‘ಆರೋಪಿಗಳು ಮುತ್ತೋಡಿ ಪ್ರಾದೇಶಿಕ ಅರಣ್ಯ ವ್ಯಾಪ್ತಿಯಲ್ಲಿ ಚಿಪ್ಪು ಹಂದಿಗಳನ್ನು ಬೇಟೆಯಾಡಿ ತಂದು ಮಾರಾಟ ಮಾಡುತ್ತಿದ್ದರು. ಆರೋಪಿಗಳು ಸಖರಾಯಪಟ್ಟಣ, ಜಾವಗಲ್, ಕಳಾಸಪುರ ಇತರ ಊರಿನವರು. ಆರೋಪಿಗಳ ಫೋನ್ ಕಾಲ್ ಡಿಟೇಲ್ಸ್ನಿಂದ ಜಾಲವನ್ನು ಪತ್ತೆ ಹೆಚ್ಚಿದೆವು. 6 ಕೆ.ಜಿ ಮಾಲು ವಶಪಡಿಸಿಕೊಂಡಿದ್ದೇವೆ.’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.