ್ ನಾಜಿಯಾ ಪರ್ವಿನ್ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>