ಅರಣ್ಯಅತೀವ ಒತ್ತುವರಿ, ಮರಳಿನ ದರೋಡೆ, ಗಣಿಗಾರಿಕೆ, ಎಸ್ಟೇಟ್ ಮಾಫಿಯಾಗಳು ಪಶ್ಚಿಮ ಘಟ್ಟಕ್ಕೆ ಮಾರಕವಾಗಿವೆ. ಬೆಳ್ತಂಗಡಿ, ಮೂಡಿಗೆರೆ, ಬಂಡೀಪುರ, ಕೊಡಗು ವ್ಯಾಪ್ತಿ, ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯ ಬಾರಿಮಲೆ, ರಾಮನಬೆಟ್ಟ, ಸೊಪ್ಪಿನಗುಡ್ಡ, ಹೊಸಮನೆಗುಡ್ಡ, ಕಡತಕಲ್ಲು ಘಾಟಿಯ ಕೃಷ್ಣಗಿರಿ, ಎಳನೀರು ಘಾಟಿಯ ಹಿರಿಮರಿಗುಪ್ಪೆ, ಭೈರಾಪುರ ಘಾಟಿಯ ದೀಪದಕಲ್ಲು, ಉಳಿಯಮಲೆ, ಮೇರುತಿಗರಿ, ಅಬ್ಬನೆಟ್ಟಿ, ವೆಂಕಟಗಿರಿ, ಮುಗಿಲಗಿರಿ, ಅಮೇದಿಕ್ಕಲ್ ಮೊದಲಾದ ಕಡೆಗಳಲ್ಲಿ ಕಾಫಿ ಎಸ್ಟೇಟ್ನವರು ಕಾಡು ಕಡಿದು ಗಿಡಗಳನ್ನು ನೆಟ್ಟಿದ್ದಾರೆ. ನಿಸರ್ಗವನ್ನು ಹಾಳು ಮಾಡಿರುವುದೇ ಈ ಬಾರಿಯ ಮಳೆಹಾಮಿಗೆ ಕಾರಣ ಎಂದು ಹೇಳಿದರು.