<p><strong>ಚಿಕ್ಕಮಗಳೂರು:</strong> ನಗರದ ಆಶ್ರಯ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಖಾಲಿಯಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯವರು ಸೂಚನೆ ನೀಡಿದ್ದು, ನಾಲ್ವರು ಕೋವಿಡ್ ರೋಗಿಗಳನ್ನು ಸಂಬಂಧಿಕರು ಬೇರೆ ಕಡೆಗೆ ಕರೆದೊಯ್ದಿದ್ದಾರೆ.</p>.<p>ಒಬ್ಬರು ಜಿಲ್ಲಾಸ್ಪತ್ರೆಯ ಕೋವಿಡ್ ಕೇಂದ್ರ, ಮತ್ತೊಬ್ಬರು ಹಾಸನ, ಇಬ್ಬರು ಮಂಗಳೂರಿಗೆ ತೆರಳಿದ್ದಾರೆ.</p>.<p>ಈ ಆಸ್ಪತ್ರೆಯಲ್ಲಿ 45 ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಏಳು ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ.<br />'ರಾತ್ರಿ 12 ಗಂಟೆವರೆಗೆ ನಿಭಾಯಿಸಬಹುದಾದಷ್ಟು ಆಮ್ಲಜನಕ ಸಂಗ್ರಹ ಇದೆ. ತುರ್ತಾಗಿ ಆಮ್ಲಜನಕದ 20 ಸಿಲಿಂಡರ್ ಪೂರೈಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ.</p>.<p>ಸದ್ಯಕ್ಕೆ ಆಸ್ಪತ್ರೆಗಳಿಂದ ಐದು ಸಿಲಿಂಡರ್ ಕಡ ತಂದಿದ್ದೇವೆ. ಒಂದು ವೇಳೆ ಸಿಲಿಂಡರ್ ಪೂರೈಕೆಯಾಗದಿದ್ದರೆ ಕೋವಿಡ್ ರೋಗಿಗಳನ್ನು ಜಿಲ್ಲಾಸ್ಪತ್ರೆ ಕೋವಿಡ್ ವಾರ್ಡ್ ಗೆ ಕಳಿಸಬೇಕಾಗುತ್ತದೆ' ಎಂದು ಆಶ್ರಯ ಆಸ್ಪತ್ರೆ ಮುಖ್ಯಸ್ಥ ಡಾ.ಡಿ.ಎಲ್.ವಿಜಯಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ನಗರದ ಆಶ್ರಯ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಖಾಲಿಯಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯವರು ಸೂಚನೆ ನೀಡಿದ್ದು, ನಾಲ್ವರು ಕೋವಿಡ್ ರೋಗಿಗಳನ್ನು ಸಂಬಂಧಿಕರು ಬೇರೆ ಕಡೆಗೆ ಕರೆದೊಯ್ದಿದ್ದಾರೆ.</p>.<p>ಒಬ್ಬರು ಜಿಲ್ಲಾಸ್ಪತ್ರೆಯ ಕೋವಿಡ್ ಕೇಂದ್ರ, ಮತ್ತೊಬ್ಬರು ಹಾಸನ, ಇಬ್ಬರು ಮಂಗಳೂರಿಗೆ ತೆರಳಿದ್ದಾರೆ.</p>.<p>ಈ ಆಸ್ಪತ್ರೆಯಲ್ಲಿ 45 ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಏಳು ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ.<br />'ರಾತ್ರಿ 12 ಗಂಟೆವರೆಗೆ ನಿಭಾಯಿಸಬಹುದಾದಷ್ಟು ಆಮ್ಲಜನಕ ಸಂಗ್ರಹ ಇದೆ. ತುರ್ತಾಗಿ ಆಮ್ಲಜನಕದ 20 ಸಿಲಿಂಡರ್ ಪೂರೈಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ.</p>.<p>ಸದ್ಯಕ್ಕೆ ಆಸ್ಪತ್ರೆಗಳಿಂದ ಐದು ಸಿಲಿಂಡರ್ ಕಡ ತಂದಿದ್ದೇವೆ. ಒಂದು ವೇಳೆ ಸಿಲಿಂಡರ್ ಪೂರೈಕೆಯಾಗದಿದ್ದರೆ ಕೋವಿಡ್ ರೋಗಿಗಳನ್ನು ಜಿಲ್ಲಾಸ್ಪತ್ರೆ ಕೋವಿಡ್ ವಾರ್ಡ್ ಗೆ ಕಳಿಸಬೇಕಾಗುತ್ತದೆ' ಎಂದು ಆಶ್ರಯ ಆಸ್ಪತ್ರೆ ಮುಖ್ಯಸ್ಥ ಡಾ.ಡಿ.ಎಲ್.ವಿಜಯಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>