ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್ನಿಂದ ಇಬ್ಬರು ಮೃತಪಟ್ಟಿದ್ದು, ಒಟ್ಟುಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿದೆ. ಭಾನುವಾರ 41 ಮಂದಿಗೆ ಕೋವಿಡ್ ದೃಢಪಟ್ಟಿದೆ. 6 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೊಪ್ಪ ತಾಲ್ಲೂಕಿನ 70 ವರ್ಷದ ವೃದ್ಧೆ, ಚಿಕ್ಕಮಗಳೂರಿನ 70 ವರ್ಷದ ವೃದ್ಧ ಮೃತಪಟ್ಟವರು. ತಾಲ್ಲೂಕುವಾರು ಚಿಕ್ಕಮಗಳೂರು–18, ಶೃಂಗೇರಿ– 11, ತರೀಕೆರೆ , ಕಡೂರು, ಎನ್.ಆರ್.ಪುರ, ಕೊಪ್ಪ ತಲಾ ಮೂವರಿಗೆ ಪತ್ತೆಯಾಗಿದೆ.