<p><strong>ಚಿಕ್ಕಮಗಳೂರು: </strong>ಜಿಲ್ಲೆಯ ಕಡೂರಿನ ಲಕ್ಷ್ಮೀಶನಗರ ನಿವಾಸಿ ಧರ್ಮ ಜಾಗರಣ ಸಮಿತಿ ಕಾರ್ಯಕರ್ತ ಡಾ.ಶಶಿಧರ ಚಿಂದಿಗೆರೆ ಜಯಣ್ಣ ಅವರ ಕಾರಿನ ಮೇಲೆ ಜಿಹಾದ್, ಕೊಲೆ ಬೆದರಿಕೆ ಬರಹ ಗೀಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಾಲಕರನ್ನು ಪತ್ತೆ ಮಾಡಿದ್ದಾರೆ.</p>.<p>ಕಡೂರು ಠಾಣೆ ಪಿಎಸ್ಐ ಎನ್.ಕೆ.ರಮ್ಯಾ ಮತ್ತು ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದ ದಾಖಲಾದ 48 ಗಂಟೆಯೊಳಗೆ ಪತ್ತೆ ಹಚ್ಚಿದ್ದಾರೆ.</p>.<p>‘ರಸ್ತೆ ಬದಿ ನಿಲ್ಲಿಸಿರುವ ಕಾರು ಚೆನ್ನಾಗಿದೆ. ನಾವು ಇಂಥ ಕಾರು ತೆಗೆದುಕೊಳ್ಳಲು ಆಗಲ್ಲ. ಕಾರು ತೆಗೆದುಕೊಳ್ಳದಿದ್ದರೂ ಪರವಾಗಿಲ್ಲ, ಈ ಕಾರನ್ನು ಹಾಳುಗೆಡವೋಣ ಎಂದು ಬಾಲಕರು ಕೃತ್ಯ ಎಸಗಿರುವುದು ಕಂಡು ಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>24ರಂದು ಕಡೂರಿನ ಲಕ್ಷ್ಮೀಶನಗರ ಶಶಿಧರ್ ಅವರು ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರಗಳ ಗಾಳಿ ಬಿಟ್ಟು, ಬಾನೆಟ್, ಗಾಜು, ಎಡ ಬಾಗಿಲ ಮೇಲೆ ಜಿಹಾದ್, ಕೊಲೆ ಬೆದರಿಕೆ ಬರಹ ಗೀಚಿದ್ದಾರೆ ಎಂದು ದೂರು ಕಡೂರು ಠಾಣೆಯಲ್ಲಿ ದೂರು ನೀಡಿದ್ದರು.</p>.<p>ಐಪಿಸಿ 427 (ಸಾರ್ವಜನಿಕರ ಆಸ್ತಿಗೆ ನಷ್ಟು ಉಂಟುಮಾಡಿದ), 505(2) – ( ಜಾತಿ, ಧರ್ಮ ಹಾಗೂ ಎರಡು ಗುಂಪಿನ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆ ಪ್ರಚುರಪಡಿಸಿದ), 506 (ಜೀವ ಬೆದರಿಕೆ) ಪ್ರಕರಣ ದಾಖಲಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಜಿಲ್ಲೆಯ ಕಡೂರಿನ ಲಕ್ಷ್ಮೀಶನಗರ ನಿವಾಸಿ ಧರ್ಮ ಜಾಗರಣ ಸಮಿತಿ ಕಾರ್ಯಕರ್ತ ಡಾ.ಶಶಿಧರ ಚಿಂದಿಗೆರೆ ಜಯಣ್ಣ ಅವರ ಕಾರಿನ ಮೇಲೆ ಜಿಹಾದ್, ಕೊಲೆ ಬೆದರಿಕೆ ಬರಹ ಗೀಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಾಲಕರನ್ನು ಪತ್ತೆ ಮಾಡಿದ್ದಾರೆ.</p>.<p>ಕಡೂರು ಠಾಣೆ ಪಿಎಸ್ಐ ಎನ್.ಕೆ.ರಮ್ಯಾ ಮತ್ತು ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದ ದಾಖಲಾದ 48 ಗಂಟೆಯೊಳಗೆ ಪತ್ತೆ ಹಚ್ಚಿದ್ದಾರೆ.</p>.<p>‘ರಸ್ತೆ ಬದಿ ನಿಲ್ಲಿಸಿರುವ ಕಾರು ಚೆನ್ನಾಗಿದೆ. ನಾವು ಇಂಥ ಕಾರು ತೆಗೆದುಕೊಳ್ಳಲು ಆಗಲ್ಲ. ಕಾರು ತೆಗೆದುಕೊಳ್ಳದಿದ್ದರೂ ಪರವಾಗಿಲ್ಲ, ಈ ಕಾರನ್ನು ಹಾಳುಗೆಡವೋಣ ಎಂದು ಬಾಲಕರು ಕೃತ್ಯ ಎಸಗಿರುವುದು ಕಂಡು ಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>24ರಂದು ಕಡೂರಿನ ಲಕ್ಷ್ಮೀಶನಗರ ಶಶಿಧರ್ ಅವರು ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರಗಳ ಗಾಳಿ ಬಿಟ್ಟು, ಬಾನೆಟ್, ಗಾಜು, ಎಡ ಬಾಗಿಲ ಮೇಲೆ ಜಿಹಾದ್, ಕೊಲೆ ಬೆದರಿಕೆ ಬರಹ ಗೀಚಿದ್ದಾರೆ ಎಂದು ದೂರು ಕಡೂರು ಠಾಣೆಯಲ್ಲಿ ದೂರು ನೀಡಿದ್ದರು.</p>.<p>ಐಪಿಸಿ 427 (ಸಾರ್ವಜನಿಕರ ಆಸ್ತಿಗೆ ನಷ್ಟು ಉಂಟುಮಾಡಿದ), 505(2) – ( ಜಾತಿ, ಧರ್ಮ ಹಾಗೂ ಎರಡು ಗುಂಪಿನ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆ ಪ್ರಚುರಪಡಿಸಿದ), 506 (ಜೀವ ಬೆದರಿಕೆ) ಪ್ರಕರಣ ದಾಖಲಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>