ಚಿಕ್ಕಮಗಳೂರು: ಕೊಪ್ಪ ತಾಲ್ಲೂಕಿನ ಗುಡ್ಡೆತೋಟದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರುಸಂತ್ರಸ್ತರ ಸಮಸ್ಯೆ ಆಲಿಸದೆ ತೆರಳಿದರು ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಸಚಿವರಿಗೆ ಸಮಸ್ಯೆ ತೋಡಿಕೊಳ್ಳಲು ಜನರು ಕಾದು ನಿಂತಿದ್ದರು. ಆದರೆ,ಶೋಭಾ ಅವರು ಮಣ್ಣು ಜರುಗಿದ ಸ್ಥಳ ಪರಿಶೀಲಿಸಿ ಹೊರಟರು. ಸಚಿವರ ನಡೆ ಖಂಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸಚಿವೆ ವಿರುದ್ಧ ಘೋಷಣೆ ಕೂಗಿದರು.
'ಸಚಿವೆ ಶೋಭಾ ಅವರು ನೊಂದವರ ಕಷ್ಟ ಆಲಿಸದೆ ತೆರಳಿದ್ದಾರೆ. ಅವರು ಸ್ಥಳಕ್ಕೆ ಬಂದು ಜನರ ಸಮಸ್ಯೆ ಆಲಿಸಬೇಕು ಎಂದು ಪಟ್ಟುಹಿಡಿದು ಪ್ರತಿಭಟನೆಯಲ್ಲಿ ತೊಡಗಿದ್ದೇವೆ' ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೀರ್ತಿ ರಾಜ್ ಹೇಳಿದರು.