<p><strong>ಬೀರೂರು(ಕಡೂರು):</strong> ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಸಣ್ಣಪುಟ್ಟ ಕೆಲಸ ಮಾಡಿ, ಜೀವನ ಸಾಗಿಸುವ ಜತೆಗೆ ರೈಲಿಗೆ ಸಿಲುಕಿ ಮೃತಪಟ್ಟ ನೂರಾರು ಶವಗಳಿಗೆ ಮುಕ್ತಿ ಕಲ್ಪಿಸುವಲ್ಲಿ ನೆರವಾಗುತ್ತಿದ್ದ ಅಂಜನಿ ಅವರಿಗೆ ಅಸ್ವಸ್ಥತೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಸಹೃದಯಿಗಳ ನೆರವಿನಿಂದ ಬುಧವಾರ ಕೆ.ಆರ್.ಪೇಟೆಯಲ್ಲಿರುವ ಮಾತೃಭೂಮಿ ವೃದ್ಧಾಶ್ರಮಕ್ಕೆ ಅವರನ್ನು ಕಳುಹಿಸಿ ಕೊಡಲಾಯಿತು. </p>.<p>ರೈಲ್ವೆ ನಿಲ್ದಾಣವನ್ನೇ ತನ್ನ ನಿವಾಸ ಮಾಡಿಕೊಂಡು, ರೈಲ್ವೆ ಪೊಲೀಸರ ಸಹಾಯದಿಂದ ಇಲ್ಲೇ ಬದುಕು ನಡೆಸುತ್ತಿದ್ದರು. ಬೀರೂರು ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ರೈಲಿಗೆ ಸಿಲುಕಿ ಮೃತಪಟ್ಟ ಅನಾಥ ಹೆಣಗಳನ್ನು ಹಳಿಯಿಂದ ಎತ್ತಿ ತಂದು ಮರಣೋತ್ತರ ಪರೀಕ್ಷೆವರೆಗೆ ಸಹಕಾರ ನೀಡುತ್ತಿದ್ದರು.</p>.<p>ಅಂಜನಿ ಅವರು ಅನುಭವಿಸುತ್ತಿರುವ ಮಾನಸಿಕ ಅಸ್ವಸ್ಥತೆಯನ್ನು ಗಮನಿಸಿದ ಪುರಸಭೆ ಮಾಜಿ ಅಧ್ಯಕ್ಷೆ, ಇನ್ನರ್ವೀಲ್ ಅಧ್ಯಕ್ಷೆ ಸವಿತಾ ರಮೇಶ್ ಹಾಗೂ ತರೀಕೆರೆಯ ಸಮಾಜ ಸೇವಕ ಮಂಜುನಾಥ್ ಅವರ ಗಮನಕ್ಕೆ ತಂದು ಅವರ ಸಹಕಾರದಲ್ಲಿ ಕೆ.ಆರ್.ಪೇಟೆ ಮಾತೃಭೂಮಿ ಅನಾಥಾಶ್ರಮಕ್ಕೆ ಕಳುಹಿಸಿಕೊಟ್ಟರು.</p>.<p>ಬಡವನಾಗಿದ್ದರೂ ಯಾರನ್ನೂ ಬೇಡದೇ–ಕಾಡದೇ ಯಾರಾದರೂ ಕೊಟ್ಟರೆ ಮಾತ್ರ ತೆಗೆದುಕೊಂಡು ಜೀವನ ಸಾಗಿಸುತ್ತಿದ್ದ ಅಂಜನಿ, ರೈಲ್ವೆ ಇಲಾಖೆಗೆ ನೀಡುತ್ತಿದ್ದ ಸಹಕಾರವನ್ನು ಮರೆಯುವಂತಿಲ್ಲ ಎನ್ನುತ್ತಾರೆ ರೈಲ್ವೆ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಾದ ವೆಂಕಟೇಶ್ ಮತ್ತು ನವೀನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀರೂರು(ಕಡೂರು):</strong> ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಸಣ್ಣಪುಟ್ಟ ಕೆಲಸ ಮಾಡಿ, ಜೀವನ ಸಾಗಿಸುವ ಜತೆಗೆ ರೈಲಿಗೆ ಸಿಲುಕಿ ಮೃತಪಟ್ಟ ನೂರಾರು ಶವಗಳಿಗೆ ಮುಕ್ತಿ ಕಲ್ಪಿಸುವಲ್ಲಿ ನೆರವಾಗುತ್ತಿದ್ದ ಅಂಜನಿ ಅವರಿಗೆ ಅಸ್ವಸ್ಥತೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಸಹೃದಯಿಗಳ ನೆರವಿನಿಂದ ಬುಧವಾರ ಕೆ.ಆರ್.ಪೇಟೆಯಲ್ಲಿರುವ ಮಾತೃಭೂಮಿ ವೃದ್ಧಾಶ್ರಮಕ್ಕೆ ಅವರನ್ನು ಕಳುಹಿಸಿ ಕೊಡಲಾಯಿತು. </p>.<p>ರೈಲ್ವೆ ನಿಲ್ದಾಣವನ್ನೇ ತನ್ನ ನಿವಾಸ ಮಾಡಿಕೊಂಡು, ರೈಲ್ವೆ ಪೊಲೀಸರ ಸಹಾಯದಿಂದ ಇಲ್ಲೇ ಬದುಕು ನಡೆಸುತ್ತಿದ್ದರು. ಬೀರೂರು ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ರೈಲಿಗೆ ಸಿಲುಕಿ ಮೃತಪಟ್ಟ ಅನಾಥ ಹೆಣಗಳನ್ನು ಹಳಿಯಿಂದ ಎತ್ತಿ ತಂದು ಮರಣೋತ್ತರ ಪರೀಕ್ಷೆವರೆಗೆ ಸಹಕಾರ ನೀಡುತ್ತಿದ್ದರು.</p>.<p>ಅಂಜನಿ ಅವರು ಅನುಭವಿಸುತ್ತಿರುವ ಮಾನಸಿಕ ಅಸ್ವಸ್ಥತೆಯನ್ನು ಗಮನಿಸಿದ ಪುರಸಭೆ ಮಾಜಿ ಅಧ್ಯಕ್ಷೆ, ಇನ್ನರ್ವೀಲ್ ಅಧ್ಯಕ್ಷೆ ಸವಿತಾ ರಮೇಶ್ ಹಾಗೂ ತರೀಕೆರೆಯ ಸಮಾಜ ಸೇವಕ ಮಂಜುನಾಥ್ ಅವರ ಗಮನಕ್ಕೆ ತಂದು ಅವರ ಸಹಕಾರದಲ್ಲಿ ಕೆ.ಆರ್.ಪೇಟೆ ಮಾತೃಭೂಮಿ ಅನಾಥಾಶ್ರಮಕ್ಕೆ ಕಳುಹಿಸಿಕೊಟ್ಟರು.</p>.<p>ಬಡವನಾಗಿದ್ದರೂ ಯಾರನ್ನೂ ಬೇಡದೇ–ಕಾಡದೇ ಯಾರಾದರೂ ಕೊಟ್ಟರೆ ಮಾತ್ರ ತೆಗೆದುಕೊಂಡು ಜೀವನ ಸಾಗಿಸುತ್ತಿದ್ದ ಅಂಜನಿ, ರೈಲ್ವೆ ಇಲಾಖೆಗೆ ನೀಡುತ್ತಿದ್ದ ಸಹಕಾರವನ್ನು ಮರೆಯುವಂತಿಲ್ಲ ಎನ್ನುತ್ತಾರೆ ರೈಲ್ವೆ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಾದ ವೆಂಕಟೇಶ್ ಮತ್ತು ನವೀನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>