<p><strong>ತರೀಕೆರೆ</strong>: ಪಟ್ಟಣಕ್ಕೆ ಹೊಂದಿದ ಉಪ್ಪಾರ ಬಸವನಹಳ್ಳಿಯು ಪುರಸಭೆಗೆ ಸೇರಿ ಎರಡು ದಶಕಗಳು ಕಳೆದಿವೆ. ಆದರೆ, ಪುರಸಭೆಯ 2ನೇ ವಾರ್ಡ್ ಉಪ್ಪಾರ ಬಸವನಹಳ್ಳಿಯು ರಸ್ತೆ, ಚರಂಡಿ, ಕುಡಿಯುವ ನೀರು, ಸ್ಮಶಾನ, ನಿವೇಶನ ಹಕ್ಕು ಪತ್ರ, ವಸತಿ ಮತ್ತಿತರ ಮೂಲಸೌಕರ್ಯಗಳಿಂದ ಇನ್ನೂ ವಂಚಿತವಾಗಿವೆ.</p>.<p>ಇಲ್ಲಿಂದ ಪಟ್ಟಣವು ಕೇವಲ 300 ಮೀಟರ್ ದೂರದಲ್ಲಿದೆ. ನಡುವೆ ರೈಲ್ವೆ ಹಳಿ ಹಾದು ಹೋಗಿದೆ. ಹೀಗಾಗಿ ಜನರು 5 ಕಿ.ಮೀ. ಸುತ್ತು ಬಳಸಿ ಹೋಗಬೇಕು. ಅದಕ್ಕಾಗಿ ರೈಲ್ವೆ ಹಳಿಯ ಕೊಳಚೆ ನೀರು ಹರಿಯುವ ಸೇತುವೆಯನ್ನೇ ದಾರಿ ಮಾಡಿಕೊಂಡಿದ್ದಾರೆ. ಇಲ್ಲಿನ ಓಡಾಟದ ನರಕ ಯಾತನೆ ಹೇಳತೀರದು.</p>.<p>ಈ ವಾರ್ಡ್ಗೆ ಸಾರಿಗೆ ಸಂಪರ್ಕವೂ ಇಲ್ಲ. ವಿದ್ಯಾರ್ಥಿಗಳು ಸಮೀಪದ ಹಳಿಯೂರಿನ ಶಾಲೆಗೆ ಕಾಲು ದಾರಿಯಲ್ಲಿ ಹೋಗಬೇಕು. ಪಟ್ಟಣ ಸಂಪರ್ಕಿಸಲು ರೈಲ್ವೆ ಗೇಟ್ ವ್ಯವಸ್ಥೆ ಇಲ್ಲದ ಕಾರಣ, ಕೊಳಚೆ ನೀರು ಹರಿಯುವ ಕೆಳಸೇತುವೆಯ ಅವಲಂಬಿಸಬೇಕಾಗಿದೆ.</p>.<p>ವಾರ್ಡ್ನಲ್ಲಿ ಕಚ್ಚಾ ರಸ್ತೆಗಳೇ ಇದ್ದು ಅವು ಕೆಸರುಮಯವಾಗಿವೆ. ಸಿ.ಸಿ ರಸ್ತೆ ಹಾಗೂ ಚರಂಡಿಗಳಿಲ್ಲ. ದಿನನಿತ್ಯ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು , ವೃದ್ಧರು ಪರದಾಡುತ್ತಿದ್ದು, ಮಳೆಗಾಲದಲ್ಲಿ ಸರ್ಕಸ್ ಮಾಡಿ ಸಾಗಬೇಕು.</p>.<p>ಇಲ್ಲಿ ನೂರ ಐವತ್ತಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಕುಡಿಯುಲು ಶುದ್ಧ ನೀರಿನ ಘಟಕವಿಲ್ಲ. ಕೊಳವೆ ಬಾವಿ ನೀರನ್ನು ಕುಡಿಯಬೇಕಾಗಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಇಲ್ಲಿನ ನಿವಾಸಿ ಶ್ರೀನಿವಾಸ್ಒತ್ತಾಯಿಸುತ್ತಾರೆ.</p>.<p>ಸುತ್ತಲ ಕೆರೆಗಳ ಹಿನ್ನೀರು ನಿಲ್ಲುವುದರಿಂದ ಮಳೆಯ ನೀರು ಮನೆಗಳಿಗೆ ನುಗ್ಗುತ್ತದೆ. ಸ್ವಚ್ಛತೆ ಮರೀಚಿಕೆಯಾಗಿದೆ. ಸಮೀಪದಲ್ಲಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಅಂಗನವಾಡಿಗಳಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ.