<p><strong>ಚಿಕ್ಕಮಗಳೂರು:</strong> ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆಯಂತೆ ದೇಗುಲ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಈವರೆಗೆ ಮಾಡಿಸದವರು ಅರ್ಜಿ ಸಲ್ಲಿಸಿ ನೋಂದಾಯಿಸಬೇಕು ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಇಲ್ಲಿ ಮಂಗಳವಾರ ತಿಳಿಸಿದರು.</p>.<p>‘ನೋಂದಣಿ ಮಾಡಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ನೋಂದಾಯಿಸದಿದ್ದರೆ ನೋಟಿಸ್ ನೀಡಿ, ಕ್ರಮ ಜರುಗಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಅಧಿಸೂಚಿತ ದೇಗುಲಗಳನ್ನು ಹೊರತುಪಡಿಸಿ ಉಳಿದವನ್ನು ನೋಂದಣಿ ಮಾಡಿಸಬೇಕಿದೆ. ಪ್ರತಿಯೊಂದು ಖಾಸಗಿ ದೇವಾಲಯದ ನೋಂದಣಿಗೆ ತಹಶೀಲ್ದಾರ್ಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರತಿ ದೇಗುಲದ ಪೂರ್ವಾಪರ ಮಾಹಿತಿ ಸಂಗ್ರಹಿಸಿ ನೋಂದಣಿ ಆದೇಶ ಹೊರಡಿಸುವಂತೆ ಸೂಚನೆ ನೀಡಲಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿಗಳು ಲಭ್ಯ ಇವೆ’ ಎಂದು ಹೇಳಿದರು.</p>.<p>‘ನ.19ರಂದು ತಹಶೀಲ್ದಾರ್ಗಳಿಗೆ ಪತ್ರ ಬರೆಯಲಾಗಿದೆ. ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳ 5ರಂದು ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ’ ಎಂದರು.</p>.<p>‘ಮಜುರಾಯಿ ದೇಗುಲಗಳ ಒಡವೆ ಮೌಲ್ಯಮಾಪನದ ನಿರ್ದೇಶನ ಖಾಸಗಿ ದೇಗುಲಕ್ಕೂ ಅನ್ವಯವಾಗುತ್ತದೆ. ನೋಂದಣಿ ಸಂದರ್ಭದಲ್ಲಿ ದೇಗುಲದ ಚಿನ್ನ, ಬೆಳ್ಳಿ ಅಭರಣ ಮೊದಲಾದವುಗಳ ಮೌಲ್ಯಮಾಪನ ಮಾಡಿಸಿ ಅದರಂತೆ ಅರ್ಜಿಯಲ್ಲಿ ವಾಸ್ತವಿಕತೆ ದೃಢೀಕರಿಸಿಕೊಳ್ಳಲಾಗುವುದು. ಮೌಲ್ಯಮಾಪನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಿಸಲಾಗುತ್ತದೆ’ ಎಂದು ವಿವರಿಸಿದರು.</p>.<p>‘ನೋಂದಣಿ ಪ್ರಕ್ರಿಯೆ ನಂತರ ಪ್ರಮಾಣ ಪತ್ರ ನೀಡಲಾಗುವುದು. ಆ ಪ್ರಮಾಣ ಪತ್ರವನ್ನು ದೇಗುಲದಲ್ಲಿ ಪ್ರದರ್ಶಿಸಬೇಕು’ ಎಂದು ಮಾಹಿತಿ ನೀಡಿದರು.</p>.<p>‘ಮನೆ ಆವರಣದಲ್ಲಿ ಗುಡಿ ಕಟ್ಟಿ, ಹೊರಗಿನ ಭಕ್ತರಿಗೆ ದರ್ಶನಕ್ಕೆ ಅವಕಾಶ, ಪೂಜಾ ಕೈಂಕರ್ಯ ಇದ್ದರೆ ಅವರೂ ನೋಂದಣಿ ಮಾಡಿಸಬೇಕು. ಪ್ರತಿಯೊಂದು ದೇಗುಲವನ್ನು ನೋಂದಾಯಿಸುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ’ ಎಂದು ಉತ್ತರಿಸಿದರು.</p>.<p>‘ಖಾಸಗಿಯವರು (ಟ್ರಸ್ಟ್, ಸಮಿತಿ, ಮಂಡಳಿ...) ದೇಗುಲದ ಚಟುವಟಿಕೆಗಳನ್ನು ನಿರ್ವಹಿಸಿ ಮುನ್ನಡೆಸಿದರೆ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಏಕಸ್ವಾಮ್ಯ, ಹಣ, ಆಸ್ತಿ ದುರುಪಯೋಗ ಮೊದಲಾದ ದೂರುಗಳಿದ್ದರೆ ಸರ್ಕಾರ ಮಧ್ಯಪ್ರವೇಶಿಸುತ್ತದೆ’ ಎಂದು ತಿಳಿಸಿದರು.</p>.