ಆರ್ಎಸ್ಎಸ್ ಬಗ್ಗೆ ಎಚ್ಡಿಕೆ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಪದ್ಧತಿ ಸಂಘದಲ್ಲಿ ಇಲ್ಲ. ಸತ್ಯದ ಅರಿವಿದ್ದರೆ ಆರ್ಎಸ್ಎಸ್ ಅರ್ಥವಾಗುತ್ತದೆ. ತಾನು ಬದುಕಿರುವವರೆಗೆ ವೋಟು ಬಂದರೆ ಸಾಕು ಅನ್ನುವ ಮನೋಭಾವ ಇರುವವರಿಗೆ, ಸ್ವಾರ್ಥದಲ್ಲಿ ಯೋಚಿಸುವವರಿಗೆ ಅರ್ಥವಾಗಲ್ಲ. ತನ್ನ ಸ್ವಾರ್ಥಕ್ಕಿಂತ ದೇಶ ಮಹತ್ವದ್ದು ಎನ್ನುವವರಿಗೆ ಆರ್ಎಸ್ಎಸ್ ಅರ್ಥವಾಗುತ್ತದೆ’ ಎಂದರು.