<p><strong>ತರೀಕೆರೆ:</strong> ವಾರದ ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹45 ಇದ್ದ ಹಸಿಮೆಣಸಿಕಾಯಿ ದರವು ₹25ಕ್ಕೆ ಕುಸಿದಿದೆ. ಸಾಂಬಾರು ಸೌತೆಕಾಯಿ, ತೊಂಡೆಕಾಯಿ, ಕೋಸು, ಹಾಗಲಕಾಯಿ, ನುಗ್ಗೆಕಾಯಿ, ಜವಳಿಕಾಯಿ, ಹುರುಳಿಕಾಯಿ, ಮೂಲಂಗಿ ದರ ಸ್ಥಿರವಾಗಿದೆ.</p>.<p>₹30 ಇದ್ದ ಹೀರೆಕಾಯಿ ದರ ₹20ಕ್ಕೆ , ಟೊಮೊಟೂ ₹40ರಿಂದ ₹25ಕ್ಕೆ ಇಳಿದಿದೆ. ತರಕಾರಿ ತುಸು ಅಗ್ಗವಾದರು ಸೊಪ್ಪು ಸ್ವಲ್ಪ ದುಬಾರಿಯಾಗಿದೆ. ಕೊತ್ತಂಬರಿ, ಪುದಿನ ಹಾಗೂ ಮೆಂತೆ ಸೊಪ್ಪು ಕಟ್ಟಿಗೆ ₹4ರಿಂದ₹5ಕ್ಕೆ ಏರಿಕೆಯಾಗಿದೆ.</p>.<p>ಬ್ಯಾಡಗಿ ಮೆಣಸಿನಕಾಯಿ ₹220 ರಿಂದ ₹250ಕ್ಕೆ ಏರಿಕೆಯಾಗಿದೆ. ಏಲಕ್ಕಿ ಬಾಳೆ ಕೆ.ಜಿಗೆ ₹ 35 ರಿಂದ 25ಕ್ಕೆ ಇಳಿದಿದರೆ, ಸೇಲಂ (ಪೂಜೆ) ₹ 20ರಿಂದ ₹10ಕ್ಕೆ, ಪಚ್ಚೆ ಬಾಳೆ ₹35 ರಿಂದ ₹ 25ಕ್ಕೆ ಇಳಿದಿವೆ.</p>.<p>ಬಯಲುಸೀಮೆ ಅಜ್ಜಂಪುರ, ಕಡೂರು, ಬೀರೂರು, ಸಖರಾಯಪಟ್ಟಣ ಭಾಗದಲ್ಲಿ ಮುಂಗಾರು ಶುರುವಾಗಿದ್ದು, ಗುಣಮಟ್ಟದ ತರಕಾರಿ ಮಾರುಕಟ್ಟೆಗೆ ಪೊರೈಕೆಯಾಗುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿ ಇರ್ಫಾನ್.</p>.<p>ಒಟ್ಟಾರೆ ತರಕಾರಿ ಧಾರಣೆ ಕುಸಿದಿದೆ. ಮಳೆ ಕಾರಣ ತರಕಾರಿಯ ತಾಜಾತನವೂ ಇಲ್ಲ ಎಂದು ಗ್ರಾಹಕಿ ವಂದನಾ ತಿಳಿಸಿದರು.</p>.<p class="Briefhead"><strong>ಗ್ರಾಹಕರು ನಿರಾಳ</strong></p>.<p>ಕಡೂರು: ಇಲ್ಲಿನ ಮಾರುಕಟ್ಟೆಯಲ್ಲಿ ವಾರದಿಂದ ತರಕಾರಿ ಬೆಲೆಗಳು ತುಸು ಇಳಿದಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ₹100 ಇದ್ದ ಟೊಮೆಟೊ ಬೆಲೆ ₹25 ರಿಂದ ₹30 ಇಳಿದಿದೆ.</p>.<p>ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ಬೀನ್ಸ್ ₹40, ಮೆಣಸಿನಕಾಯಿ ₹30, ಕೋಸು ₹40, ಹೂ ಕೋಸು ₹35, ನುಗ್ಗೆಕಾಯಿ ₹40,ಬೆಂಡೆಕಾಯಿ ₹30ಕ್ಕೆ ಮಾರಾಟವಾಗಿದೆ.</p>.<p>₹20ಕ್ಕೆ 3 ಕೆ.ಜಿ. ಇದ್ದ ಈರುಳ್ಳಿ ದರವು ಕೆ.ಜಿ.ಗೆ ₹15 ರಿಂದ ₹20 ಏರಿಕೆಯಾಗಿದ್ದು, ರೈತರಿಗೆ ಆಶಾದಾಯಕ ಎಂದು ಕಡೂರು ಎಪಿಎಂಸಿ ಸಗಟು ತರಕಾರಿ ವರ್ತಕ ಎಚ್.ಆರ್.