ಇಲ್ಲಿನ ಸ್ಮಶಾನ ಮತ್ತು ರಾಜಕಾಲುವೆ ಒತ್ತುವರಿಯಾಗಿರುವ ದೂರುಗಳಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತರೀಕೆರೆ</strong>: ಪಟ್ಟಣಕ್ಕೆ ಹೊಂದಿದ ಉಪ್ಪಾರ ಬಸವನಹಳ್ಳಿಯು ಪುರಸಭೆಗೆ ಸೇರಿ ಎರಡು ದಶಕಗಳು ಕಳೆದಿವೆ. ಆದರೆ, ಪುರಸಭೆಯ 2ನೇ ವಾರ್ಡ್ ಉಪ್ಪಾರ ಬಸವನಹಳ್ಳಿಯು ರಸ್ತೆ, ಚರಂಡಿ, ಕುಡಿಯುವ ನೀರು, ಸ್ಮಶಾನ, ನಿವೇಶನ ಹಕ್ಕು ಪತ್ರ, ವಸತಿ ಮತ್ತಿತರ ಮೂಲಸೌಕರ್ಯಗಳಿಂದ ಇನ್ನೂ ವಂಚಿತವಾಗಿವೆ.</p>.<p>ಇಲ್ಲಿಂದ ಪಟ್ಟಣವು ಕೇವಲ 300 ಮೀಟರ್ ದೂರದಲ್ಲಿದೆ. ನಡುವೆ ರೈಲ್ವೆ ಹಳಿ ಹಾದು ಹೋಗಿದೆ. ಹೀಗಾಗಿ ಜನರು 5 ಕಿ.ಮೀ. ಸುತ್ತು ಬಳಸಿ ಹೋಗಬೇಕು. ಅದಕ್ಕಾಗಿ ರೈಲ್ವೆ ಹಳಿಯ ಕೊಳಚೆ ನೀರು ಹರಿಯುವ ಸೇತುವೆಯನ್ನೇ ದಾರಿ ಮಾಡಿಕೊಂಡಿದ್ದಾರೆ. ಇಲ್ಲಿನ ಓಡಾಟದ ನರಕ ಯಾತನೆ ಹೇಳತೀರದು.</p>.<p>ಈ ವಾರ್ಡ್ಗೆ ಸಾರಿಗೆ ಸಂಪರ್ಕವೂ ಇಲ್ಲ. ವಿದ್ಯಾರ್ಥಿಗಳು ಸಮೀಪದ ಹಳಿಯೂರಿನ ಶಾಲೆಗೆ ಕಾಲು ದಾರಿಯಲ್ಲಿ ಹೋಗಬೇಕು. ಪಟ್ಟಣ ಸಂಪರ್ಕಿಸಲು ರೈಲ್ವೆ ಗೇಟ್ ವ್ಯವಸ್ಥೆ ಇಲ್ಲದ ಕಾರಣ, ಕೊಳಚೆ ನೀರು ಹರಿಯುವ ಕೆಳಸೇತುವೆಯ ಅವಲಂಬಿಸಬೇಕಾಗಿದೆ.</p>.<p>ವಾರ್ಡ್ನಲ್ಲಿ ಕಚ್ಚಾ ರಸ್ತೆಗಳೇ ಇದ್ದು ಅವು ಕೆಸರುಮಯವಾಗಿವೆ. ಸಿ.ಸಿ ರಸ್ತೆ ಹಾಗೂ ಚರಂಡಿಗಳಿಲ್ಲ. ದಿನನಿತ್ಯ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು , ವೃದ್ಧರು ಪರದಾಡುತ್ತಿದ್ದು, ಮಳೆಗಾಲದಲ್ಲಿ ಸರ್ಕಸ್ ಮಾಡಿ ಸಾಗಬೇಕು.</p>.<p>ಇಲ್ಲಿ ನೂರ ಐವತ್ತಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಕುಡಿಯುಲು ಶುದ್ಧ ನೀರಿನ ಘಟಕವಿಲ್ಲ. ಕೊಳವೆ ಬಾವಿ ನೀರನ್ನು ಕುಡಿಯಬೇಕಾಗಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಇಲ್ಲಿನ ನಿವಾಸಿ ಶ್ರೀನಿವಾಸ್ಒತ್ತಾಯಿಸುತ್ತಾರೆ.</p>.<p>ಸುತ್ತಲ ಕೆರೆಗಳ ಹಿನ್ನೀರು ನಿಲ್ಲುವುದರಿಂದ ಮಳೆಯ ನೀರು ಮನೆಗಳಿಗೆ ನುಗ್ಗುತ್ತದೆ. ಸ್ವಚ್ಛತೆ ಮರೀಚಿಕೆಯಾಗಿದೆ. ಸಮೀಪದಲ್ಲಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಅಂಗನವಾಡಿಗಳಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ.ಇಲ್ಲಿನ ಸ್ಮಶಾನ ಮತ್ತು ರಾಜಕಾಲುವೆ ಒತ್ತುವರಿಯಾಗಿರುವ ದೂರುಗಳಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>