<p><strong>ಚಿಕ್ಕಮಗಳೂರು</strong>: ‘ಆರ್ಎಸ್ಎಸ್ ಆನೆ ಇದ್ದಂತೆ. ಬೇರೆಯವರು ಏನು ಮಾಡುತ್ತಾರೆ ಎಂದು ಆನೆ ಯಾವತ್ತೂ ತಲೆಕೆಡಿಸಿಕೊಳ್ಳಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.</p>.<p>ಆರ್ಎಸ್ಎಸ್ ಬಗ್ಗೆ ಎಚ್ಡಿಕೆ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಪದ್ಧತಿ ಸಂಘದಲ್ಲಿ ಇಲ್ಲ. ಸತ್ಯದ ಅರಿವಿದ್ದರೆ ಆರ್ಎಸ್ಎಸ್ ಅರ್ಥವಾಗುತ್ತದೆ. ತಾನು ಬದುಕಿರುವವರೆಗೆ ವೋಟು ಬಂದರೆ ಸಾಕು ಅನ್ನುವ ಮನೋಭಾವ ಇರುವವರಿಗೆ, ಸ್ವಾರ್ಥದಲ್ಲಿ ಯೋಚಿಸುವವರಿಗೆ ಅರ್ಥವಾಗಲ್ಲ. ತನ್ನ ಸ್ವಾರ್ಥಕ್ಕಿಂತ ದೇಶ ಮಹತ್ವದ್ದು ಎನ್ನುವವರಿಗೆ ಆರ್ಎಸ್ಎಸ್ ಅರ್ಥವಾಗುತ್ತದೆ’ ಎಂದರು.</p>.<p>‘ಜಿಲ್ಲೆ ಉಸ್ತುವಾರಿ ಯಾರಿಗೆ ಕೊಡಬೇಕು ಎಂಬುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು, ಆಯಾ ಜಿಲ್ಲೆ ಪರಿಸ್ಥಿತಿ ಆಧರಿಸಿ ಅವರು ತೀರ್ಮಾನಿಸುತ್ತಾರೆ. ಆ ವಿಷಯದಲ್ಲಿ ತಲೆಹಾಕಲ್ಲ’ ಎಂದು ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ‘ಆರ್ಎಸ್ಎಸ್ ಆನೆ ಇದ್ದಂತೆ. ಬೇರೆಯವರು ಏನು ಮಾಡುತ್ತಾರೆ ಎಂದು ಆನೆ ಯಾವತ್ತೂ ತಲೆಕೆಡಿಸಿಕೊಳ್ಳಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.</p>.<p>ಆರ್ಎಸ್ಎಸ್ ಬಗ್ಗೆ ಎಚ್ಡಿಕೆ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಪದ್ಧತಿ ಸಂಘದಲ್ಲಿ ಇಲ್ಲ. ಸತ್ಯದ ಅರಿವಿದ್ದರೆ ಆರ್ಎಸ್ಎಸ್ ಅರ್ಥವಾಗುತ್ತದೆ. ತಾನು ಬದುಕಿರುವವರೆಗೆ ವೋಟು ಬಂದರೆ ಸಾಕು ಅನ್ನುವ ಮನೋಭಾವ ಇರುವವರಿಗೆ, ಸ್ವಾರ್ಥದಲ್ಲಿ ಯೋಚಿಸುವವರಿಗೆ ಅರ್ಥವಾಗಲ್ಲ. ತನ್ನ ಸ್ವಾರ್ಥಕ್ಕಿಂತ ದೇಶ ಮಹತ್ವದ್ದು ಎನ್ನುವವರಿಗೆ ಆರ್ಎಸ್ಎಸ್ ಅರ್ಥವಾಗುತ್ತದೆ’ ಎಂದರು.</p>.<p>‘ಜಿಲ್ಲೆ ಉಸ್ತುವಾರಿ ಯಾರಿಗೆ ಕೊಡಬೇಕು ಎಂಬುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು, ಆಯಾ ಜಿಲ್ಲೆ ಪರಿಸ್ಥಿತಿ ಆಧರಿಸಿ ಅವರು ತೀರ್ಮಾನಿಸುತ್ತಾರೆ. ಆ ವಿಷಯದಲ್ಲಿ ತಲೆಹಾಕಲ್ಲ’ ಎಂದು ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>