ದೇವರಾಜ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತರೀಕೆರೆ:</strong> ವಾರದ ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹45 ಇದ್ದ ಹಸಿಮೆಣಸಿಕಾಯಿ ದರವು ₹25ಕ್ಕೆ ಕುಸಿದಿದೆ. ಸಾಂಬಾರು ಸೌತೆಕಾಯಿ, ತೊಂಡೆಕಾಯಿ, ಕೋಸು, ಹಾಗಲಕಾಯಿ, ನುಗ್ಗೆಕಾಯಿ, ಜವಳಿಕಾಯಿ, ಹುರುಳಿಕಾಯಿ, ಮೂಲಂಗಿ ದರ ಸ್ಥಿರವಾಗಿದೆ.</p>.<p>₹30 ಇದ್ದ ಹೀರೆಕಾಯಿ ದರ ₹20ಕ್ಕೆ , ಟೊಮೊಟೂ ₹40ರಿಂದ ₹25ಕ್ಕೆ ಇಳಿದಿದೆ. ತರಕಾರಿ ತುಸು ಅಗ್ಗವಾದರು ಸೊಪ್ಪು ಸ್ವಲ್ಪ ದುಬಾರಿಯಾಗಿದೆ. ಕೊತ್ತಂಬರಿ, ಪುದಿನ ಹಾಗೂ ಮೆಂತೆ ಸೊಪ್ಪು ಕಟ್ಟಿಗೆ ₹4ರಿಂದ₹5ಕ್ಕೆ ಏರಿಕೆಯಾಗಿದೆ.</p>.<p>ಬ್ಯಾಡಗಿ ಮೆಣಸಿನಕಾಯಿ ₹220 ರಿಂದ ₹250ಕ್ಕೆ ಏರಿಕೆಯಾಗಿದೆ. ಏಲಕ್ಕಿ ಬಾಳೆ ಕೆ.ಜಿಗೆ ₹ 35 ರಿಂದ 25ಕ್ಕೆ ಇಳಿದಿದರೆ, ಸೇಲಂ (ಪೂಜೆ) ₹ 20ರಿಂದ ₹10ಕ್ಕೆ, ಪಚ್ಚೆ ಬಾಳೆ ₹35 ರಿಂದ ₹ 25ಕ್ಕೆ ಇಳಿದಿವೆ.</p>.<p>ಬಯಲುಸೀಮೆ ಅಜ್ಜಂಪುರ, ಕಡೂರು, ಬೀರೂರು, ಸಖರಾಯಪಟ್ಟಣ ಭಾಗದಲ್ಲಿ ಮುಂಗಾರು ಶುರುವಾಗಿದ್ದು, ಗುಣಮಟ್ಟದ ತರಕಾರಿ ಮಾರುಕಟ್ಟೆಗೆ ಪೊರೈಕೆಯಾಗುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿ ಇರ್ಫಾನ್.</p>.<p>ಒಟ್ಟಾರೆ ತರಕಾರಿ ಧಾರಣೆ ಕುಸಿದಿದೆ. ಮಳೆ ಕಾರಣ ತರಕಾರಿಯ ತಾಜಾತನವೂ ಇಲ್ಲ ಎಂದು ಗ್ರಾಹಕಿ ವಂದನಾ ತಿಳಿಸಿದರು.</p>.<p class="Briefhead"><strong>ಗ್ರಾಹಕರು ನಿರಾಳ</strong></p>.<p>ಕಡೂರು: ಇಲ್ಲಿನ ಮಾರುಕಟ್ಟೆಯಲ್ಲಿ ವಾರದಿಂದ ತರಕಾರಿ ಬೆಲೆಗಳು ತುಸು ಇಳಿದಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ₹100 ಇದ್ದ ಟೊಮೆಟೊ ಬೆಲೆ ₹25 ರಿಂದ ₹30 ಇಳಿದಿದೆ.</p>.<p>ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ಬೀನ್ಸ್ ₹40, ಮೆಣಸಿನಕಾಯಿ ₹30, ಕೋಸು ₹40, ಹೂ ಕೋಸು ₹35, ನುಗ್ಗೆಕಾಯಿ ₹40,ಬೆಂಡೆಕಾಯಿ ₹30ಕ್ಕೆ ಮಾರಾಟವಾಗಿದೆ.</p>.<p>₹20ಕ್ಕೆ 3 ಕೆ.ಜಿ. ಇದ್ದ ಈರುಳ್ಳಿ ದರವು ಕೆ.ಜಿ.ಗೆ ₹15 ರಿಂದ ₹20 ಏರಿಕೆಯಾಗಿದ್ದು, ರೈತರಿಗೆ ಆಶಾದಾಯಕ ಎಂದು ಕಡೂರು ಎಪಿಎಂಸಿ ಸಗಟು ತರಕಾರಿ ವರ್ತಕ ಎಚ್.ಆರ್.ದೇವರಾಜ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>