<p>‘ಪ್ರತಿಯೊಂದು ದೇವಾಲಯದ ಮಾಹಿತಿ ಕಲೆ ಹಾಕಲಾಗುವುದು. ಮೂಢನಂಬಿಕೆಗಳನ್ನು ಬಿತ್ತುವುದು. ದೇವಾಲಯದ ಆಸ್ತಿ ದುರುಪಯೋಗ ಮಾಡುವುದು ಕಂಡಬಂದರೆ ಕ್ರಮ ಜರುಗಿಸಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆಯಂತೆ ದೇಗುಲ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಈವರೆಗೆ ಮಾಡಿಸದವರು ಅರ್ಜಿ ಸಲ್ಲಿಸಿ ನೋಂದಾಯಿಸಬೇಕು ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಇಲ್ಲಿ ಮಂಗಳವಾರ ತಿಳಿಸಿದರು.</p>.<p>‘ನೋಂದಣಿ ಮಾಡಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ನೋಂದಾಯಿಸದಿದ್ದರೆ ನೋಟಿಸ್ ನೀಡಿ, ಕ್ರಮ ಜರುಗಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಅಧಿಸೂಚಿತ ದೇಗುಲಗಳನ್ನು ಹೊರತುಪಡಿಸಿ ಉಳಿದವನ್ನು ನೋಂದಣಿ ಮಾಡಿಸಬೇಕಿದೆ. ಪ್ರತಿಯೊಂದು ಖಾಸಗಿ ದೇವಾಲಯದ ನೋಂದಣಿಗೆ ತಹಶೀಲ್ದಾರ್ಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರತಿ ದೇಗುಲದ ಪೂರ್ವಾಪರ ಮಾಹಿತಿ ಸಂಗ್ರಹಿಸಿ ನೋಂದಣಿ ಆದೇಶ ಹೊರಡಿಸುವಂತೆ ಸೂಚನೆ ನೀಡಲಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿಗಳು ಲಭ್ಯ ಇವೆ’ ಎಂದು ಹೇಳಿದರು.</p>.<p>‘ನ.19ರಂದು ತಹಶೀಲ್ದಾರ್ಗಳಿಗೆ ಪತ್ರ ಬರೆಯಲಾಗಿದೆ. ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳ 5ರಂದು ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ’ ಎಂದರು.</p>.<p>‘ಮಜುರಾಯಿ ದೇಗುಲಗಳ ಒಡವೆ ಮೌಲ್ಯಮಾಪನದ ನಿರ್ದೇಶನ ಖಾಸಗಿ ದೇಗುಲಕ್ಕೂ ಅನ್ವಯವಾಗುತ್ತದೆ. ನೋಂದಣಿ ಸಂದರ್ಭದಲ್ಲಿ ದೇಗುಲದ ಚಿನ್ನ, ಬೆಳ್ಳಿ ಅಭರಣ ಮೊದಲಾದವುಗಳ ಮೌಲ್ಯಮಾಪನ ಮಾಡಿಸಿ ಅದರಂತೆ ಅರ್ಜಿಯಲ್ಲಿ ವಾಸ್ತವಿಕತೆ ದೃಢೀಕರಿಸಿಕೊಳ್ಳಲಾಗುವುದು. ಮೌಲ್ಯಮಾಪನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಿಸಲಾಗುತ್ತದೆ’ ಎಂದು ವಿವರಿಸಿದರು.</p>.<p>‘ನೋಂದಣಿ ಪ್ರಕ್ರಿಯೆ ನಂತರ ಪ್ರಮಾಣ ಪತ್ರ ನೀಡಲಾಗುವುದು. ಆ ಪ್ರಮಾಣ ಪತ್ರವನ್ನು ದೇಗುಲದಲ್ಲಿ ಪ್ರದರ್ಶಿಸಬೇಕು’ ಎಂದು ಮಾಹಿತಿ ನೀಡಿದರು.</p>.<p>‘ಮನೆ ಆವರಣದಲ್ಲಿ ಗುಡಿ ಕಟ್ಟಿ, ಹೊರಗಿನ ಭಕ್ತರಿಗೆ ದರ್ಶನಕ್ಕೆ ಅವಕಾಶ, ಪೂಜಾ ಕೈಂಕರ್ಯ ಇದ್ದರೆ ಅವರೂ ನೋಂದಣಿ ಮಾಡಿಸಬೇಕು. ಪ್ರತಿಯೊಂದು ದೇಗುಲವನ್ನು ನೋಂದಾಯಿಸುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ’ ಎಂದು ಉತ್ತರಿಸಿದರು.</p>.<p>‘ಖಾಸಗಿಯವರು (ಟ್ರಸ್ಟ್, ಸಮಿತಿ, ಮಂಡಳಿ...) ದೇಗುಲದ ಚಟುವಟಿಕೆಗಳನ್ನು ನಿರ್ವಹಿಸಿ ಮುನ್ನಡೆಸಿದರೆ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಏಕಸ್ವಾಮ್ಯ, ಹಣ, ಆಸ್ತಿ ದುರುಪಯೋಗ ಮೊದಲಾದ ದೂರುಗಳಿದ್ದರೆ ಸರ್ಕಾರ ಮಧ್ಯಪ್ರವೇಶಿಸುತ್ತದೆ’ ಎಂದು ತಿಳಿಸಿದರು.</p>.<p>‘ಪ್ರತಿಯೊಂದು ದೇವಾಲಯದ ಮಾಹಿತಿ ಕಲೆ ಹಾಕಲಾಗುವುದು. ಮೂಢನಂಬಿಕೆಗಳನ್ನು ಬಿತ್ತುವುದು. ದೇವಾಲಯದ ಆಸ್ತಿ ದುರುಪಯೋಗ ಮಾಡುವುದು ಕಂಡಬಂದರೆ ಕ್ರಮ ಜರುಗಿಸಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>